ದ.ಕ‌. ಜಿಲ್ಲೆಯಲ್ಲಿ ಕೊರೊನಾ ಆರ್ಭಟ ; ಒಂದೇ ದಿನ 1529 ಮಂದಿಗೆ ಸೋಂಕು, ನಾಲ್ವರು ಸಾವು

05-05-21 07:55 pm       Mangaluru Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಆರ್ಭಟಿಸಿದ್ದು ಒಂದೇ ದಿನ ಬರೋಬ್ಬರಿ 1529 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಮಂಗಳೂರು, ಮೇ 5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಆರ್ಭಟಿಸಿದ್ದು ಒಂದೇ ದಿನ ಬರೋಬ್ಬರಿ 1529 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಇದೇ ವೇಳೆ ಕೋವಿಡ್ ಸೋಂಕಿತ ನಾಲ್ವರು ಸಾವು ಕಂಡಿದ್ದಾರೆ. ‌ಇದೇ ಸಂದರ್ಭದಲ್ಲಿ 608 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 985 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದರು. ಮಹಾಮಾರಿಗೆ ನಾಲ್ವರು ಮೃತಪಟ್ಟಿದ್ದ ಬಗ್ಗೆ ಮಾಹಿತಿ ನೀಡಲಾಗಿತ್ತು. 450 ಮಂದಿ ಕೊರೋನಾದಿಂದ ಗುಣಮುಖರಾಗಿದ್ದರು.‌

ಇದರೊಂದಿಗೆ ಕೊರೋನಾಗೆ ದ.ಕ. ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 768ಕ್ಕೆ ಏರಿಕೆಯಾಗಿದೆ.

ದ.ಕ. ಜಿಲ್ಲೆಯಲ್ಲಿ ಈವರೆಗೆ 48,281 ಮಂದಿ ಪಾಸಿಟಿವ್ ಆಗಿದ್ದು ಸದ್ಯಕ್ಕೆ 9,514 ಮಂದಿ ಸಕ್ರಿಯ ಸೋಂಕಿತರಿದ್ದಾರೆ.

Dakshina Kannada, Mangalore reports 1529 covid cases and four deaths as of May 5th 2021.