ಎಸಿಬಿ ರೇಡ್ ; ಮಂಗಳೂರಿನ ಇಂಜಿನಿಯರ್ ಮನೆಯಲ್ಲಿ ಕೇಜಿ ಚಿನ್ನ, 3.5 ಕೇಜಿ ಬೆಳ್ಳಿ, ಮೂರು ಕಡೆ ಆಸ್ತಿ ಪತ್ತೆ  

15-07-21 10:11 pm       Mangaluru Correspondent   ಕರಾವಳಿ

ಮಂಗಳೂರಿನ ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ. ಶ್ರೀಧರ್ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಸಿದ್ದನ್ನು ಪತ್ತೆ ಮಾಡಿದ್ದಾರೆ. 

ಮಂಗಳೂರು, ಜುಲೈ 15: ಮಂಗಳೂರಿನ ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ. ಶ್ರೀಧರ್ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಸಿದ್ದನ್ನು ಪತ್ತೆ ಮಾಡಿದ್ದಾರೆ. 

ಶ್ರೀಧರ್ ಗೆ ಸೇರಿದ ಮಂಗಳೂರಿನಲ್ಲಿರುವ ಮನೆ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿ, ತಂದೆ ಮನೆಯಾದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ, ಮೈಸೂರಿನಲ್ಲಿರುವ ಸ್ವಂತ ಮನೆ ಸೇರಿ ವಿವಿಧ ಕಡೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು. 

ಮಂಗಳೂರಿನ ಮನೆಯಲ್ಲಿ 13 ಲಕ್ಷ ಮೌಲ್ಯದ 920 ಗ್ರಾಂ ಚಿನ್ನ, 90 ಸಾವಿರ ಮೌಲ್ಯದ 3.5 ಕೇಜಿ ಬೆಳ್ಳಿ, ಒಂದು ಬೆಲೆನೋ ಕಾರು, ಒಂದು ಬುಲೆಟ್ ಬೈಕ್ ಹಾಗು ಬೆಂಗಳೂರು, ಹಾಸನದ ಬೇಲೂರು, ಮೈಸೂರಿನಲ್ಲಿ 30/40 ಸೈಟಿನ ಜಾಗ ಹೊಂದಿರುವ ದಾಖಲೆ ಪತ್ರಗಳು ಪತ್ತೆಯಾಗಿವೆ. 

ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಕೆ.ಸಿ ಪ್ರಕಾಶ್, ಇನ್ ಸ್ಪೆಕ್ಟರ್ ಶ್ಯಾಮಸುಂದರ್, ಇನ್ ಸ್ಪೆಕ್ಟರ್ ಗುರುರಾಜ್, ಸಿಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ ಡಿ.ಎ, ರಾಧಾಕೃಷ್ಣ ಕೆ., ಆದರ್ಶ, ಗಂಗಣ್ಣ , ವೈಶಾಲಿ, ಚಾಲಕ ರಾಜೇಶ್ ಪಾಲ್ಗೊಂಡಿದ್ದರು.

ಮಂಗಳೂರು ಸೇರಿ ನಲ್ವತ್ತಕ್ಕೂ ಹೆಚ್ಚು ಕಡೆ ಎಸಿಬಿ ದಾಳಿ ; ಭ್ರಷ್ಟ ಅಧಿಕಾರಿಗಳಲ್ಲಿ ನಡುಕ

Mangalore ACB officials raid town planning executive engineer seize 3.5 kilo silver, 13 Lakhs worth Gold and property. ACB officials had raided town planning executive engineer Shridhar residence and office at Jyothi and Dc office in Mangalore. The ACB has raided more than 40 officers residences and offices in four districts of Dakshina Kannada, Udupi and Mandya and Bangalore.