ಬ್ರೇಕಿಂಗ್ ನ್ಯೂಸ್
05-01-21 12:44 pm Mangalore Correspondent ಕರಾವಳಿ
ಮಂಗಳೂರು, ಜ.5: ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಮಗುವನ್ನು ಕೈಯಲ್ಲಿ ಹಿಡಿದು ನದಿಯಲ್ಲಿ ಮುಳುಗಿದ್ದನ್ನು ಎಲ್ಲರೂ ನೋಡಿರುತ್ತೀರಿ. ಅಂಥದ್ದೇ ನೈಜ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಮಂಗಳೂರಿನ ಸಸಿಹಿತ್ಲು ಬಳಿ ಶಾಂಭವಿ ನದಿ ಸಮುದ್ರ ಸೇರುವಲ್ಲಿ ಡಿ.31ರಂದು ದುರಂತ ನಡೆದಿತ್ತು.
ಇಬ್ಬರು ಮಕ್ಕಳ ಜೊತೆ ದಂಪತಿ ನದಿಯಲ್ಲಿ ನೀರಾಟ ಆಡುತ್ತಿದ್ದಾಗ ಸಮುದ್ರದಲ್ಲಿ ನೀರಿನ ಏರಿಕೆಯಾಗಿ ಎಲ್ಲರೂ ಮುಳುಗಿದ್ದರು. ಈ ವೇಳೆ ದಂಪತಿ ಮತ್ತು ಮಕ್ಕಳಿಗೆ ನೀರಿನಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ನದಿ ದಡದಲ್ಲೇ ಇದ್ದರೂ, ನೀರಿನ ಮಧ್ಯೆ ವಿಲ ವಿಲ ಒದ್ದಾಡುವಂತಾಗಿತ್ತು. ಮಕ್ಕಳು ಮುಳುಗುತ್ತಿರುವುದನ್ನು ಕಂಡ ಜಯರಾಮ ಗೌಡ, ಇಬ್ಬರು ಮಕ್ಕಳನ್ನೂ ಕೈಯಲ್ಲಿ ಮೇಲೆ ಹಿಡಿದು ತಾವು ನದಿ ತಳದಲ್ಲಿ ನಿಂತಿದ್ದರು. ಮಕ್ಕಳು ಮತ್ತು ತಾಯಿ ಬೊಬ್ಬಿಡುತ್ತಿರುವುದನ್ನು ಕೇಳಿದ, ಅಲ್ಲಿಯೇ ಸ್ವಲ್ಪ ದೂರದಲ್ಲಿ ಇದ್ದ ಮಂತ್ರ ಸರ್ಫಿಂಗ್ ಕ್ಲಬ್ ಸದಸ್ಯರು ರಕ್ಷಣೆಗೆ ಧಾವಿಸಿದ್ದರು.
ಕೂಡಲೇ ಬೋಟ್ ಹಿಡಿದು ರಕ್ಷಣೆಗೆ ಧಾವಿಸಿದ ಮಂತ್ರ ಸರ್ಫಿಂಗ್ ಕ್ಲಬ್ ಸದಸ್ಯ ಶ್ಯಾಮ್, ಜಯರಾಮ ಗೌಡರ ಕೈಯಲ್ಲಿದ್ದ ಇಬ್ಬರು ಮಕ್ಕಳನ್ನು ಮೊದಲು ರಕ್ಷಣೆ ಮಾಡಿದ್ದರು. ಆಬಳಿಕ ಮಹಿಳೆಯನ್ನು ಬೋಟಿಗೆ ಎಳೆಯಲು ಭಾರೀ ಶ್ರಮ ಪಟ್ಟಿದ್ದಾರೆ. ಧಡೂತಿ ದೇಹದ ಮಹಿಳೆಯಾಗಿದ್ದರಿಂದ ಅವರನ್ನು ಬೋಟಿಗೆ ಎಳೆಯುವುದು ಇಬ್ಬರಿದ್ದ ತಂಡಕ್ಕೆ ಸುಲಭದಲ್ಲಿ ಸಾಧ್ಯವಾಗಲಿಲ್ಲ. ತಾಯಿ, ಮಕ್ಕಳನ್ನು ರಕ್ಷಣೆ ಮಾಡುವಾಗ ಹತ್ತು ನಿಮಿಷ ಕಳೆದಿದ್ದು, ಈ ವೇಳೆ ಜಯರಾಮ ಗೌಡ ನೀರಿನಲ್ಲಿ ಮುಳುಗಿದ್ದಾರೆ.
ಮೊದಲೇ ನದಿ ನೀರಿನಲ್ಲಿ ಮುಳುಗಿದ್ದ ಜಯರಾಮ ಗೌಡ, ಮಕ್ಕಳನ್ನು ಮೇಲಕ್ಕೆ ಹಿಡಿದೇ ಪ್ರಾಣ ಬಿಟ್ಟಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಮಗುವನ್ನು ಹಿಡಿದುಕೊಂಡೇ ತೇಲಿಕೊಂಡು ಹೋದ ರೀತಿ ಜಯರಾಮ ಗೌಡ ಪ್ರಾಣ ಬಿಟ್ಟಿದ್ದು ನೆನಪಿಸುವಂತೆ ಅಲ್ಲಿನ ವಿಡಿಯೋ ಈಗ ವೈರಲ್ ಆಗುತ್ತಿದೆ. ಪುತ್ತೂರಿನ ಕಡಬ ನಿವಾಸಿಯಾಗಿದ್ದ ಜಯರಾಮ ಗೌಡ, ಮೂಲ್ಕಿ ಮೂಲಕ ಸಸಿಹಿತ್ಲು ಕಡಲ ತೀರಕ್ಕೆ ಆಗಮಿಸಿದ್ದರು. ಹೊಸ ವರ್ಷಕ್ಕೆ ಬೀಚ್ ಇಳಿಯಬಾರದೆಂದು ಜಿಲ್ಲಾಡಳಿತದ ಸೂಚನೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಾಟವಾಡಲು ತೊಡಗಿದ್ದರು. ಆದರೆ, ವಿಧಿಯಾಟವೇ ಬೇರೆಯದ್ದೇ ಆಗಿತ್ತು. ನದಿಯೇ ದುರಂತಕ್ಕೆ ಆಹ್ವಾನಿಸಿತ್ತು.
Video:
In a heartbreaking incident father saved his little daughter and drows in Shambhavi river in Mangalore. The incident took place while they were playing in water and water level increased.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm