ಬ್ರೇಕಿಂಗ್ ನ್ಯೂಸ್
26-06-21 08:56 pm Mangaluru Correspondent ಕರಾವಳಿ
ಕಾರ್ಕಳ, ಜೂನ್ 26: ನೆಹರು ಅಧಿಕಾರ ದಾಹದಿಂದಾಗಿ ಸ್ವಾತಂತ್ರ್ಯ ಕಾಲದಲ್ಲಿ ಅಖಂಡ ಭಾರತ ವಿಭಜನೆಯಾಗಿತ್ತು. ಆದರೆ, ಇನ್ನು ಹತ್ತು ವರ್ಷ ಕಾದರೆ, ಅಖಂಡ ಭಾರತ ಮತ್ತೆ ಸ್ವತಂತ್ರವಾಗಲಿದ್ದು, ಸದೃಢ ಭಾರತದ ಕನಸು ನನಸಾಗಲಿದೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಅವರು ಕಾರ್ಕಳದ ಶಾಸಕರ ಕಚೇರಿಯಲ್ಲಿ 1975ರ ತುರ್ತು ಪರಿಸ್ಥಿತಿಯ ಕರಾಳ ದಿನಗಳ ವಿಷಯದಲ್ಲಿ ಉಪನ್ಯಾಸ ನೀಡಿದರು. ಲಕ್ಷಾಂತರ ಮಂದಿಯ ಬಲಿದಾನ, ಚಳವಳಿಯಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ, ಇಂದಿರಾ ಗಾಂಧಿಯ ಕಾಲದಲ್ಲಿ ಭ್ರಷ್ಟಾಚಾರ, ಸರ್ವಾಧಿಕಾರ ಮೇರೆ ಮೀರಿದ್ದರಿಂದ ಜನತೆ ತಿರುಗಿ ಬೀಳುವ ಹಂತಕ್ಕೆ ಬಂದು ಮುಟ್ಟಿತ್ತು. ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಇದರಿಂದ ಬೆದರಿದ ರೈಲ್ವೇ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆದರೆ, ಪ್ರಧಾನಿ ಸ್ಥಾನದಲ್ಲಿದ್ದ ಇಂದಿರಾ ಗಾಂಧಿ ಕೇವಲ ತನ್ನ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಇಡೀ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ರಾತ್ರೋರಾತ್ರಿ ಈ ರೀತಿಯ ನಿರ್ಧಾರವನ್ನು ದೇಶದ ಮೇಲೆ ಹೇರಿ, ಪ್ರತಿಪಕ್ಷದ ನಾಯಕರಾದ ವಾಜಪೇಯಿ, ಆಡ್ವಾಣಿಯಂತವರನ್ನು ರಾತ್ರಿ ಬೆಳಗಾಗುವುದರ ಒಳಗೆ ಜೈಲಿಗೆ ತಳ್ಳಿದ್ದರು.
ತುರ್ತು ಪರಿಸ್ಥಿತಿಯ ಬಳಿಕ ನಡೆದ ಚುನಾವಣೆಯಲ್ಲಿ ಜನತಾ ಪಾರ್ಟಿ ಅತ್ಯಧಿಕ ಸ್ಥಾನಗಳನ್ನು ಪಡೆಯಿತು. ತನ್ನ ಸೋಲಿನಿಂದ ಕೆರಳಿದ ಇಂದಿರಾ ಗಾಂಧಿ, ತನ್ನೆಲ್ಲಾ ಸೋಲಿಗೆ ಆರೆಸ್ಸೆಸ್ ಕಾರಣ ಎಂದು ದೂಷಣೆ ಮಾಡಿದರು. ತುರ್ತು ಸ್ಥಿತಿಯ ಕಾಲದಲ್ಲಿ ಜನರ ಜೊತೆಗೆ ನಿಂತು ಇಂದಿರಾ ವಿರುದ್ಧ ಹೋರಾಟ ನಡೆಸಿದ್ದಕ್ಕೆ ಆರೆಸ್ಸೆಸ್ ಸಂಘಟನೆಯನ್ನು ದೂರಿದರು. ಅಂದು ದೇಶದ ಮೇಲೆ ಹೇರಿದ್ದ ತುರ್ತು ಸ್ಥಿತಿಯನ್ನು ವಿರೋಧಿಸಿ ಆರೆಸ್ಸೆಸ್ ಹೋರಾಟ ನಡೆಸಿದ್ದರಿಂದ ದೇಶ ಇಂದು ಸದೃಢವಾಗಿ ಬೆಳೆದು ನಿಂತಿದೆ ಎಂದು ಪ್ರಭಾಕರ ಭಟ್ ವಿಶ್ಲೇಷಿಸಿದರು.
If we had waited for ten more years, undivided India would have become independent and the dream of integrated India would have become a reality," said Rashtriya Swayamsevak Sangh (RSS) leader, Dr Prabhakar Bhat Kalladka. He was speaking at the live programme on the dark days of 1975 emergency held at the office of the MLA in Mangalore.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm