ತಲಪಾಡಿ ; ನಿರ್ಜನ ಪ್ರದೇಶದ ಕೆರೆಯಲ್ಲಿ ಟೋಲ್ ಪ್ಲಾಝಾ ಸೆಕ್ಯುರಿಟಿ ಗಾರ್ಡ್ ಶವ ಪತ್ತೆ ! 

10-08-21 06:59 pm       Mangaluru Correspondent   ಕರಾವಳಿ

ತಲಪಾಡಿ ಟೋಲ್ ಪ್ಲಾಝಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿಯೊಬ್ಬರ ಶವ ತಲಪಾಡಿ ಬಳಿಯ ನಾರ್ಲ ಪಡೀಲಿನ ನಿರ್ಜನ ಪ್ರದೇಶದ ಕೆರೆಯೊಂದರಲ್ಲಿ ಪತ್ತೆಯಾಗಿದೆ. 

ಉಳ್ಳಾಲ, ಆ.10: ತಲಪಾಡಿ ಟೋಲ್ ಪ್ಲಾಝಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿಯೊಬ್ಬರ ಶವ ತಲಪಾಡಿ ಬಳಿಯ ನಾರ್ಲ ಪಡೀಲಿನ ನಿರ್ಜನ ಪ್ರದೇಶದ ಕೆರೆಯೊಂದರಲ್ಲಿ ಪತ್ತೆಯಾಗಿದೆ. 

ಮೃತರನ್ನ ನಾರ್ಲ ಪಡೀಲಿನ ನಿವಾಸಿ ರಾಜೇಶ್ ಶೆಟ್ಟಿ (54) ಎಂದು ಗುರುತಿಸಲಾಗಿದೆ. ನಾರ್ಲ ಪಡೀಲ್ ಕೇರಳ ಕರ್ನಾಟಕದ ಗಡಿ ಪ್ರದೇಶವಾಗಿದ್ದು ಇಲ್ಲಿನ ನಿರ್ಜನ ಪ್ರದೇಶದಲ್ಲಿರುವ ಕೆರೆಯಲ್ಲಿ ಈಜಾಡಲು ಗಡಿಭಾಗದ ನಿವಾಸಿಗಳು ಬರುತ್ತಾರೆ. ಇಂದು ಸಂಜೆ ಈಜಾಡಲು ಕೆರೆಗೆ ಬಂದಿದ್ದ ಸ್ಥಳೀಯರು ಶವವನ್ನು ಕಂಡಿದ್ದು ಬಳಿಕ ಕೆರೆಯಿಂದ ಮೃತದೇಹ ಮೇಲಕ್ಕೆತ್ತಿದ್ದಾರೆ. 

ರಾಜೇಶ್ ಅವರು ಸಂಜೆ 4 ಗಂಟೆಗೆ ಟೋಲ್ ಪ್ಲಾಝಾದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದು, ನಂತರ ಮನೆಯಿಂದ ಹೊರ ಹೋದವರು ಸಂಜೆ ವೇಳೆ ಶವವಾಗಿ ಪತ್ತೆಯಾಗಿದ್ದಾರೆ. ರಾಜೇಶ್ ಶೆಟ್ಟಿಯವರ ಸಾವು ಹೇಗೆ ಸಂಭವಿಸಿತೆಂದು ತಿಳಿದು ಬಂದಿಲ್ಲ. ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ರಾಜೇಶ್ ಅವರು ಪತ್ನಿ, ಎರಡು ಪುತ್ರಿಯರು, ಓರ್ವ ಪುತ್ರನನ್ನ ಅಗಲಿದ್ದಾರೆ.

Mangalore Talapady toll plaza security guards body found in an isolated lake. The Deceased has been identified as Rajesh Shjeety (54). Rajesh who has joined the duty in the morning at Toll Plaza was found dead in the lake. The Ullal police are now investigating the case.