ಸಕಲೇಶಪುರದಲ್ಲಿ ಅಲೆಮಾರಿ ನಿಗಮದ ಅಧ್ಯಕ್ಷರ ಕಾರು ಅಪಘಾತ ; ಅಪಾಯದಿಂದ ಪಾರು

17-06-21 12:48 pm       Mangalore Correspondent   ಕರಾವಳಿ

ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಪ್ರಯಾಣಿಸುತ್ತಿದ್ದ ಕಾರು ಶಿರಾಡಿ ಘಾಟ್ ಬಳಿಯ ಸಕಲೇಶಪುರದ ಬಳಿ ಅಪಘಾತಕ್ಕೀಡಾಗಿದೆ.‌

ಮಂಗಳೂರು, ಜೂ.17: ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಪ್ರಯಾಣಿಸುತ್ತಿದ್ದ ಕಾರು ಶಿರಾಡಿ ಘಾಟ್ ಬಳಿಯ ಸಕಲೇಶಪುರದ ಬಳಿ ಅಪಘಾತಕ್ಕೀಡಾಗಿದೆ.‌

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ನೇತೃತ್ವದಲ್ಲಿ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ಜೊತೆಗೆ ಇಂದು ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ರವೀಂದ್ರ ಶೆಟ್ಟಿ ಇಂದು ಬೆಳಗ್ಗೆ ಮಂಗಳೂರಿನಿಂದ ಹೊರಟಿದ್ದರು. ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಸಕಲೇಶಪುರ ಜಂಕ್ಷನ್ ನಲ್ಲಿ ಅಪಘಾತ ನಡೆದಿದೆ. ಕಾರಿನ ಮುಂದಿನಿಂದ ಚಲಿಸುತ್ತಿದ್ದ ಬೈಕ್ ಅಚಾನಕ್ಕಾಗಿ ಬಲಗಡೆ ತಿರುಗಿಸಿದ್ದರಿಂದ ಕಾರಿನ ನಿಯಂತ್ರಣ ತಪ್ಪಿ ಹೊಟೇಲ್ ಒಂದರ ಬೋರ್ಡಿಗೆ ಡಿಕ್ಕಿಯಾಗಿದೆ. 

ಅಪಘಾತದಲ್ಲಿ ಕಾರಿಗೆ ಸ್ವಲ್ಪಮಟ್ಟಿಗೆ ಹಾನಿ ಉಂಟಾಗಿದ್ದು ರವೀಂದ್ರ ಶೆಟ್ಟಿ ಮತ್ತು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ರವೀಂದ್ರ ಶೆಟ್ಟಿ ಅವರು ಬೇರೊಂದು ಕಾರಿನಲ್ಲಿ ಬೆಂಗಳೂರಿನ ಸಭೆಗೆ ತೆರಳಿದ್ದಾರೆ.

Karnataka Alemari Development Corporation president from Mangalore Ravindra Shettys car meets an accident at Sakleshpur escapes unhurt.