ದುಬೈನಿಂದ ಒಳಚಡ್ಡಿಯಲ್ಲಿ ಬಂಗಾರ ತಂದು ಸಿಕ್ಕಿಬಿದ್ದ ಖದೀಮ

13-03-21 12:46 pm       Mangalore Correspondent   ಕರಾವಳಿ

ಅಕ್ರಮವಾಗಿ ಚಿನ್ನ ತರುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮಂಗಳೂರು, ಮಾ.13: ದುಬೈನಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳ ಮೂಲದ ಕೊಪ್ಪ ನಿವಾಸಿ ಮಮ್ಮಿನಿ ಖಾಲಿದ್ (45) ಬಂಧಿತ ವ್ಯಕ್ತಿ. ಆತ ವಿಶೇಷವಾಗಿ ರೂಪಿಸಿದ್ದ ಒಳ ಚಡ್ಡಿಯಲ್ಲಿ 737 ಗ್ರಾಮ್ ಬಂಗಾರವನ್ನು ಬಚ್ಚಿಟ್ಟಿದ್ದ. ಪೌಡರ್ ರೂಪದಲ್ಲಿದ್ದ ಬಂಗಾರವನ್ನು ವಶಕ್ಕೆ ಪಡೆಯಲಾಗಿದ್ದು ಅದರ ಅಂದಾಜು ಮೌಲ್ಯ 33.75 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಲಿದ್ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಇಂದು ಬೆಳಗ್ಗೆ ಮಂಗಳೂರಿಗೆ ಬಂದಿದ್ದ. ಆತನನ್ನು ತಪಾಸಣೆ ನಡೆಸಿದಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾರ್ಯಾಚರಣೆಯಲ್ಲಿ ಅವಿನಾಶ್ ಕಿರಣ್ ರಂಗೋಲಿ, ಭೋಮ್ಕರ್, ವಿಕ್ರಮ್ ಚಕ್ರವರ್ತಿ, ರಾಕೇಶ್ ಕುಮಾರ್ ಪಾಲ್ಗೊಂಡಿದ್ದರು.

Officers of Customs at Mangaluru International Airport seized gold worth 33.75 lakhs that was smuggled through the underwear of a man who was coming from Dubai.