ಬ್ರೇಕಿಂಗ್ ನ್ಯೂಸ್
13-07-21 03:47 pm Mangalore Correspondent ಕರಾವಳಿ
ಬಂಟ್ವಾಳ, ಜುಲೈ 13: ಮನೆಯಲ್ಲಿ ಗ್ಯಾಸ್ ಗೀಸರ್ ಬಳಸಿ ಸ್ನಾನ ಮಾಡುತ್ತಿದ್ದ ಯುವಕನೊಬ್ಬ ಬಾತ್ ರೂಮಿನಲ್ಲೇ ಉಸಿರುಕಟ್ಟಿ ಸಾವು ಕಂಡ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ. ಫರಂಗಿಪೇಟೆಯ ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಸ್ ಅಹ್ಮದ್ (23) ಮೃತ ಯುವಕ. ಜುಲೈ 12ರಂದು ಸಂಜೆ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿದ್ದಾಗ ಘಟನೆ ನಡೆದಿದೆ.
ಮಳೆ ಇದ್ದುದರಿಂದ ಗೀಸರ್ ಆನ್ ಮಾಡಿ, ಇಜಾಸ್ ಸ್ನಾನಕ್ಕೆ ಹೋಗಿದ್ದ. ಆದರೆ, ಒಂದು ಗಂಟೆ ಕಳೆದರೂ ಹೊರಗೆ ಬರದ್ದನ್ನು ಕಂಡು ತಂದೆ ಮತ್ತು ಇತರ ಸೋದರರು ಸೇರಿ ಬಾಗಿಲು ಬಡಿದು ಕರೆದಿದ್ದಾರೆ. ಬಾಗಿಲು ಬಡಿದರೂ ಸ್ಪಂದಿಸದ್ದರಿಂದ ಬಳಿಕ ಒಡೆದು ನೋಡಿದಾಗ, ಇಜಾಸ್ ನೆಲದಲ್ಲಿ ಕುಸಿದು ಬಿದ್ದಿರುವುದು ಕಂಡಿದೆ. ಕೂಡಲೇ ಆಸ್ಪತ್ರೆಗೆ ಒಯ್ದಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗೀಸರ್ ವರ್ಕಿಂಗ್ ಇರುವಾಗ ಕಾರ್ಬನ್ ಮೋನೋಕ್ಸೈಡ್ ಬಿಡುಗಡೆಯಾಗುವುದು ಮತ್ತು ಈ ವೇಳೆ ಬಾತ್ ರೂಮ್ ಬಾಗಿಲು ಬಂದ್ ಮಾಡಿದ್ದರಿಂದ ಅದನ್ನು ಸೇವಿಸಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಇಜಾಸ್ ಹುಬ್ಬಳ್ಳಿಯಲ್ಲಿ ಆಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದು, ವಾರದ ಹಿಂದಷ್ಟೇ ಊರಿಗೆ ಬಂದಿದ್ದ. ಇಜಾಸ್ ಅಹ್ಮದ್, ತಂದೆ, ತಾಯಿ ಮತ್ತು ಮೂವರು ಸೋದರರನ್ನು ಅಗಲಿದ್ದಾರೆ.
The youth died due to asphyxiation while having a bath due to the gas geyser. This incident is reported from Maripalla of Farangipet in the taluk on the afternoon of Monday, July 12. Ijaz Ahmed (23), son of Ismail, is the youth who died in this incident. He was having a bath in the bathroom with the geyser on.
23-10-24 09:41 pm
Bangalore Correspondent
C.P. Yogeshwar joins Congress: ಬಿಜೆಪಿ-ಜೆಡಿಎಸ್...
23-10-24 12:41 pm
Bangalore Rain, School holiday: ಬೆಂಗಳೂರಿನಲ್ಲಿ...
22-10-24 11:13 pm
ಚನ್ನಪಟ್ಟಣ ; ಯೋಗೀಶ್ವರ್ ಗೆ ಮೈತ್ರಿ ಟಿಕೆಟ್ ನೀಡಲು...
22-10-24 11:06 pm
Kengari body found, Bangalore: ಬಿಂದಿಗೆ ಎತ್ತಿಕ...
22-10-24 08:27 pm
21-10-24 02:23 pm
HK News Desk
2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಆಗಿದ್ದ ಬಿಲಿಯನೇರ್...
20-10-24 10:53 pm
ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮ...
17-10-24 11:16 am
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
24-10-24 01:25 am
Mangaluru Correspondent
Mangalore, Babu Pilar, Ullal press club; 4500...
23-10-24 09:49 pm
Mangalore Police, Accident, Kadri: ರಾತ್ರಿ ವೇಳ...
23-10-24 06:35 pm
ಮಂಗಳೂರು ವಿವಿಯಲ್ಲಿ ತುಳು ಎಂಎ ಪ್ರವೇಶ ಶುಲ್ಕ ಹೆಚ್ಚ...
23-10-24 06:26 pm
Mangalore, Arun Puthila, Puttur VHP: ವಿಎಚ್ ಪಿ...
23-10-24 03:15 pm
23-10-24 08:38 pm
Mangalore Correspondent
Hassan, Bangladeshi arrest: ಹಾಸನ ನಗರದಲ್ಲಿ ನೆಲ...
22-10-24 02:49 pm
Udupi Murder, Crime news: ಕುಡಿದ ಮತ್ತಿನಲ್ಲಿ ಸ್...
22-10-24 02:29 pm
Mangalore stone railway track, Thokottu; ರೈಲು...
20-10-24 11:47 am
Belagavi Cash Seized, crime, Police: ಮಹಾರಾಷ್ಟ...
19-10-24 02:38 pm