ಬ್ರೇಕಿಂಗ್ ನ್ಯೂಸ್
23-08-21 11:12 pm Mangaluru correspondent ಕರಾವಳಿ
ಮಂಗಳೂರು, ಆಗಸ್ಟ್ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ವಾರದಿಂದಲೇ ಪಿಯುಸಿ ತರಗತಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿದ್ದು ನಿರ್ಧಾರಕ್ಕೆ ಬರಲಾಗಿದೆ.
ಸದ್ಯಕ್ಕೆ ಪಿಯುಸಿ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ. ಗ್ರೇಡೆಡ್ ಆಧರಿಸಿ, ಪಾಳಿಯಂತೆ ತರಗತಿಗಳನ್ನು ವಿಭಜಿಸಿ ಕ್ಲಾಸ್ ನಡೆಸಬೇಕು. ಈ ಬಗ್ಗೆ ಅಧಿಕೃತವಾಗಿ ಜಿಲ್ಲಾಡಳಿತದಿಂದ ಮಾರ್ಗಸೂಚಿ ನೀಡಲಾಗುವುದು ಎಂದು ಸಭೆಯ ಬಳಿಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಅಲ್ಲದೆ, ಪಿಯುಸಿ ತರಗತಿಯ ಫಲಿತಾಂಶ ಆಧರಿಸಿ ಶಾಲೆಗಳನ್ನು ಆರಂಭಿಸಲಾಗುವುದು. ಮುಂದಿನ ಎರಡು ವಾರ ಕಾಲ ಶಾಲೆ ಆರಂಭಿಸುವಂತಿಲ್ಲ. ಆನಂತರ ಶಾಲೆಗಳನ್ನು ನಡೆಸುವ ಬಗ್ಗೆ ಎರಡು ವಾರದ ಬಳಿಕ ನಿರ್ಧರಿಸಲಾಗುವುದು.
ಪಿಯುಸಿ ತರಗತಿ ಆರಂಭಿಸುವುದಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳ ಆರ್ ಟಿಪಿಸಿಆರ್ ಮಾಡಿಸಿ, ನೆಗೆಟಿವ್ ಹೊಂದಿರಬೇಕು. ಆಯಾ ಶಾಲೆಗಳ ಆಡಳಿತ ಮಂಡಳಿ ಈ ಬಗ್ಗೆ ಮುತುವರ್ಜಿ ವಹಿಸಬೇಕು.
ಸದ್ಯಕ್ಕೆ ಹತ್ತರಿಂದ ಹನ್ನೊಂದು ಸಾವಿರ ಟೆಸ್ಟಿಂಗ್ ಆಗ್ತಾ ಇದೆ. ಈ ಹಿಂದೆ ದಿನಕ್ಕೆ ಏಳು ಸಾವಿರ ಪರೀಕ್ಷೆ ಆಗುತ್ತಿದ್ದಾಗ ಪಾಸಿಟಿವ್ ರೇಟ್ 3.9 ಇತ್ತು. ಈಗ ನಾಲ್ಕರಷ್ಟು ಇದೆ. ಇಂದಿನ ಸಭೆಯಲ್ಲಿ ಟೆಸ್ಟಿಂಗನ್ನು ಹೆಚ್ಚಿಸಲು ನಿರ್ಧಾರಕ್ಕೆ ಬರಲಾಗಿದೆ. 14 ರಿಂದ 15 ಸಾವಿರ ಟೆಸ್ಟ್ ಮಾಡಲು ನಿರ್ಧರಿಸಿದ್ದು ಆಮೂಲಕ ಸೋಂಕು ಸಮುದಾಯಕ್ಕೆ ಹರಡಿರುವುದನ್ನು ಪತ್ತೆ ಮಾಡಲಾಗುವುದು. ಪಾಸಿಟಿವ್ ಹೆಚ್ಚು ಬಂದರೂ, ಅದನ್ನು ನಿರ್ವಹಣೆ ಮಾಡುವಷ್ಟು ಸಾಮರ್ಥ್ಯ ಜಿಲ್ಲೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕೇರಳದಿಂದ ಬಂದಿರುವ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಗೆಟಿವ್ ಸರ್ಟಿಫಿಕೇಟ್ ಹೊಂದಿದ್ದರೂ ಕ್ವಾರಂಟೈನ್ ಬಳಿಕ ಪಾಸಿಟಿವ್ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಕಾಲೇಜು ಆಡಳಿತದ ವಿರುದ್ಧ ನೋಟೀಸ್ ನೀಡಲಾಗಿದೆ. ಯಾವ ಲೋಪದಿಂದ ಪಾಸಿಟಿವ್ ಆಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.
Mangalore Next week PUC colleges to start, delay in opening schools states Dc Rajendra Kumar
07-05-24 09:11 pm
HK News Desk
Lok Sabha Elections 2024, Uttar Karnataka Vot...
07-05-24 07:11 pm
Karnataka Bitcoin scam, Srikrishna Ramesh ali...
07-05-24 06:18 pm
Ramesh Jarkiholi, DK Shivakumar, Prajwal Reva...
07-05-24 12:43 pm
ಮಂಡ್ಯದಲ್ಲಿ ಭ್ರೂಣಹತ್ಯೆ ಪ್ರಕರಣ ಜೀವಂತ ! ಪಾಂಡವಪುರ...
07-05-24 11:27 am
07-05-24 10:26 pm
HK News Desk
Solapur Lok Sabha Constituency, Maharashtra,...
07-05-24 08:38 pm
Ram Mandir, Rahul Gandhi, Acharya Pramod Kris...
07-05-24 05:16 pm
Kasaragod Manjeshwar accident, Ambulance: ಮಂಜ...
07-05-24 03:26 pm
ಕನ್ಯಾಕುಮಾರಿ ; ವೇಮೂರ್ ಬೀಚ್ ನಲ್ಲಿ ಐವರು ಮೆಡಿಕಲ್...
06-05-24 09:31 pm
07-05-24 02:34 pm
Mangalore Correspondent
Mangalore Crime News, suicide: ವೆನ್ಲಾಕ್ ಆಸ್ಪತ...
06-05-24 08:17 pm
Lok Sabha election, Prajwal Revanna: ಪ್ರಜ್ವಲ್...
06-05-24 04:54 pm
Prajwal Revanna sex, Congress Shalet Pinto Ma...
06-05-24 02:51 pm
Ksrtc Mangalore, crime: ಸೈಡ್ ಕೊಟ್ಟಿಲ್ಲ ಎಂಬ ಕಾ...
06-05-24 02:14 pm
07-05-24 10:03 pm
HK News Desk
Bangalore Cyber crime: ಸ್ಟಾಕ್ ಮಾರ್ಕೆಟ್ ಹೂಡಿಕೆ...
07-05-24 09:48 pm
Bangalore crime, Robbery: ಊರಿಗೆ ಹೋದ್ಲು ಅಕ್ಕ ;...
07-05-24 02:57 pm
Crime News: ಗಂಡನ ಕೈ - ಕಾಲು ಕಟ್ಟಿ ಸಿಗರೇಟ್ ನಿಂ...
07-05-24 12:53 pm
Crime News, Bangalore: ಕುಡಿದ ಮತ್ತಿನಲ್ಲಿ ತಾಯಿಯ...
07-05-24 12:14 pm