ಬ್ರೇಕಿಂಗ್ ನ್ಯೂಸ್
29-07-21 02:36 pm Mangaluru Correspondent ಕರಾವಳಿ
ಉಳ್ಳಾಲ, ಜು.29: ಅಂಬ್ಲಮೊಗರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಸಹಾಯಕರಾಗಿರುವ ನಿತಿನ್ ಶೆಟ್ಟಿ (ಉಗ್ರಾಣಿ) ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಅಂಬ್ಲಮೊಗರುವಿನ ಪ್ರತಿಷ್ಟಿತ ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ (34) ಆತ್ಮಹತ್ಯೆಗೈದ ದುರ್ದೈವಿ. ತನ್ನ ನಿವಾಸದ ಮೇಲ್ಮಹಡಿಯ ಬೆಡ್ ರೂಮಿನಲ್ಲಿ ನಿತಿನ್ ಶೆಟ್ಟಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ನಿತಿನ್ ಅವರು ಅಂಬ್ಲಮೊಗರು ಗ್ರಾಮ ಪಂಚಾಯತಿನಲ್ಲಿ ಗ್ರಾಮಕರಣಿಕರ ಸಹಾಯಕರಾಗಿದ್ದರು. ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದ ನಿತಿನ್ ಅವರು ಸ್ಥಳೀಯ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೂರು ವರ್ಷದ ಹಿಂದಷ್ಟೆ ಮದುವೆಯಾಗಿದ್ದು ಇಂದು ಬೆಳಗ್ಗೆ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುತ್ತಾರಿನ ವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. ನಂತರ ಮನೆಗೆ ತೆರಳಿದ ನಿತಿನ್ ಮೇಲ್ಮಹಡಿಯ ಬೆಡ್ ರೂಮಿನೊಳಗೆ ಹೋಗಿದ್ದರೆನ್ನಲಾಗಿದೆ. ಬೆಳಗ್ಗೆ 9.30 ಆದರೂ ಮಗ ಚಹಾ ಕುಡಿಯಲು ಏಕೆ ಬಂದಿಲ್ಲವೆಂದು ತಾಯಿ ರೂಮಿನೊಳಗೆ ಹೋದಾಗ ಆತಹತ್ಯೆ ವಿಚಾರ ಬೆಳಕಿಗೆ ಬಂದಿದೆ. ನಿತಿನ್ ಅವರು ನೆಲೆಸಿದ್ದ ಮನೆಯ ಕೆಳ ಅಂತಸ್ತಿನಲ್ಲಿ ಅಣ್ಣ , ಅತ್ತಿಗೆ ಅವರ ಎರಡು ಮಕ್ಕಳು ವಾಸವಿದ್ದರು. ಮೃತ ನಿತಿನ್ ಅವರು ತಾಯಿ, ಪತ್ನಿ, ಮೂರು ಸಹೋದರರನ್ನ ಅಗಲಿದ್ದಾರೆ. ಕೊಣಾಜೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.
ಎರಡು ವರುಷದ ಹಿಂದೆ ತಂದೆಯ ದಾರುಣ ಸಾವು ;
ಎರಡು ವರುಷದ ಹಿಂದಷ್ಟೆ ನಿತಿನ್ ಶೆಟ್ಟಿ ಅವರ ತಂದೆ ದಯಾನಂದ ಶೆಟ್ಟಿ ಅವರು ಸೀಯಾಳ ಕೊಯ್ಯಲೆಂದು ತೆಂಗಿನ ಮರಕ್ಕೆ ಏರಿ ಮರದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದರು. ಇದೀಗ ದಯಾನಂದ ಶೆಟ್ಟಿ ಅವರ ಮಗನಾದ ನಿತಿನ್ ಆತ್ಮಹತ್ಯೆಗೈದಿದ್ದು ಕುಟುಂಬಸ್ಥರು, ಸ್ನೇಹಿತ ವರ್ಗದವರನ್ನು ದುಃಖ ತಪ್ತರನ್ನಾಗಿಸಿದೆ.
Mangalore Amblamogaru Panchayat revenue worker commits suicide at his house. The deceased has been identified as Nithin Shetty (34). The reason for this extreme step is yet to be known. The Konaje police are investigating the case.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 07:25 pm
HK News Desk
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm