ಬ್ರೇಕಿಂಗ್ ನ್ಯೂಸ್
25-07-21 11:03 pm Mangaluru Correspondent ಕರಾವಳಿ
ಮಂಗಳೂರು, ಜುಲೈ 25: ಟಿವಿ ಜಾಹೀರಾತಿನಲ್ಲಿ ಯುವತಿಯೊಬ್ಬಳು ತಾಯಿ ಜೊತೆಗೆ ಕಾರಿನಲ್ಲಿ ತೆರಳಿದ್ದಾಗ ಟೈರ್ ಪಂಕ್ಚರ್ ಆಗಿ ಬಳಿಕ ಯುವತಿಯೇ ಟೈರ್ ತೆಗೆದು ಹಾಕುತ್ತಾಳೆ. ಕೊನೆಯಲ್ಲಿ ಅಪ್ಪನನ್ನು ನೋಡಿದ್ದೆ ಎಂದುಸುರುತ್ತಾ ಟಾನಿಕ್ ಬಗ್ಗೆ ಹೇಳುತ್ತಾಳೆ. ಅದು ಜಾಹೀರಾತು. ನಿಜ ಜೀವನದಲ್ಲಿ ಯುವತಿ ಕಾರು ಡ್ರೈವ್ ಮಾಡುವಾಗ ಟೈರ್ ಪಂಕ್ಚರ್ ಆದರೆ ಏನು ಗತಿ ? ಇಂಥಾದ್ದೇ ಪ್ರಸಂಗ ಮಂಗಳೂರಿನಲ್ಲಿ ಇವತ್ತು ಆಗಿತ್ತು.
ಮಹಿಳೆ ಮತ್ತು ಮಗು ಮಾತ್ರ ಇದ್ದ ಕಾರೊಂದು ನಾಗುರಿಯಿಂದ ಪಂಪ್ವೆಲ್ ಕಡೆಗೆ ಬರುತ್ತಿದ್ದಾಗ ಟಯರ್ ಪಂಕ್ಚರ್ ಆಗಿತ್ತು. ಕೂಡಲೇ ಕಾರಿನಿಂದಿಳಿದ ಮಹಿಳೆ ಹೊರಗೆ ನಿಂತು ಏನು ಮಾಡುವುದೆಂದು ತೋಚದೆ ನಿಂತಿದ್ದರು. ಆಕೆ ಕುಂದಾಪುರ ಮೂಲದ ಮಹಿಳೆಯಾಗಿದ್ದರಿಂದ ಸಂಬಂಧಿಕರು ಹತ್ತಿರ ಇರಲಿಲ್ಲವೋ ಏನೋ..ಮಹಿಳೆಯ ಅಸಹಾಯಕತೆ ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ತಾವೇ ಟೈರ್ ಬಿಚ್ಚಿಸಲು ನೆರವಾಗಿದ್ದಾರೆ. ರಸ್ತೆ ಬದಿ ಕಾರನ್ನು ಪಾರ್ಕ್ ಮಾಡಿ, ಟೈರ್ ತೆಗೆದು ಬೇರೆ ಸ್ಟೆಪಿನ್ ಟಯರ್ ಅಳವಡಿಸಿ ಮಾನವೀಯತೆ ಕಾರ್ಯ ಮಾಡಿದ್ದಾರೆ.

ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿತ್ತು. ಇದೇ ಸಂದರ್ಭ ಹೈವೇ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ನೆರವಿಗೆ ನಿಂತಿದ್ದಾರೆ. ನಾಗುರಿ ಸಂಚಾರಿ ಠಾಣೆ ಎಎಸ್ ಐ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾಡ್೯ ಆಸಿಫ್ ಸೇರಿ ಮಾಡಿರುವ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
Mangalore Kankandy Traffic Police help a woman fix the car tyre. Traffic police SI Lasrado, Mahesh and Home guard Asif help in fixing the punctured car. The Picture of this goes viral on social media.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 09:50 am
HK News Staffer
ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ...
08-09-26 08:27 am
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm