ಬ್ರೇಕಿಂಗ್ ನ್ಯೂಸ್
03-02-21 06:13 pm Mangalore Correspondent ಕರಾವಳಿ
ಸುಬ್ರಹ್ಮಣ್ಯ, ಫೆ.3: ಕೊನೆಗೂ ಅರಣ್ಯಾಧಿಕಾರಿಗಳ ಆಪರೇಶನ್ ಚಿರತೆ ಠುಸ್ಸಾಯ್ತು. ಬೆಳಗ್ಗಿನಿಂದ ಬೋನು, ಬಲೆ ಹಿಡಿದು ಕಾರ್ಯಾಚರಣೆ ಮಾಡಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಯೇ ಚಿರತೆ ಪರಾರಿಯಾಗಿದೆ.
ಬೆಳಗ್ಗಿನಿಂದಲೇ ಅರಣ್ಯಾಧಿಕಾರಿಗಳು ಒಂದೆಡೆ ಬೋನು, ಮತ್ತೊಂದು ಕಡೆ ಬಲೆ ಹಿಡಿದು ಚಿರತೆಯನ್ನು ಹಿಡಿಯಲು ಹರಸಾಹಸ ಮಾಡಿದ್ದರು. ಚಿರತೆ ಇನ್ನೇನು ಕೈಗೆ ಸಿಕ್ಕೇಬಿಡ್ತು ಎನ್ನುವಾಗಲೇ ಒಮ್ಮೆಗೆ ಹೊರಗೆ ಬಂದಿದ್ದ ಚಿರತೆ ಬಲೆಯೊಳಗೆ ಸಿಲುಕುತ್ತಲೇ ಎಗರಾಡಿದೆ. ಬಲೆಯನ್ನು ಕಚ್ಚಿ ಹೊರಗೆ ಓಡುವ ಪ್ರಯತ್ನದಲ್ಲಿದ್ದಾಗಲೇ ಬಲೆ ತುಂಡಾಯಿತೋ ಏನೋ ಗೊತ್ತಿಲ್ಲ. ಬಲೆಯ ಅಡಿಭಾಗದಿಂದ ಚಿರತೆ ಹೊರಬಂದಿದ್ದು ಜನರನ್ನು ನೋಡಿ ಬೆದರಿ ಓಟಕ್ಕಿತ್ತಿದ್ದು ಪೊದೆಗಳ ನಡುವೆ ಓಡಿ ಪರಾರಿಯಾಗಿದೆ.
ಒಮ್ಮೆಗೆ ಚಿರತೆ ಹೊರಗೆ ಬಂದಿದ್ದು ಗೊತ್ತಾಗುತ್ತಲೇ ಅಲ್ಲಿ ಸೇರಿದ್ದ ಪರಿಸರ ಜನರು, ಪೊಲೀಸರು, ಮಾಧ್ಯಮದ ವ್ಯಕ್ತಿಗಳು ಕೂಡ ಚಿರತೆಯ ಬಗ್ಗೆ ಹೆದರಿ ಓಟಕ್ಕಿತ್ತಿದ್ದಾರೆ. ಅತ್ತ ಚಿರತೆಯೂ ಓಡಿದ್ದು, ಅದಾಗಲೇ ಕಾಡಿನಲ್ಲಿ ಮರೆಯಾಗಿತ್ತು. ಇಂದು ಮುಂಜಾವಿನ ವೇಳೆಗೆ, ಸುಬ್ರಹ್ಮಣ್ಯ ಬಳಿಯ ಕೈಕಂಬದ ರೇಗಪ್ಪ ಎಂಬವರ ಮನೆ ಆವರಣಕ್ಕೆ ಬಂದಿದ್ದ ಚಿರತೆ ನಾಯಿಯನ್ನು ಹಿಡಿಯಲೆಂದು ಬೆನ್ನಟ್ಟಿ ಬಂದಿತ್ತು. ನಾಯಿ ಪ್ರಾಣ ಭಯದಲ್ಲಿ ಮನೆಯ ಟಾಯ್ಲೆಟ್ ಕೋಣೆಗೆ ಹೊಕ್ಕಿತ್ತು. ಇದೇ ವೇಳೆ, ನಾಯಿಯನ್ನು ಹುಡುಕುತ್ತಾ ಹಿಂದೆ ಓಡಿದ್ದ ಮನೆಯಲ್ಲಿದ್ದ ಮಹಿಳೆ ಒಳಗೆ ಚಿರತೆ ಇರುವುದನ್ನು ಕಂಡು ಟಾಯ್ಲೆಟಿಗೆ ಬಾಗಿಲು ಹಾಕಿದ್ದಾರೆ.
ಆಬಳಿಕ ಸ್ಥಳೀಯರು ಸೇರಿದ್ದು ಅರಣ್ಯಾಧಿಕಾರಿಗಳು ಮತ್ತು ಸುಬ್ರಹ್ಮಣ್ಯ ಪೊಲೀಸರನ್ನು ಕರೆಸಿದ್ದಾರೆ. ಚಿರತೆ ಹಿಡಿಯಲೆಂದು ಬೋನು, ಹಗ್ಗ, ಬಲೆ ಎಲ್ಲವನ್ನೂ ಸ್ಥಳಕ್ಕೆ ತಂದು ಏನೋ ಆಪರೇಶನ್ ಮಾಡಲು ಪ್ಲಾನ್ ಹಾಕಿದ್ದರು. ಆದರೆ, ಮಧ್ಯಾಹ್ನ ಮೂರು ಗಂಟೆ ವೇಳೆಗೆ ಬಲೆಯ ನಡುವಿನಿಂದಲೇ ತಪ್ಪಿಸಿಕೊಂಡು ಮೇಲ್ಛಾವಣಿ ಹಾರಿ ತಪ್ಪಿಸಿಕೊಂಡಿದ್ದು ಸುಬ್ರಹ್ಮಣ್ಯದಲ್ಲಿ ಜನರ ಬಾಯಲ್ಲಿ ಹಾಸ್ಯದ ನಗೆ ಉಗ್ಗಿಸಿದೆ.
Read: ಸುಬ್ರಹ್ಮಣ್ಯ ; ನಾಯಿ ಅಟ್ಟಿಸಿ ಬಂದು ಟಾಯ್ಲೆಟ್ ಒಳಗೆ ಸಿಕ್ಕಿಬಿದ್ದ ಚಿರತೆ !
23-10-24 09:41 pm
Bangalore Correspondent
C.P. Yogeshwar joins Congress: ಬಿಜೆಪಿ-ಜೆಡಿಎಸ್...
23-10-24 12:41 pm
Bangalore Rain, School holiday: ಬೆಂಗಳೂರಿನಲ್ಲಿ...
22-10-24 11:13 pm
ಚನ್ನಪಟ್ಟಣ ; ಯೋಗೀಶ್ವರ್ ಗೆ ಮೈತ್ರಿ ಟಿಕೆಟ್ ನೀಡಲು...
22-10-24 11:06 pm
Kengari body found, Bangalore: ಬಿಂದಿಗೆ ಎತ್ತಿಕ...
22-10-24 08:27 pm
21-10-24 02:23 pm
HK News Desk
2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಆಗಿದ್ದ ಬಿಲಿಯನೇರ್...
20-10-24 10:53 pm
ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮ...
17-10-24 11:16 am
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
24-10-24 01:25 am
Mangaluru Correspondent
Mangalore, Babu Pilar, Ullal press club; 4500...
23-10-24 09:49 pm
Mangalore Police, Accident, Kadri: ರಾತ್ರಿ ವೇಳ...
23-10-24 06:35 pm
ಮಂಗಳೂರು ವಿವಿಯಲ್ಲಿ ತುಳು ಎಂಎ ಪ್ರವೇಶ ಶುಲ್ಕ ಹೆಚ್ಚ...
23-10-24 06:26 pm
Mangalore, Arun Puthila, Puttur VHP: ವಿಎಚ್ ಪಿ...
23-10-24 03:15 pm
23-10-24 08:38 pm
Mangalore Correspondent
Hassan, Bangladeshi arrest: ಹಾಸನ ನಗರದಲ್ಲಿ ನೆಲ...
22-10-24 02:49 pm
Udupi Murder, Crime news: ಕುಡಿದ ಮತ್ತಿನಲ್ಲಿ ಸ್...
22-10-24 02:29 pm
Mangalore stone railway track, Thokottu; ರೈಲು...
20-10-24 11:47 am
Belagavi Cash Seized, crime, Police: ಮಹಾರಾಷ್ಟ...
19-10-24 02:38 pm