ಬ್ರೇಕಿಂಗ್ ನ್ಯೂಸ್
30-06-21 10:00 pm Richard, Mangaluru ಕರಾವಳಿ
ಮಂಗಳೂರು, ಜೂನ್ 30: ಮಂಗಳೂರು ನಗರದಲ್ಲಿ ಜುಲೈ ಒಂದರಿಂದಲೇ ಖಾಸಗಿ ಸಿಟಿ ಬಸ್ ಆರಂಭಿಸಲು ಬಸ್ ಮಾಲಕರ ಸಂಘ ನಿರ್ಧರಿಸಿದೆ. ಆದರೆ, ಬಸ್ ದರವನ್ನು 20 ಶೇಕಡಾ ಏರಿಸುವುದಾಗಿ ಸಿಟಿ ಬಸ್ ಮಾಲಕರ ಸಂಘ ಅಧ್ಯಕ್ಷ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.
ವಾರದ ಹಿಂದೆ ಲಾಕ್ಡೌನ್ ಸಡಿಲಿಕೆ ಆದರೂ, ಜುಲೈ ಬಳಿಕವೇ ಖಾಸಗಿ ಬಸ್ ಆರಂಭಿಸುವುದಾಗಿ ಬಸ್ ಮಾಲಕರು ತಿಳಿಸಿದ್ದರು. ಅದರಂತೆ, ಸಿಟಿ ಬಸ್ ಗಳನ್ನು ಜುಲೈ ಒಂದರಿಂದ ಆರಂಭಿಸಲು ನಿರ್ಧರಿಸಿದ್ದು ಆರಂಭದಲ್ಲಿ ಕೆಲವು ರೂಟ್ ಗಳಲ್ಲಿ ಸೀಮಿತ ಬಸ್ ಗಳನ್ನು ಮಾತ್ರ ರಸ್ತೆಗಿಳಿಸುವುದಾಗಿ ತಿಳಿಸಿದ್ದಾರೆ.
20 ಶೇ. ದರ ಏರಿಕೆಯೊಂದಿಗೆ ಬಸ್ ಇಳಿಸಲಾಗುತ್ತಿದೆ. ಆದರೆ ಆರಂಭದಲ್ಲಿ ಸೀಮಿತ ಸಂಖ್ಯೆಯ ಬಸ್ ಗಳನ್ನು ಇಳಿಸಿ, ಜುಲೈ 5 ರ ನಂತರ ಪೂರ್ಣ ಮಟ್ಟದಲ್ಲಿ ಬಸ್ ಗಳನ್ನು ರಸ್ತೆಗೆ ಇಳಿಸುವುದಾಗಿ ಖಾಸಗಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವಾ ತಿಳಿಸಿದ್ದಾರೆ.
ಆದರೆ, ಖಾಸಗಿ ಬಸ್ ಗಳ ದರ ಏರಿಕೆಗೆ ಜಿಲ್ಲಾಡಳಿತ ಒಪ್ಪಿಗೆ ನೀಡಿಲ್ಲ. ಆರ್ ಟಿಓ ಅಧಿಕಾರಿಗಳು ಮತ್ತು ಖಾಸಗಿ ಬಸ್ ಮಾಲಕರನ್ನು ಕರೆದು ಮೀಟಿಂಗ್ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ಖಾಸಗಿ ಬಸ್ ಮಾಲಕರು ದರ ಏರಿಸಿಯೇ ಸಂಚಾರ ನಡೆಸುವುದಾಗಿ ಹೇಳಿದ್ದಾರೆ. ಡೀಸೆಲ್ ದರ ಏರಿಕೆ ಆಗಿರುವುದರಿಂದ ಬಸ್ ದರ ಏರಿಕೆ ಅನಿವಾರ್ಯ. ಅಲ್ಲದೆ, 50 ಶೇ. ಅಷ್ಟೇ ಪ್ರಯಾಣಿಕರನ್ನು ಒಯ್ಯಲು ಅವಕಾಶ ಇರುವುದರಿಂದ ದರ ಏರಿಸದೆ ವಿಧಿಯಿಲ್ಲ ಎನ್ನುತ್ತಿದ್ಡಾರೆ.
After over a month of lockdown period, private buses will begin to ply in Mangalore from July 1, duly following Covid protocols with 50% seating capacity and 20 per cent hike in fares.
18-07-25 10:59 pm
Bangalore Correspondent
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 10:11 pm
Mangalore Correspondent
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm