ಬ್ರೇಕಿಂಗ್ ನ್ಯೂಸ್
27-12-20 10:51 pm Mangaluru Correspondent ಕರಾವಳಿ
ಮಂಗಳೂರು, ಡಿ.27: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಮಧ್ಯಾಹ್ನ ಹೈ ಎಲರ್ಟ್ ಆಗಿತ್ತು. ನಿಗೂಢ ವಸ್ತುವೊಂದು ಆಕಾಶ ಮಾರ್ಗದಲ್ಲಿ ಹಳೆ ಏರ್ಪೋರ್ಟ್ ಆವರಣದಲ್ಲಿ ಬಂದು ಬಿದ್ದಿದ್ದು ಅಲ್ಲಿನ ಭದ್ರತಾ ಸಿಬಂದಿಯನ್ನು ಚಕಿತರನ್ನಾಗಿಸಿತ್ತು.
ನಿಗೂಢ ವಸ್ತು ಬರುತ್ತಲೇ ಸಿಐಎಸ್ಎಫ್ ಭದ್ರತಾ ಸಿಬಂದಿ ಹೈ ಎಲರ್ಟ್ ಆಗಿದ್ದರು. ಯಾವುದೇ ಕ್ಷಣವನ್ನು ಎದುರಿಸಲು ಸಜ್ಜಾಗಿದ್ದರು. ನೀಲ ಬಣ್ಣದ ಬೆಳಕು ಬೀರುತ್ತಿದ್ದ ಸಣ್ಣ ರೀತಿಯ ವಸ್ತು ಹಳೆ ಏರ್ಪೋರ್ಟ್ ಆವರಣದಲ್ಲಿ ಬಂದು ಬಿದ್ದಿತ್ತು. ವಸ್ತು ಬಿದ್ದ ಬಳಿಕವೂ ಮಿನುಗುತ್ತಲೇ ಇತ್ತು. ಹೀಗೆ ಮಿನುಗುತ್ತಿದ್ದುದೇ ಅಲ್ಲಿನ ಭದ್ರತಾ ಪಡೆಗಳ ಚಿಂತೆಗೆ ಕಾರಣವಾಗಿತ್ತು. ಕಳೆದ ವರ್ಷ ಆದಿತ್ಯ ರಾವ್ ಎಂಬಾತ ಸಜೀವ ಬಾಂಬನ್ನೇ ಇಟ್ಟಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಇದು ಮತ್ತೊಂದು ರೀತಿಯ ಬಾಂಬ್ ಆಗಿದ್ದಿರಲೂಬಹುದು ಎಂಬ ಅನುಮಾನ, ಭಯ ಭದ್ರತಾ ಸಿಬಂದಿಯನ್ನು ಕಾಡಿತ್ತು. ಆದರೂ, ವಿಷಯ ಹೊರಗಿನ ಮಂದಿಗೆ ಗೊತ್ತಾಗದ ರೀತಿ ಸಿಐಎಸ್ಎಫ್ ಕಾರ್ಯಾಚರಣೆ ನಡೆಸಿತ್ತು.
ಹಳೆ ಏರ್ಪೋರ್ಟ್ ಆವರಣದಲ್ಲಿ ನಿಗೂಢ ವಸ್ತು ಬಂದು ಬಿದ್ದ ಜಾಗಕ್ಕೆ ನಿಧಾನಕ್ಕೆ ತೆರಳಿದ್ದರು. ಸ್ಥಳಕ್ಕೆ ತೆರಳಿ ನೋಡಿದಾಗ, ಆಟಿಕೆ ರೀತಿಯ ಹೆಲಿಕಾಪ್ಟರ್ ಅಲ್ಲಿ ಬಿದ್ದಿತ್ತು. ಆದರೂ ನೀಲ ಬಣ್ಣದ ಲೈಟ್ ಅದರಲ್ಲಿ ಮಿನುಗುತ್ತಲೇ ಇತ್ತು. ಸಿಐಎಸ್ಎಫ್ ವಿಭಾಗದ ತಜ್ಞ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕೊನೆಗೆ, ಅದು ಬರೀಯ ಹೆಲಿಕಾಪ್ಟರ್ ಆಟಿಕೆ ಎಂಬುದಾಗಿ ನಿರ್ಧಾರಕ್ಕೆ ಬಂದರು. ರಿಮೋಟ್ ಕಂಟ್ರೋಲ್ ಮೂಲಕ ಚಾಲನೆಯಾಗುವ ಹೆಲಿಕಾಪ್ಟರ್ ಅದಾಗಿತ್ತು.
ಹಳೆ ಏರ್ಪೋರ್ಟ್ ಬಳಿ ಆಸುಪಾಸಿನಲ್ಲಿ ಒಂದಷ್ಟು ಮನೆಗಳು ಇವೆ. ಅಪಾರ್ಟ್ಮೆಂಟ್ ಕೂಡ ಇದೆ. ಅಲ್ಲಿನ ಮಕ್ಕಳು ರಿಮೋಟ್ ಆಧರಿತ ಹೆಲಿಕಾಪ್ಟರ್ ಅನ್ನು ಆಕಾಶಕ್ಕೆ ಬಿಟ್ಟಿದ್ದರು. ಆದರೆ, ಆಕಾಶಕ್ಕೆ ಹಾರಿದ ಹೆಲಿಕಾಪ್ಟರ್ ಹಳೆ ಏರ್ಪೋರ್ಟ್ ಕಡೆಗೆ ಸಾಗುತ್ತಾ ಅಲ್ಲಿ ರಿಮೋಟ್ ನಿಯಂತ್ರಣಕ್ಕೆ ಸಿಗದೆ ನೆಲಕ್ಕೆ ಬಿದ್ದಿದೆ. ಆವರಣದಲ್ಲಿ ಬಿದ್ದ ರೀತಿ ಮಾತ್ರ ಭದ್ರತಾ ಸಿಬಂದಿಯನ್ನು ದಂಗು ಬಡಿಸಿತ್ತು.
Strange item that was found outside the Mangalore International Airport created panic among security personals and public. Later it was found that it was Helicopter Toy that had fallen accidentally when some children's were playing who reside nearby airport.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm