ಬ್ರೇಕಿಂಗ್ ನ್ಯೂಸ್
26-08-20 10:46 am Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 26: ಕೊರೊನಾ ಲಾಕ್ಡೌನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಕಾರ್ಮಿಕರಿಗೂ ರಾಜಯೋಗ ತಂದಿಟ್ಟಿದೆ. ಲಾಕ್ ಡೌನ್ ಬಳಿಕ ತಮ್ಮೂರಿಗೆ ತೆರಳಿದ್ದ ಉತ್ತರ ಭಾರತ ಮೂಲದ ಮರಳು ಕಾರ್ಮಿಕರನ್ನು ಮಂಗಳೂರಿನ ಹೊಯ್ಗೆ ಮಾಫಿಯಾ ವಿಮಾನದಲ್ಲಿ ತರಿಸಿಕೊಂಡಿದೆ ಎನ್ನುವ ಸುದ್ದಿ ಬಂದಿದೆ.
ಲಾಕ್ಡೌನ್ ಬಳಿಕ ಬದುಕಿದರೆ ಬೇಡಿ ತಿಂದೇನು ಎಂದು ತಮ್ಮೂರಿಗೆ ಓಡಿಹೋಗಿದ್ದ ಕಾರ್ಮಿಕರು ಈಗ ಮತ್ತೆ ನಗರಕ್ಕೆ ಕಾಲಿಡತೊಡಗಿದ್ದಾರೆ. ಆದರೆ, ಉತ್ತರ ಭಾರತ ಮೂಲದ ಮರಳು ಕಾರ್ಮಿಕರು ಆಗಮಿಸಲು ರೈಲು ಸಂಚಾರ ಇಲ್ಲದೆ ಕಷ್ಟವಾಗಿದೆ. ಹೀಗಾಗಿ ಮಂಗಳೂರಿನ ಹೊಯ್ಗೆ ಮಾಲಕರು ಸೇರಿ ನೂರಕ್ಕೂ ಹೆಚ್ಚು ಕಾರ್ಮಿಕರನ್ನು ತುರ್ತಾಗಿ ಫ್ಲೈಟಿನಲ್ಲಿ ಕರೆತಂದಿದ್ದಾರೆ ಎನ್ನಲಾಗುತ್ತಿದೆ.
ಎರಡು ದಿನಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾರ್ಮಿಕರನ್ನು ನೋಡಿದ ಅಲ್ಲಿನ ಸಿಬಂದಿಗೇ ಅಚ್ಚರಿಯಾಗಿತ್ತು. ಸಾಧಾರಣ ಮಧ್ಯಮ ವರ್ಗದವರೇ ವಿಮಾನ ಹತ್ತಲು ಅಸಾಧ್ಯ ಎನ್ನುವಂತಿದ್ದರೆ, ಮರಳು ಕಾರ್ಮಿಕರು ಜೀವನದಲ್ಲಿ ಎಂದೂ ಸಿಗದ ಭಾಗ್ಯವನ್ನು ತಮ್ಮ ಮಾಲಕರ ಮೂಲಕ ಅನುಭವಿಸಿದ್ದಾರೆ ಎಂದು ಅಲ್ಲಿನ ಸಿಬಂದಿ ಹೇಳುತ್ತಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಮೂಲದ ಕಾರ್ಮಿಕರು ಹೆಚ್ಚಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮರಳನ್ನು ತೆಗೆಯುತ್ತಾರೆ. ಜಿಲ್ಲಾಡಳಿತದಿಂದ ಮರಳು ತೆಗೆಯಲು ಅನುಮತಿ ಸಿಕ್ಕಿರದಿದ್ದರೂ, ದಂಧೆಕೋರರು ಈಗಲೇ ಮರಳು ಎತ್ತುವ ಕಾರ್ಯ ಆರಂಭಿಸಿದ್ದಾರೆ.
ಮಂಗಳೂರಿನ ಅಡ್ಯಾರ್, ಕಣ್ಣೂರಿನಲ್ಲಿ ಮರಳು ಎತ್ತುವ ಕಾರ್ಯ ಸರಾಗವಾಗಿ ನಡೆದಿದೆ. ಫಲ್ಗುಣಿ ನದಿಯಿಂದಲೂ ಅಲ್ಲಲ್ಲಿ ಮರಳು ತೆಗೆಯಲು ದಂಧೆಕೋರರು ಕೆಲಸ ಆರಂಭಿಸಿದ್ದಾರೆಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಆದರೆ ತುರ್ತಾಗಿ ಮರಳು ತೆಗೆಯಬೇಕಿದ್ದರೆ ಇಲ್ಲಿನ ಕಾರ್ಮಿಕರಿಂದ ಸಾಧ್ಯವಾಗಲ್ಲ. ನದಿಯಲ್ಲಿ ನೀರು ಹೆಚ್ಚಿರುವಾಗ ಮರಳು ತೆಗೆಯುವುದು ಅಪಾಯ ಆಗಿರುವುದರಿಂದ ಸ್ಥಳೀಯ ಕಾರ್ಮಿಕರು ಈ ಕೆಲಸಕ್ಕೆ ಬರಲ್ಲ. ಅದಕ್ಕಾಗಿ ಈ ಹಿಂದೆ ಇಲ್ಲಿ ಮರಳೆತ್ತುವ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ಕಾರ್ಮಿಕರನ್ನು ಮಾಲಕರು ಮತ್ತೆ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮರಳು ಉದ್ಯಮ ನಡೆಸುವ ಒಬ್ಬರಲ್ಲಿ ಕೇಳಿದರೆ, ಹೌದಾ.. ನಂಗೊತ್ತಿಲ್ಲ ಮಾರ್ರೇ.. ಎಂದು ಮೂಗು ಮುರಿಯುತ್ತಾರೆ !
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm