ಮಂಗಳೂರಿನಲ್ಲಿ ಬಾಡಿ ಬಿಲ್ಡರ್ ಗುರುವಾಗಿದ್ದ ಎಂ.ಎಸ್. ಕುಮಾರ್ ಇನ್ನಿಲ್ಲ

27-04-21 11:15 pm       Mangaluru correspondent   ಕರಾವಳಿ

ನಗರದ ಕೆಎಂಸಿ ಮೆಡಿಕಲ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ, ಮಂಗಳೂರಿನ ಅಸಂಖ್ಯಾತ ಬಾಡಿ ಬಿಲ್ಡರ್ ಗಳಿಗೆ ಗುರುವಾಗಿದ್ದ ಎಂ.ಎಸ್. ಕುಮಾರ್  (87) ನಿಧನರಾಗಿದ್ದಾರೆ. 

ಮಂಗಳೂರು, ಎ.27: ನಗರದ ಕೆಎಂಸಿ ಮೆಡಿಕಲ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ, ಮಂಗಳೂರಿನ ಅಸಂಖ್ಯಾತ ಬಾಡಿ ಬಿಲ್ಡರ್ ಗಳಿಗೆ ಗುರುವಾಗಿದ್ದ ಎಂ.ಎಸ್. ಕುಮಾರ್  (87) ನಿಧನರಾಗಿದ್ದಾರೆ. 

ಕುಮಾರ್ ಮಂಗಳೂರಿನವರಾಗಿದ್ದು ವಯಸ್ಸಿನ ಕಾರಣದಿಂದ ಗದಗದಲ್ಲಿರುವ ತಮ್ಮ ಮಗಳ ಮನೆಯಲ್ಲಿ ನೆಲೆಸಿದ್ದರು. ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. 

ನಿವೃತ್ತಿಯ ಬಳಿಕವೂ ಹಲವು ವರ್ಷಗಳ ಕಾಲ ಬಾಡಿ ಬಿಲ್ಡಿಂಗ್ ಕೋಚ್ ಆಗಿದ್ದ ಅವರ ಗರಡಿಯಲ್ಲಿ ಹಲವಾರು ಮಂದಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಾಖಲೆಗಳನ್ನು ಮಾಡಿದ್ದರು. ಕರ್ನಾಟಕ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಪಾಲಿಗೆ ಎಂ.ಎಸ್. ಕುಮಾರ್ ಒಂದು ರೀತಿಯಲ್ಲಿ ಪಿಲ್ಲರ್ ಆಗಿದ್ದರು ಎಂದು ಅವರ ಶಿಷ್ಯಂದಿರು ಸ್ಮರಿಸಿದ್ದಾರೆ. 

ಅವರಿಗೇ ಒಬ್ಬಳೇ ಪುತ್ರಿಯಿದ್ದು ಗದಗದಲ್ಲಿ ನೆಲೆಸಿದ್ದರು. ಮಗಳ ಮನೆಯಲ್ಲಿ ಕುಮಾರ್ ದಂಪತಿ ಇದ್ದರು.

Mangalore Body Builder and Retired Physical director of KMC M S Kumar passed away due to cardic arrest in Gadag at his daughters residence.