ಬ್ರೇಕಿಂಗ್ ನ್ಯೂಸ್
19-07-21 02:40 pm Mangaluru Correspondent ಕರಾವಳಿ
ಬೆಳ್ತಂಗಡಿ, ಜುಲೈ 19: ಗಂಡನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣಾಗಿದ್ದರು. ವಿಪರೀತ ಮಳೆಯಿಂದಾಗಿ ಶಾಮಿಯಾನ ಹಾಕಿ ಪತ್ನಿಯ ಅಂತ್ಯಕ್ರಿಯೆ ವಿಧಿಯನ್ನು ನಡೆಸಲಾಗಿತ್ತು. ಆದರೆ, ಮರುದಿನ ಅಂತ್ಯವಿಧಿಗೆ ಹಾಕಿದ್ದ ಶಾಮಿಯಾನದ ಕಂಬಕ್ಕೆ ಗಂಡನೂ ನೇಣು ಹಾಕ್ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನಡೆದಿದೆ.
ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ಘಟನೆ ನಡೆದಿದ್ದು ಚಂದ್ರಾವತಿ (49) ಮತ್ತು ಆಕೆಯ ಗಂಡ ಶಿವಪ್ಪ ಗೌಡ (56) ಮೃತರು.
ಚಂದ್ರಾವತಿ ಶನಿವಾರ ಮಧ್ಯಾಹ್ನ ದನಕ್ಕೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದರು. ಆದರೆ, ತೋಟಕ್ಕೆ ಹೋದವರು ಮರಳಿ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ, ಆಕೆ ತೋಟದ ಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು.
ಗಂಡನ ವಿಪರೀತ ಕುಡಿತದ ಚಟದಿಂದಾಗಿ ಬೇಸತ್ತಿದ್ದ ಪತ್ನಿ ಚಂದ್ರಾವತಿ ಮನೆಯಲ್ಲಿ ಬದುಕುವುದೇ ಕಷ್ಟ ಎನ್ನುವ ಸ್ಥಿತಿಗೆ ತಲುಪಿದ್ದರು. ಗಂಡನ ಪೀಡನೆಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಅಂದು ರಾತ್ರಿಯೇ ಸ್ಥಳೀಯರು ಸೇರಿ ಮನೆಯ ಆವರಣದಲ್ಲಿ ಮತ್ತು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಶಾಮಿಯಾನ ಹಾಕಿ, ರಾತ್ರಿ ವೇಳೆಗೆ ಚಂದ್ರಾವತಿಯ ಅಂತ್ಯವಿಧಿ ಮುಗಿಸಿದ್ದರು.
ಮರುದಿನ ಬೆಳಗ್ಗೆ ನೋಡಿದರೆ, ಶಿವಪ್ಪ ಗೌಡ ಅಂತ್ಯ ವಿಧಿಗೆ ಹಾಕಿದ್ದ ಶಾಮಿಯಾನದ ರಾಡಿಗೆ ನೇಣು ಹಾಕ್ಕೊಂಡು ಮೃತಪಟ್ಟಿದ್ದು ಕಂಡುಬಂದಿದೆ. ಶಿವಪ್ಪ ಗೌಡ ಕೂಡ ಅದೇ ರೀತಿ ಅಂತ್ಯ ಕಂಡಿದ್ದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ. ಶಿವಪ್ಪ - ಚಂದ್ರಾವತಿ ದಂಪತಿಗೆ ಮಕ್ಕಳು ಇರಲಿಲ್ಲ. ತನ್ನ ತಾಯಿ ನಾಗಮ್ಮ ಜೊತೆ ಮುಡಿಪಿರೆಯಲ್ಲಿ ಶಿವಪ್ಪ ಗೌಡ ವಾಸವಿದ್ದರು. ಈಗ ಮಗ ಮತ್ತು ಸೊಸೆ ಸಾವು ಕಂಡಿದ್ದರಿಂದ ಮನೆಯಲ್ಲಿ ವೃದ್ಧ ತಾಯಿ ಒಬ್ಬಂಟಿಯಾಗಿದ್ದಾರೆ. ಘಟನೆ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a shocking incident reported from Mudipire in Machina village in the taluk, a man ended his life hanging himself from the rod of the shamiyana erected at the funeral site of his wife. Chandravathi (49), wife of Shivappa Gowda (56), had ended her life on Saturday. Shivappa ended his life in the early hours of Sunday July 18.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm