ಕಾಸರಗೋಡು ; ದೋಣಿ ಮಗುಚಿ ಬಿದ್ದು ಮೂವರು ಮೀನುಗಾರರು ನೀರುಪಾಲು 

04-07-21 01:50 pm       Mangaluru Correspondent   ಕರಾವಳಿ

ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರ ಮಧ್ಯೆ ಮಗುಚಿ ಬಿದ್ದು ನಾಲ್ವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ. 

ಕಾಸರಗೋಡು, ಜುಲೈ 4: ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರ ಮಧ್ಯೆ ಮಗುಚಿ ಬಿದ್ದು ನಾಲ್ವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ. 

ದೋಣಿಯಲ್ಲಿ 7 ಮಂದಿ ಮೀನುಗಾರರು ಇದ್ದರೆನ್ನಲಾಗಿದ್ದು, ನಾಲ್ವರು ಈಜಿ ದಡ ಸೇರಿದ್ದಾರೆ. ಇತರ ಮೂವರು ನೀರುಪಾಲಾಗಿದ್ದಾರೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. 

ನಾಪತ್ತೆ ಆದ ಕಾರ್ಮಿಕರನ್ನು ಸಂದೀಪ್, ಕಾರ್ತಿಕ್ ಹಾಗೂ ರತೀಶ್ ಎಂದು ಗುರುತಿಸಲಾಗಿದೆ. ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯಿಂದ ಹುಡುಕಾಟ ಮುಂದುವರಿದಿದೆ. 

ಬೃಹತ್ ಮೀನುಗಾರಿಕೆಗೆ ನಿಷೇಧ ಇರುವುದರಿಂ ಸ್ಥಳೀಯ ಮೀನುಗಾರರು ದೋಣಿಯಲ್ಲಿ ಮೀನು ಹಿಡಿಯಲು ತೆರಳುತ್ತಾರೆ. ಕಾಸರಗೋಡು ನಗರ ಹೊರವಲಯದ ತೀರದ ನಿವಾಸಿಗಳು ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

Three fishermen are missing after a fishing boat capsizes off Kasaragod coast at wee hours on Sunday. Reports reaching here said the boat with seven fishermen on board capsized in the Arabian sea off Kizhoor coast near here. However, four fishermen swam to the shore.