ಆಂಧ್ರದಲ್ಲಿ ಮೀನಿನ ಲಾರಿ ಅಪಘಾತ ; ಹರೇಕಳದ ಯುವಕ ದಾರುಣ ಸಾವು !

19-03-21 10:45 am       Mangalore Correspondent   ಕರಾವಳಿ

ಆಂಧ್ರ ಪ್ರದೇಶದಲ್ಲಿ ಮಂಗಳೂರಿನ ಮೀನಿನ ಲಾರಿ ಅಪಘಾತಕ್ಕೀಡಾಗಿ ಯುವಕನೋರ್ವ ಸಾವನ್ನಪ್ಪಿದ್ದಾನೆ. 

ಮಂಗಳೂರು, ಮಾ.19 : ಆಂಧ್ರ ಪ್ರದೇಶದಲ್ಲಿ ಮಂಗಳೂರಿನ ಮೀನಿನ ಲಾರಿ ಅಪಘಾತಕ್ಕೀಡಾಗಿದ್ದು ಹರೇಕಳದ ಯುವಕನೋರ್ವ ದಾರುಣ ಸಾವನ್ನಪ್ಪಿದ್ದಾನೆ. 

ಹರೇಕಳ ಗ್ರಾಮದ ಐಕು ನಿವಾಸಿ ಮಹಮ್ಮದ್ ರವೂಫ್ (20) ಮೃತ ಯುವಕ. ಬುಧವಾರ ತಡರಾತ್ರಿ ಆಂಧ್ರದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಒಡಿಶಾ ಬಂದರಿನಿಂದ ಮಂಗಳೂರಿಗೆ ಮೀನು ತರುತ್ತಿದ್ದ ಲಾರಿ ಉರುಳಿ ಬಿದ್ದಿದೆ. ಪರಿಣಾಮ ಮಹಮ್ಮದ್ ರವೂಫ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಪಾವೂರು ಹರೇಕಳದ ಶಾಕೀರ್ ತೀವ್ರ ಗಾಯಗೊಂಡಿದ್ದಾರೆ.

ನಾಟೆಕಲ್ ನ ಇನ್ನೋರ್ವ ಯುವಕ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾನೆ. ಮೃತ ರವೂಫ್ ನ ಮೃತದೇಹ ಇಂದು ಬೆಂಗಳೂರಿಗೆ ಬರಲಿದ್ದು ಅಲ್ಲಿಂದ ಮಂಗಳೂರಿಗೆ ತರಲು ವ್ಯವಸ್ಥೆ ಮಾಡಲಾಗಿದೆ.

Mangalore fish truck meets with accident in Andhra prdesh mangalore based worker killed on spot.