ಸಿಎಂ ಸ್ಥಾನಕ್ಕಾಗಿ ಸೀಟಿ ರವಿ ನೆಹರೂರನ್ನು ಅವಹೇಳನ ಮಾಡುತ್ತಿದ್ದಾರೆ, ಆತನಿಗೆ ಅರೆಹುಚ್ಚು..‌ ಲಂಡನಲ್ಲಿ ಚಿಕಿತ್ಸೆ ಕೊಡಿಸಬೇಕು‌ !

24-08-21 12:05 pm       Mangaluru Correspondent   ಕರಾವಳಿ

ಕೇಂದ್ರದಲ್ಲಿ ಸಚಿವ ಸ್ಥಾನ ಅಥವಾ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ದೃಷ್ಟಿಯಿಂದ ಸಿ.ಟಿ. ರವಿ, ಜವಾಹರಲಾಲ್ ನೆಹರು ಮತ್ತು ಗಾಂಧಿ ಕುಟುಂಬದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿ.ವಿ ಶ್ರೀನಿವಾಸ್ ಕಿಡಿಕಾರಿದ್ದಾರೆ. 

ಮಂಗಳೂರು, ಆಗಸ್ಟ್ 23: ಕೇಂದ್ರದಲ್ಲಿ ಸಚಿವ ಸ್ಥಾನ ಅಥವಾ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ದೃಷ್ಟಿಯಿಂದ ಸಿ.ಟಿ. ರವಿ, ಜವಾಹರಲಾಲ್ ನೆಹರು ಮತ್ತು ಗಾಂಧಿ ಕುಟುಂಬದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡುತ್ತಿದ್ದಾರೆ. ಮೋದಿ, ಅಮಿತ್ ಷಾರನ್ನು ಖುಷಿಪಡಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಿಟಿ ರವಿಗೆ ಅರೆ ಹುಚ್ಚು ಹಿಡಿದಿದೆ ಎಂದು ಯುತ್ ಕಾಂಗ್ರೆಸ್ ಘಟಕದ ರಾಷ್ಟ್ರೀಯ ಅಧ್ಯಕ್ಷ  ಬಿ.ವಿ ಶ್ರೀನಿವಾಸ್ ಕಿಡಿಕಾರಿದ್ದಾರೆ. 

ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಿ.ವಿ ಶ್ರೀನಿವಾಸ್, ಸಿಟಿ ರವಿ ದೇಶದ ಪ್ರಥಮ ಪ್ರಧಾನಿ ನೆಹರು ಅವರ ಬಗ್ಗೆ ಹಾಗು ಗಾಂಧಿ ಕುಟುಂಬದ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಪ್ರಧಾನಿ ಮೋದಿ, ಅಮಿತ್ ಷಾ ಅವರನ್ನು ಖುಷಿ ಪಡಿಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.‌ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಅರೆ ಹಚ್ಚು ಹಿಡಿದಿದೆ.‌ ಅವರ ಹುಚ್ಚನ್ನು ಸರಿಪಡಿಸಲು ಯುತ್ ಕಾಂಗ್ರೆಸ್ ಸಿದ್ಧವಿದೆ. ರವಿ ಅವರನ್ನು ಲಂಡನ್ ಗೆ ಕಳುಹಿಸಿ ಚಿಕಿತ್ಸೆ ಕೊಡಿಸಬೇಕು. ಎಷ್ಟು ಖರ್ಚಾದ್ರು ಪರವಾಗಿಲ್ಲ ಚಿಕಿತ್ಸೆಯ ಖರ್ಚು ವೆಚ್ಚವನ್ನು ಯುತ್ ಕಾಂಗ್ರೆಸ್ ಭರಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 

ಬೇಟಿ ಬಚಾವೋ ಬೇಟಿ ಪಡಾವೋ ಕೇಂದ್ರ ಸರಕಾರದ ಯೋಜನೆ. ಆದರೆ ಬೇಟಿಯನ್ನ ಯಾರಿಂದ ಬಚಾವ್ ಮಾಡಬೇಕು ಎಂಬುದೇ ದೊಡ್ಡ ಪ್ರಶ್ನೆ. ಉತ್ತರ ಭಾರತದಲ್ಲಿ ಅತೀ ಹೆಚ್ಚು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಿಜೆಪಿ ನೇತೃತ್ವದ ಸರಕಾರದಲ್ಲಿ ಅತೀ ಹೆಚ್ಚು ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದೆ. ಹೆಚ್ಚಿನ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳೇ ಬಿಜೆಪಿ ಶಾಸಕರು, ಬಿಜೆಪಿ ಎಂಪಿ, ಅವರ ಪರಿವಾರದವರು, ಕಾರ್ಯಕರ್ತರೇ ಆಗಿದ್ದಾರೆ. ಇನ್ನು ಯಾರಿಂದ ಬೇಟಿಯವರನ್ನು ಬಚಾವ್ ಮಾಡಬೇಕು ಎಂಬುದೇ ದೇಶದ ಜನರಿಗೆ ತಿಳಿಯುತ್ತಿಲ್ಲ. ಬೇಟಿ ಪಡಾವೋ, ಬಿಜೆಪಿ ನೇತಾವೋಂಸೆ ಬಚಾವೋ ಅಂತಾಗಬೇಕು ಎಂದು ಚುಚ್ಚಿದ್ದಾರೆ.‌

ಅಫ್ಘಾನಿಸ್ತಾನದಲ್ಲಿ  ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಅಲ್ಲಿಯ ದೃಶ್ಯಗಳು ಭಯ ಹುಟ್ಟಿಸುತ್ತಿವೆ.‌ ಆದರೆ ಈವರೆಗೂ ಕೇಂದ್ರ ಸರಕಾರ ತಾಲಿಬಾನಿಗಳ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ.‌ ಈ ಕೂಡಲೇ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ತಾಲಿಬಾನ್ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿ ವಿ ಶ್ರೀನಿವಾಸ್ ಒತ್ತಾಯಿಸಿದರು.‌

ಕೊರೊನಾ ನಿಯಮ ಉಲ್ಲಂಘಿಸಿದ ಕಾರ್ಯಕರ್ತರು, ಸಮರ್ಥನೆ ! 

ಈ ನಡುವೆ, ಸುದ್ದಿಗೋಷ್ಟಿಗೆ ಆಗಮಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದು ಮತ್ತು ಮಾಸ್ಕ್ ಧರಿಸದೇ ಯುತ್ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರನ್ನು ಬರಮಾಡಿಕೊಳ್ಳಲು ಜಮಾಯಿಸಿದ್ದನ್ನು ಮಾಧ್ಯಮ ಗೋಷ್ಠಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಬಳಿ ಪ್ರಶ್ನೆ ಮಾಡಲಾಯ್ತು. ಆದರೆ, ಮಾಧ್ಯಮ ಪ್ರತಿನಿಧಿಗಳ ಆಕ್ಷೇಪಕ್ಕೆ ಪ್ರತಿಯಾಗಿ ಯುತ್ ಕಾಂಗ್ರೆಸ್ ಕಾರ್ಯಕರ್ತರನ್ನೇ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಸಮರ್ಥಿಸಿಕೊಂಡರು. 

ಎರಡು ಡೋಸ್ ವ್ಯಾಕ್ಸಿನ್ ಪಡೆದವರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಹೀಗೆಂದು ದೆಹಲಿ ಏಮ್ಸ್ ಆಸ್ಪತ್ರೆಯ ಖ್ಯಾತ ವೈದ್ಯರೊಬ್ಬರು ಹೇಳಿದ್ದಾರೆ. ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಮಾಸ್ಕ್ ಹಾಕೋದ್ರಿಂದ ಯಾವುದೇ ರೀತಿಯ ಅನುಕೂಲತೆ ಇಲ್ಲ ಎಂದುವ ಬಿ.ವಿ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. 

ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಯುತ್ ಕಾಂಗ್ರೆಸ್ ಘಟಕದ ರಾಷ್ಟ್ರೀಯ ನಾಯಕರು ಉದ್ಥಟತನದ ರೀತಿಯ ಹೇಳಿಕೆ ನೀಡಿದ್ದಲ್ಲದೆ, ರಾಜ್ಯ ಸರಕಾರದ ನೀತಿಯನ್ನು ಉಲ್ಲಂಘಿಸಲು ಕರೆ ಕೊಟ್ಟಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ, ಮಾಧ್ಯಮ ಗೋಷ್ಠಿಗೆ ಬಂದಿದ್ದ ಮಾಜಿ ಸಚಿವ ಯು.ಟಿ ಖಾದರ್ ಮಾಸ್ಕ್ ಧರಿಸದೇ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

B V Srinivas said, “C T Ravi needs to learn about Jawaharlal Nehru before passing any kind of remarks. Ravi tries to impress Prime Minister Narendra Modi, home minister Amit Shah and BJP national president J P Nadda with such statements so that he gets the state chief minister’s post. Ravi is insane and Congress are ready to send him abroad and bear the expenses for his treatment.”