ಬ್ರೇಕಿಂಗ್ ನ್ಯೂಸ್
24-02-21 04:59 pm Mangaluru correspondant ಕರಾವಳಿ
ಮಂಗಳೂರು, ಫೆ.24: ಕೋವಿಡ್ ಭೀತಿಯಲ್ಲಿ ಕೇರಳದ ಕಡೆಯಿಂದ ಬರುವ ಮಂದಿಗೆ ಗಡಿ ನಿರ್ಬಂಧಿಸುವ ಆದೇಶದಿಂದ ಉಸಿರು ಕಟ್ಟಿದ್ದ ಕಾಸರಗೋಡು ನಿವಾಸಿಗಳಿಗೆ ಡಿಸಿಎಂ ಅಶ್ವತ್ಥ ನಾರಾಯಣ್ ರಿಲೀಫ್ ನೀಡಿದ್ದಾರೆ.
ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಅಶ್ವತ್ಥ್ ನಾರಾಯಣ ಬಳಿ ಈ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಸರಗೋಡಿನಿಂದ ಅತಿ ಹೆಚ್ಚು ಮಂದಿ ಮಂಗಳೂರನ್ನು ಆಶ್ರಯಿಸಿದ್ದಾರೆ. ದಿನವೂ ಬಂದು ಹೋಗುವ ಮಂದಿಯನ್ನು ಎಷ್ಟೂಂತ ಪರೀಕ್ಷೆಗೆ ಒಳಪಡಿಸಬೇಕು. ದಿನಾ ಬರುವ ಮಂದಿ ಎಲ್ಲಿಂದ ನೆಗೆಟಿವ್ ರಿಪೋರ್ಟ್ ತರಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ನಿತ್ಯ ಶಾಲೆ, ಕಾಲೇಜು, ಉದ್ಯೋಗಕ್ಕೆಂದು ಬರುವ ಕಾಸರಗೋಡಿನ ಮಂದಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯದಿಂದ ರಿಲೀಫ್ ಕೊಡಲಾಗುವುದು. ಅವರಿಗೆ ನೆಗೆಟಿವ್ ರಿಪೋರ್ಟ್ ಬದಲು ಆರೋಗ್ಯ ಸೇತು ಏಪ್ ನಲ್ಲಿ ಮಾನಿಟರ್ ಮಾಡುವಂತೆ ಆಗಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಚಿವ ಸುಧಾಕರ್ ಗೆ ತಿಳಿಸುತ್ತೇನೆ. ಇದರ ಬದಲು, ಇಲ್ಲೇ ಬಂದು ಇರೋರು ಕಡ್ಡಾಯ ನೆಗೆಟಿವ್ ವರದಿ ಹೊಂದಿರಬೇಕು ಎಂದು ಹೇಳಿದರು.


ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಮೈತ್ರಿ ಬಗ್ಗೆ ಆಯಾ ಪಕ್ಷದವರು ನಿರ್ಧಾರ ಮಾಡುತ್ತಾರೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಒಳ್ಳೆಯದೇ. ನಾವು ಮಾಡಿಕೊಳ್ಳಿ ಅಂತಲೇ ಹೇಳುತ್ತೇವೆ. ಅವರು ಒಟ್ಟಿಗೆ ಹೋಗುವುದಾದರೆ ನಮಗೇನು ಸಮಸ್ಯೆ ಇಲ್ಲ. ಅವರ ಪಕ್ಷದ ನಿಲುವನ್ನು ಕುಮಾರಸ್ವಾಮಿಯವರು ನಿಶ್ಚಯ ಮಾಡಿಕೊಳ್ಳಬೇಕು.


ಸ್ಥಳೀಯ ಒಡಂಬಡಿಕೆ, ಒಪ್ಪಂದಗಳನ್ನು ಅನುಸರಿಸಿ ಮೈತ್ರಿ ಮಾಡಿಕೊಳ್ಳುತ್ತಾರೆ. ಕಾಲಕ್ರಮೇಣ ಈ ಮೈತ್ರಿಯಿಂದ ಏನಾಗುತ್ತೆ ಅಂತ ಅವರಿಗೆ ಗೊತ್ತಿದೆ. ಕಾಂಗ್ರೆಸ್ ಜೊತೆ ಸರಕಾರ ಮಾಡಿ, ಏನಾಯ್ತು ಅನ್ನೋದು ಅವರಿಗೆ ಗೊತ್ತಿದೆ. ಅದರ ಅನುಭವ ಕುಮಾರಸ್ವಾಮಿಗೆ ಇದೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಅನ್ನು ಹೇಗೆ ನುಂಗಿಕೊಳ್ಳೋ ಪ್ರಯತ್ನ ಮಾಡಿದ್ದಾರೆ ಅನ್ನೋದನ್ನು ನೋಡಿಕೊಳ್ಳಬೇಕು. ತಮ್ಮ ಪಕ್ಷ ಉಳಿಸಿಕೊಳ್ಳಲು ಕುಮಾರಸ್ವಾಮಿ ಯೋಚನೆ ಮಾಡಲಿ ಎಂದು ಹೇಳಿದರು.
ತಲಪಾಡಿ ಟೋಲ್ ಬಹಿಷ್ಕರಿಸಿ ಸ್ಥಳೀಯರ ಪ್ರತಿಭಟನೆ ; ಗೂಂಡಾಗಿರಿಗೆ ಬುದ್ಧಿ ಕಲಿಸಲು ರೆಡಿ ಎಂದ ಜನ !
Covid Negative report test not mandatory for those entering Mangalore from Kerala state orders DCM Ashwath Narayan in Mangalore.
05-03-26 11:42 pm
HK News Desk
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm