ರಸ್ತೆ ಅಪಘಾತ ; ತೀವ್ರ ಗಾಯಗೊಂಡಿದ್ದ ಉಪನ್ಯಾಸಕಿ ಚಿಕಿತ್ಸೆ ಫಲಿಸದೆ ಸಾವು

12-07-21 03:16 pm       Headline Karnataka News Network   ಕರಾವಳಿ

ಅಪಘಾತ ಒಂದರಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿ ಪ್ರಿಯಾಂಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಮಂಗಳೂರು, ಜುಲೈ 12: ಅಪಘಾತ ಒಂದರಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿ ಪ್ರಿಯಾಂಕ (31) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ವಾಮಂಜೂರು ನಿವಾಸಿ ವಿನೋದ್ ರಾಜ್ ಅಮೀನ್ ಎಂಬವರ ಪತ್ನಿ ಪ್ರಿಯಾಂಕ ಶನಿವಾರ ಸಂಜೆ ಅಪಘಾತಕ್ಕೀಡಾಗಿದ್ದರು.‌ ಯೆಯ್ಯಾಡಿ ಬಳಿಯ ಹರಿಪದವು ಎಂಬಲ್ಲಿ ಈಕೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಆಲ್ಟೋ ಕಾರು ಡಿಕ್ಕಿಯಾಗಿತ್ತು. 

ತಲೆಗೆ ಗಂಭೀರ ಗಾಯಗೊಂಡು ಕೋಮಾದಲ್ಲಿದ್ದ ಪ್ರಿಯಾಂಕ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ‌ಕೋಟೆಕಾರು ಮೂಲದ ಪ್ರಿಯಾಂಕ, ಉಳ್ಳಾಲ ಪಾಂಡ್ಯರಾಜ್ ಬಳ್ಳಾಲ್ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಬುಲೆಟ್ ಸೇರಿದಂತೆ ಎಲ್ಲ ರೀತಿಯ ವಾಹನಗಳನ್ನು ಸಲೀಸಾಗಿ ಚಲಾಯಿಸುತ್ತಿದ್ದ ಪ್ರಿಯಾಂಕ ಕಾಲೇಜು ದಿನಗಳಲ್ಲೇ ಭಾರೀ ಫೇಮಸ್ ಆಗಿದ್ದರು ಎಂದು ಅವರ ಸಹವರ್ತಿಗಳು ತಿಳಿಸಿದ್ದಾರೆ. ‌

Mangalore 31-year-old teacher dies of a road accident near Yeyyadi. The deceased has been identified as Priyanka from Vamanjoor. She was a professor at a private nursing college in Mangalore.