ಬ್ರೇಕಿಂಗ್ ನ್ಯೂಸ್
05-02-21 04:02 pm Mangalore Correspondent ಕರಾವಳಿ
ಉಳ್ಳಾಲ, ಫೆ.4: ಉಳ್ಳಾಲ ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಲ್ಲಿ ಕಟ್ಟಡ ತೆರಿಗೆ, ನೀರಿನ ಬಿಲ್ ಬಾಕಿ ಬಹಳಷ್ಟು ಮಂದಿಯದ್ದಿದೆ. ತೆರಿಗೆ ಪಾವತಿಗಾಗಿ ಜನಸಾಮಾನ್ಯರು ಕಚೇರಿ ಅಲೆದಾಡುವುದನ್ನು ತಪ್ಪಿಸಲು ನಗರಸಭೆ ಅಧಿಕಾರಿಗಳೇ ವಾರದ ಪ್ರತಿ ಗುರುವಾರ 31 ವಾರ್ಡ್ ಗಳ ಆಯ್ದ ಸ್ಥಳಗಳಲ್ಲಿ ಶಿಬಿರ ನಡೆಸಲು ಮುಂದಾಗಿದೆ.
ಈ ಬಗ್ಗೆ ನಗರಸಭೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಆಯೂಬ್ ಮಂಚಿಲ ಮಾಹಿತಿ ನೀಡಿದರು. ಮೀಸಲಾತಿ ಕಾನೂನಿನ ತೊಡಕಲ್ಲಿ ಎರಡು ವರ್ಷಗಳ ಕಾಲ ನಗರಸಭೆಯಲ್ಲಿ ಅಧಿಕಾರ ಇರಲಿಲ್ಲ. ಕಳೆದ ಎರಡೂವರೆ ತಿಂಗಳಿಂದ ಹೊಸ ಆಡಳಿತ ಬಂದಿದೆ. ನಗರದ 31 ವಾರ್ಡ್ ಗಳ ವಾಣಿಜ್ಯ, ವಸತಿ ಕಟ್ಟಡಗಳ ತೆರಿಗೆ ಮತ್ತು ನೀರಿನ ಬಿಲ್ ಸರಿಯಾಗಿ ಪಾವತಿಯಾಗದೆ ಬಾಕಿ ಉಳಿದಿದೆ. ನಗರ ವ್ಯಾಪ್ತಿಯಲ್ಲಿ ಬಹಳಷ್ಟು ಉದ್ಯಮಗಳು ನಡೆಯುತ್ತಿದ್ದು, ಶೇಕಡ ಮೂವತ್ತರಷ್ಟು ಉದ್ದಿಮೆಗಳು ಪರಾವನಿಗೆ ಪಡೆದಿಲ್ಲ ಎಂದು ತಿಳಿದಿದೆ. ಜನರು ನಗರಸಭೆಗೆ ನೀರಿನ ಬಿಲ್ , ಕಟ್ಟಡ ತೆರಿಗೆ ಪಾವತಿಸಲು ಬರುವುದನ್ನು ತಪ್ಪಿಸಲು ನಾವೇ ಜನರ ಬಳಿಗೆ ಹೋಗಿ ನೀರು ಬಿಲ್, ತೆರಿಗೆ ಕಲೆಕ್ಟ್ ಮಾಡುವುದಲ್ಲದೆ ಉದ್ಯಮ ಪರವಾನಿಗೆ ಆನ್ ದಿ ಸ್ಪಾಟ್ ನೀಡುವ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಮುಂದಿನ ಫೆ.11 ರಿಂದ ನಗರ ವ್ಯಾಪ್ತಿಯ 9 ಕಡೆಗಳಲ್ಲಿ ಪ್ರತೀ ಗುರುವಾರ ಬೆಳಗ್ಗೆ 10 ರಿಂದ ಸಂಜೆ 4 ರ ತನಕ ಶಿಬಿರದ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 11 ನೇ ಗುರುವಾರ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದ ನಗರಸಭೆಯ ವಾಣಿಜ್ಯ ಸಂಕೀರಣದಲ್ಲಿ ಇದಕ್ಕೆ ಚಾಲನೆ ದೊರೆಯಲಿದ್ದು, ನಂತರದ ಪ್ರತೀ ಗುರುವಾರ ಉಳ್ಳಾಲ ಧರ್ಮನಗರ ಶಾಲೆ, ತೊಕ್ಕೊಟ್ಟು ಅಂಬೇಡ್ಕರ್ ರಂಗಮಂದಿರ, ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆ, ಮೇಲಂಗಡಿ ಉರ್ದು ಶಾಲೆ, ಬಬ್ಬುಕಟ್ಟೆ ಸರಕಾರಿ ಶಾಲೆ, ಅಲೇಕಳ ಮದನಿ ಜೂನಿಯರ್ ಕಾಲೇಜು, ಪಟ್ಲ ಶಾಲೆ, ಮಾಸ್ತಿಕಟ್ಟೆ ಹಝ್ರತ್ ಶಾಲೆಗಳಲ್ಲಿ ಶಿಬಿರ ನಡೆಯಲಿದೆ ಎಂದರು.
ನಗರ ಆಯುಕ್ತರಾದ ರಾಯಪ್ಪ ಮಾತನಾಡಿ, ಉದ್ಯಮಗಳಿಗೆ ಸರಿಯಾದ ದಾಖಲೆ ಇದ್ದಲ್ಲಿ ಅಲ್ಲೇ ಪರವಾನಿಗೆ ನೀಡುವ ವ್ಯವಸ್ಥೆ ಮಾಡುತ್ತೇವೆ. ಸಮರ್ಪಕ ದಾಖಲೆ ನೀಡಿದಲ್ಲಿ ಕಟ್ಟಡ ಪರವಾನಿಗೆ ಗಳನ್ನು ಸ್ಥಳದಲ್ಲೇ ನೀಡಲಾಗುವುದು. ಇದರಿಂದ ಸಾರ್ವಜನಿಕರಿಗೆ ಕಚೇರಿ ಅಲೆದಾಟ ತಪ್ಪುವುದು. ಇದರ ಬಗ್ಗೆ ನಾವು ಧ್ವನಿವರ್ಧಕ ಬಳಸಿ ಸಾರ್ವಜನಿಕವಾಗಿ ಪ್ರಚಾರವನ್ನು ಮಾಡುತ್ತೇವೆ. ಮೇ ವರೆಗೆ ಬಿಲ್, ತೆರಿಗೆ ಪಾವತಿಸುವವರಿಗೆ ಯಾವುದೇ ದಂಡ ಇರುವುದಿಲ್ಲ. ಎಪ್ರಿಲ್ 30 ರ ಒಳಗೆ ಪಾವತಿಸಿದವರಿಗೆ 5 ಶೇಕಡ ರಿಯಾಯಿತಿ ಇದೆ. ನಗರಸಭೆಯಲ್ಲಿ ಕಂದಾಯ ಅಧಿಕಾರಿ ಇಲ್ಲ , ಸಿಬ್ಬಂದಿಗಳ ಕೊರತೆಯಿಂದಲೂ ತೆರಿಗೆ, ಬಿಲ್ ಬಾಕಿ ಉಳಿದಿದೆ ಎಂದರು. ನಗರ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಇದ್ದರು.
Hereafter authorities from Ullal Town Municipality to collect taxes from house to house said vice director Ayub.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm