ಮಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ಆಗಿ ದಿನೇಶ್ ಕುಮಾರ್ ನೇಮಕ

12-07-21 12:06 pm       Mangalore Correspondent   ಕರಾವಳಿ

ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆಗಿ ಬಿ.ಪಿ. ದಿನೇಶ್ ಕುಮಾರ್ ನೇಮಕಗೊಂಡಿದ್ದು ಇಂದು ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. 

ಮಂಗಳೂರು, ಜುಲೈ 12: ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆಗಿ ಬಿ.ಪಿ. ದಿನೇಶ್ ಕುಮಾರ್ ನೇಮಕಗೊಂಡಿದ್ದು ಇಂದು ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. 

ಮಡಿಕೇರಿಯಲ್ಲಿ ಡಿವೈಎಸ್ಪಿ ಆಗಿದ್ದ ದಿನೇಶ್ ಕುಮಾರ್ ಎಡಿಶನಲ್ ಎಸ್ಪಿ ದರ್ಜೆಗೆ ಬಡ್ತಿ ಪಡೆದು ಮಂಗಳೂರು ಡಿಸಿಪಿ ಆಗಿ ನೇಮಕಗೊಂಡಿದ್ದಾರೆ. 1994 ರ ಬ್ಯಾಚಿನಲ್ಲಿ ಎಸ್ಐ ಆಗಿ ಪೊಲೀಸ್ ಇಲಾಖೆ ಸೇರಿದ್ದ ದಿನೇಶ್ ಕುಮಾರ್ ಸುದೀರ್ಘ ಸೇವೆಯ ಬಳಿಕ ನಿನ್ನೆಯಷ್ಟೇ ಕೆ ಎಸ್ ಪಿಎಸ್ ಆಗಿ ಪ್ರಮೋಟ್ ಆಗಿದ್ದರು. ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೂ ಮುನ್ನ ಕುಂದಾಪುರದಲ್ಲಿಯೂ ಡಿವೈಎಸ್ಪಿ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 

ಈ ಹಿಂದೆ ನಗರ ಅಪರಾಧ ವಿಭಾಗದ ಡಿಸಿಪಿ ಆಗಿದ್ದ ವಿನಯ ಗಾಂವ್ಕರ್ ಎಪ್ರಿಲ್ 31ಕ್ಕೆ ನಿವೃತ್ತಿಯಾಗಿದ್ದರು. ಆಬಳಿಕ ಆ ಹುದ್ದೆಯ ಜವಾಬ್ದಾರಿಯನ್ನು ಹೆಚ್ಚುವರಿ ಆಗಿ ಕಾನೂನು ಸುವ್ಯವಸ್ಥೆ ವಿಭಾಗದ ಹರಿರಾಮ್ ಶಂಕರ್ ನೋಡಿಕೊಂಡಿದ್ದರು.

Dinesh Kumar was appointed as New DCP crime and traffic of Mangalore city. He took charge as on July 12th. Vinay Gaonkar was the previous DCP but after his retirement, Dinesh Kumar who was the DYSP of Madikeri has taken the charge.