ಬ್ರೇಕಿಂಗ್ ನ್ಯೂಸ್
12-08-20 02:39 pm Mangalore Reporter ಕರಾವಳಿ
ಮಂಗಳೂರು ಆಗಸ್ಟ್ 12: ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ಗಲಭೆ ಎಬ್ಬಿಸಿದ ದುಷ್ಕರ್ಮಿಗಳ ಹಿಂದೆ ಮತಾಂಧ ಉಗ್ರಗಾಮಿ ಗುಂಪುಗಳ ಕೈವಾಡದ ಶಂಕೆಯಿದ್ದು ಮಾರಕಾಯುಧಗಳೊಂದಿಗೆ ಬಂದವರ ಮೇಲೆ ಗೋಲಿಬಾರ್ ಮಾಡಿ ಹುಟ್ಟಡಗಿಸುವುದೊಂದೇ ದಾರಿ. ಪೊಲೀಸ್ ಇಲಾಖೆ ಗಲಭೆ ಆರಂಭವಾಗುವ ಹಂತದಲ್ಲೇ ಹಿಂಸಾ ಪ್ರವೃತ್ತಿಯ ಅನಾಗರಿಕರ ಮೇಲೆ ಗೋಲಿಬಾರ್ ಮಾಡಿದ್ದರೆ ಇತರರಿಗೆ ಪಾಠವಾಗುತ್ತಿತ್ತು ಎಂದು ಶಾಸಕ ಡಾ.ಭರತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಮತಾಂಧರು ಮಹಿಳೆ ಪೊಲೀಸ್ ಸಿಬ್ಬಂದಿಗಳೂ ಎಂದು ನೋಡದೆ ಹಲ್ಲೆ ಮಾಡಿದ್ದಾರೆ. ಬೆಂಕಿ ಹಚ್ಚಿ ಸಾಯಿಸಲು ಮುಂದಾಗಿದ್ದರು. ದಲಿತ ಹಿಂದೂ ಶಾಸಕನ ಮನೆ,ಆಸ್ತಿ ಹಾನಿ ಮಾಡಿದ್ದಾರೆ. ಇಂತಹವರ ವಿರುದ್ದ ಕ್ಷಮೆಯಿಲ್ಲದ ಕಠಿಣ ಕ್ರಮ ಅಗತ್ಯ.
ಈ ಗಲಭೆ ಹಿಂದೆ ಯಾರ ಕುಮ್ಮಕ್ಕು ಇದೆ ಎಂಬುದರ ಬಗ್ಗೆ ಸರಿಯಾದ ತನಿಖೆ ನಡೆಯಬೇಕಿದೆ. ಮತಾಂಧರನ್ನು ಗುರುತಿಸಿ ಅವರಿಂದ ಆಸ್ತಿ ನಷ್ಟದ ಪರಿಹಾರ ವಶಕ್ಕೆ ಪಡೆಯಬೇಕು. ಇದರ ಜತೆ ಹಿಂದೂಗಳ ಆರಾಧ್ಯ ದೇವನಾದ ಶ್ರೀಕೃಷ್ಣನನ್ನು ಅತ್ಯಾಚಾರಿ ಎಂದು ಬಿಂಬಿಸಿದ್ದು ಎಷ್ಟು ಸರಿ. ಇದರ ಮೇಲೆ ಕೂಲಂಕುಷ ತನಿಖೆಯಾಗಬೇಕಿದೆ.

ಕಾನೂನು, ಪೊಲೀಸ್ ಇಲಾಖೆ ಇರುವಾಗ ತಪ್ಪಿತಸ್ಥರ ವಿರುದ್ದ ದೂರು ನೀಡಿ ಒತ್ತಾಯಿಸುವ ಬದಲು ಏಕಾ ಏಕಿ ಗುಂಪು ಸೇರಿ ಶಾಸಕರ ಮನೆ ಮೇಲೆ, ಇದೀಗ ಕೊರೊನಾ ವೈರಸ್ ವಿರುದ್ದ ಸೆಣೆಸುತ್ತಾ ಸರ್ವರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಕಾನೂನು ವಾರಿಯರ್ಸ್ ಆದ ಪೊಲೀಸರ ಮೇಲೆ, ಇಲಾಖೆಯ ವಾಹನಗಳ ಮೇಲೆ ಬೆಂಕಿ ಹಚ್ಚಿ ಮತಾಂಧರು ದೌರ್ಜನ್ಯ ಎಸಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಕಿಡಿಕಾರಿದ್ದಾರೆ.
ಮಾಜಿ ಸಚಿವ ಯು.ಟಿ ಖಾದರ್ ಎಸ್ಡಿಪಿಐ ಬಿಜೆಪಿಯ ರಾಜಕೀಯ ದಾಳ ಎಂದಿದ್ದಾರೆ. ಆದರೆ ದಲಿತ ಶಾಸಕನನ್ನು ನಿಂದಿಸಿ ಅವರ ಮೇಲೆ ಹಲ್ಲೆಯಾದರೂ ಕಾಂಗ್ರೆಸ್ ಮೌನ ಏಕೆ ? ಯು.ಟಿ ಖಾದರ್ ಮೊದಲು ಮತಾಂಧರ ಶಕ್ತಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಲಿ ಎಂದು ಅವರು ತಿರುಗೇಟು ನೀಡಿದ್ದಾರೆ.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 09:54 am
HK News Desk
ಎಐಎಡಿಎಂಕೆ ತಾಳಕ್ಕೆ ಕುಣಿಯುತ್ತಿರುವ ಬಿಜೆಪಿ ; ಫೈರ್...
04-02-26 03:42 pm
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
06-02-26 01:55 pm
Mangalore Correspondent
ನಂತೂರಿನಿಂದ ಬೈಕಂಪಾಡಿಗೆ ಫ್ಲೈ ಓವರ್ ಪ್ರಸ್ತಾಪ ; ಮಾ...
05-02-26 11:03 pm
ಅತಿದೊಡ್ಡ ಸೈಬರ್ ನೆಟ್ವರ್ಕ್ ಪತ್ತೆಹಚ್ಚಿದ ಮಂಗಳೂರು...
05-02-26 10:01 pm
ಆಯುಷ್ ಇಲಾಖೆಯಲ್ಲಿ ಅವ್ಯವಹಾರ ; ಜಿಲ್ಲಾ ಆಯುಷ್ ಅಧಿಕ...
05-02-26 09:29 pm
Nantoor Accident, Protest: ನಂತೂರಿನಲ್ಲಿ ಬಸ್ಸಿನ...
05-02-26 06:20 pm
06-02-26 01:36 pm
HK News Desk
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm