ಜೈಲಿನಲ್ಲಿ ನನ್ನ ಮೇಲೆ ಹಲ್ಲೆ ನಡೆದಿಲ್ಲ ; ಮಂಗಳೂರು ಕಮಿಷನರ್ ಸ್ಪಷ್ಟನೆ

27-04-21 03:33 pm       Mangalore Correspondent   ಕರಾವಳಿ

ಪೊಲೀಸ್ ಕಮಿಷನರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವದಂತಿಯ ಬಗ್ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು, ಎ.27: ಜೈಲಿನಲ್ಲಿ ಪೊಲೀಸ್ ಕಮಿಷನರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವದಂತಿಯ ಬಗ್ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಜೈಲಿನಲ್ಲಿ ಕೈದಿಗಳ ನಡುವೆ ಗಲಾಟೆ ಆಗಿದ್ದಾಗ ಭೇಟಿ ನೀಡಿದ್ದೆ. ಆದರೆ ನನ್ನ ಮೇಲೆ ಯಾರು ಕೂಡ ಹಲ್ಲೆ ನಡೆಸಿಲ್ಲ. ಜೈಲು ಸಿಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಬಗ್ಗೆ ಕೇಸು ದಾಖಲಾಗಿದೆ. ಇದನ್ನೇ ಕೆಲವು ಮಾಧ್ಯಮದವರು, ತಪ್ಪು ಅರ್ಥ ಮಾಡಿಕೊಂಡು ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿ ಮಾಡಿದ್ದಾರೆ.

ಹಾಗೇನೂ ಘಟನೆ ನಡೆದಿಲ್ಲ. ಇದನ್ನು ಸರಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ, ಕಮಿಷನರ್ ಚುಟುಕಾಗಿ ಉತ್ತರಿಸಿದ್ದಾರೆ.

ಮಂಗಳೂರು ಜೈಲಿನಲ್ಲಿ ಕೈದಿಗಳ ಮಾರಾಮಾರಿ ; ದರೋಡೆ ಪ್ರಕರಣದ ಆರೋಪಿಗಳ ಹೊಡೆದಾಟ

ಜೈಲಿನಲ್ಲಿ ಮಾರಾಮಾರಿ ; ಜೈಲು ಸಿಬಂದಿಗೂ  ಹಲ್ಲೆಗೈದಿದ್ದ ಆರೋಪಿ ! ನಾಲ್ಕು ಪ್ರಕರಣ ದಾಖಲು

Some media has published as Police commissioner Shashi Kumar was attacked by inmates in jail during his visit after a clash for which the commissioner has clarified no such event has taken place to the media persons in Mangalore.