ದೇಯಿ ಬೈದೆತಿ ಚಿತ್ರದ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಪುತ್ರ ರಸ್ತೆ ಅಪಘಾತದಲ್ಲಿ ಸಾವು !

03-07-21 05:38 pm       Udupi Correspondent   ಕರಾವಳಿ

ದೇಯಿ ಬೈದೆತಿ ಚಿತ್ರದ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಅವರ ಪುತ್ರ ಮಯೂರ್ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿ ಸಾವು ಕಂಡಿದ್ದಾರೆ.

ಉಡುಪಿ, ಜುಲೈ 3 : ದೇಯಿ ಬೈದೆತಿ ಚಿತ್ರದ ನಿರ್ದೇಶಕ, ನಟ ಉಡುಪಿಯ ಸೂರ್ಯೋದಯ ಪೆರಂಪಳ್ಳಿ ಅವರ ಪುತ್ರ ಮಯೂರ್ (20) ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿ ಸಾವು ಕಂಡಿದ್ದಾರೆ.

ಶುಕ್ರವಾರ ರಾತ್ರಿ ಮಯೂರ್ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಕೆಟಿಎಂ ಬೈಕ್ ನಲ್ಲಿ ತೆರಳುತ್ತಿದ್ದಾಗ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಮಯೂರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಬಗ್ಗೆ ಆಕೆಯ ಹೆಸರಲ್ಲೇ ಚಿತ್ರ ನಿರ್ಮಿಸಿ, ನಿರ್ದೇಶನ ಮಾಡಿದ್ದ ಸೂರ್ಯೋದಯ ಪೆರಂಪಳ್ಳಿ ಅದರಿಂದಲೇ ಹೆಸರು ಗಳಿಸಿದ್ದರು.‌

Kannada, Tulu director Suryoday Perampalli, 20-year-old son, Mayur, met with an accident at midnight on Friday and Saturday. The police said that the young star kid died shortly after the accident. Mayur succumbed after his motorbike collided with a water tanker.