ಬ್ರೇಕಿಂಗ್ ನ್ಯೂಸ್
24-02-21 08:39 pm Mangaluru correspondant ಕರಾವಳಿ
ಮಂಗಳೂರು, ಫೆ.24: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬರುವ ಮಂದಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಆದರೆ, ಈ ರೀತಿಯ ಆದೇಶ ಮಾಡಿದ್ದರೂ, ಮುಂಬೈ ಕಡೆಯಿಂದ ಬರುವ ಪ್ಯಾಸೆಂಜರ್ ಬಸ್ ಗಳು ಈಗ ಒಳದಾರಿಯಿಂದ ಕರ್ನಾಟಕಕ್ಕೆ ಬರುತ್ತಿರುವುದಾಗಿ ದೂರು ಕೇಳಿಬಂದಿದೆ.
ಮಂಗಳೂರಿನಿಂದ ವಯಾ ಬೆಳಗಾವಿ ಮೂಲಕ ಮುಂಬೈಗೆ ದಿನವೂ 18 ಬಸ್ ಗಳು ಸಂಚರಿಸುತ್ತವೆ. ದಿನವೂ ಮಂಗಳೂರಿನಿಂದ ತೆರಳುವ ಬಸ್, ಅಷ್ಟೇ ಸಂಖ್ಯೆಯಲ್ಲಿ ಮುಂಬೈನಿಂದ ಮಂಗಳೂರಿಗೆ ಹಿಂತಿರುಗಿ ಬರುತ್ತದೆ. ಈ ಬಸ್ ಗಳೆಲ್ಲ ಸಾಮಾನ್ಯವಾಗಿ ಬೆಳಗಾವಿಯಿಂದ ಕೊಲ್ಲಾಪುರ ಚೆಕ್ ಪೋಸ್ಟ್ ಮೂಲಕವೇ ಹೋಗುವುದು ಮತ್ತು ಬರುವುದನ್ನು ಮಾಡುತ್ತದೆ. ಆದರೆ, ಈಗ ಕೋವಿಡ್ ನಿರ್ಬಂಧ ವಿಧಿಸಿರುವ ಕಾರಣ ಕೊಲ್ಲಾಪುರ ಚೆಕ್ ಪೋಸ್ಟ್ ನಲ್ಲಿ ಕರ್ನಾಟಕದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಹಾರಾಷ್ಟ್ರದಿಂದ ಬರುವ ಬಸ್ ಗಳನ್ನು ತಡೆಯಲಾಗುತ್ತದೆ.
ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿದ್ದಾರೆಯೇ ಎನ್ನುವ ಬಗ್ಗೆ ತಪಾಸಣೆ ಮಾಡಲಾಗುತ್ತದೆ. ಆದರೆ, 72 ಗಂಟೆಗಳ ಹಿಂದೆ ಪಡೆದ ನೆಗೆಟಿವ್ ರಿಪೋರ್ಟ್ ಹೆಚ್ಚಿನ ಮಂದಿಯಲ್ಲಿ ಇರುವುದಿಲ್ಲ. ಹೀಗಾಗಿ ಬಸ್ ಗಳನ್ನು ಕೊಲ್ಲಾಪುರದಿಂದ ಕರ್ನಾಟಕ ಪ್ರವೇಶ ಮಾಡಲು ಬಿಡುವುದಿಲ್ಲ. ಅಧಿಕಾರಿಗಳ ಕಿರಿ ಕಿರಿಯನ್ನು ತಪ್ಪಿಸುವುದಕ್ಕಾಗಿ ಈಗ ಮಂಗಳೂರಿನ ಬಸ್ ಗಳು ಒಳದಾರಿಯನ್ನು ಕಂಡುಕೊಂಡಿವೆ ಎನ್ನುತ್ತಾರೆ, ಪ್ರಯಾಣಿಕರು.
ಕೊಲ್ಲಾಪುರ ಹೈವೇ ಬದಲಿಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಎಂಬಲ್ಲಿ ಕಾಡುದಾರಿ ಮೂಲಕ ಬಸ್ ಗಳು ಕರ್ನಾಟಕ ಪ್ರವೇಶ ಮಾಡುತ್ತಿದ್ದು, ಚೆಕ್ಕಿಂಗ್ ತಪ್ಪಿಸ್ಕೊಂಡು ಒಳಬರುತ್ತಿವೆ ಎನ್ನಲಾಗಿದೆ. ದಿನವೂ ಬಸ್ ಸೀಟು ಭರ್ತಿ ಮಾಡಿಕೊಂಡು ಬಂದರೆ, ಮಂಗಳೂರು ನಗರ ಒಂದಕ್ಕೆ 18 ಬಸ್ ಗಳಲ್ಲಿ ಸುಮಾರು 900 ಮಂದಿ ಬರುತ್ತಾರೆ. ಇದೇ ರೀತಿ ಬೇರೆ ಬೇರೆ ನಗರಗಳಿಗೂ ಒಳದಾರಿ ಮೂಲಕ ಬಸ್ ಗಳು ಬರುತ್ತಿದ್ದು, ಕರ್ನಾಟಕದ ಗಡಿ ನಿರ್ಬಂಧ ಹೆಸರಿಗಷ್ಟೇ ಅನ್ನುವ ಮಾತು ಕೇಳಿಬರುತ್ತಿದೆ.
ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸುವ ಕೋವಿಡ್ ಪೀಡಿತರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ. ಆದರೆ, ಟೂರಿಸ್ಟ್ ಬಸ್ ಗಳು ಸರಕಾರದ ಆದೇಶವನ್ನು ಗಾಳಿಗೆ ತೂರಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
It has come to light that Mangalore-Mumbai buses take shortcuts to evade check-post of Kolhapur because health officer demand covid negative report of passengers.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm