ವರದಕ್ಷಿಣೆ ಕಿರುಕುಳ ; ಸಾವಿಗೆ ಶರಣಾದ ಉತ್ತರ ಪ್ರದೇಶ ಮೂಲದ ಯುವತಿ 

07-07-21 10:30 pm       Mangaluru Correspondent   ಕರಾವಳಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಉತ್ತರ ಪ್ರದೇಶ ಮೂಲದ ಯುವತಿಯೊಬ್ಬಳು ಸಾವಿಗೆ ಶರಣಾಗಿರುವ ಘಟನೆ ನಗರದ ಉರ್ವಾ ಸ್ಟೋರ್ ನಲ್ಲಿ ನಡೆದಿದ್ದು ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು, ಜುಲೈ 7: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಉತ್ತರ ಪ್ರದೇಶ ಮೂಲದ ಯುವತಿಯೊಬ್ಬಳು ಸಾವಿಗೆ ಶರಣಾಗಿರುವ ಘಟನೆ ನಗರದ ಉರ್ವಾ ಸ್ಟೋರ್ ನಲ್ಲಿ ನಡೆದಿದ್ದು ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉತ್ತರ ಪ್ರದೇಶ ಮೂಲದ ನಿವಾಸಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬಿನ್ ಕ್ರೂ ಆಗಿ ಕೆಲಸ ಮಾಡುತ್ತಿದ್ದ ರಾಕೇಶ್ ಹೂಜಾ (29) ಎಂಬಾತನ ಪತ್ನಿ ಪ್ರೀತಿ (26) ಎಂಬ ಯುವತಿ ಸಾವಿಗೆ ಶರಣಾದವಳು.‌ 

ಒಂದೂವರೆ ವರ್ಷದ ಹಿಂದೆ ಇವರ ಮದುವೆಯಾಗಿದ್ದು ಮಂಗಳೂರಿನ ಉರ್ವಾ ಸ್ಟೋರ್ ನಲ್ಲಿ ನೆಲೆಸಿದ್ದರು.  ಪ್ರೀತಿಗೆ ವರದಕ್ಷಿಣೆಗಾಗಿ ಗಂಡ ಪೀಡಿಸುತ್ತಿದ್ದ ಎಂಬ ದೂರು ಕೇಳಿಬಂದಿದೆ. ಈ ಬಗ್ಗೆ ಪ್ರೀತಿ ಕುಟುಂಬಸ್ಥರು ಉರ್ವಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‌

Mangalore Dowry harassment Uttar Pradesh orgin Wife commits Suicide in Urwa. The deceased has been identified as Preethi (26). Girs family allege that Dowry Harassment has lead her to suicide. A case has been registered at Urwa Police Station.