ಉಡುಪಿ ಡೀಸಿ ಜಗದೀಶ್ ಭಡ್ತಿ ; ಸಿಎಂ ಜಂಟಿ ಕಾರ್ಯದರ್ಶಿಯಾಗಿ ನೇಮಕ, ಉಡುಪಿಗೆ ಕೂರ್ಮ ಎಂ. ರಾವ್ ಹೊಸ ಜಿಲ್ಲಾಧಿಕಾರಿ 

29-08-21 09:20 pm       Udupi Correspondent   ಕರಾವಳಿ

ಎರಡು ವರ್ಷಗಳಿಂದ ಉಡುಪಿ ಜಿಲ್ಲಾಧಿಕಾರಿಯಾಗಿ ಕೊರೊನಾ ನಿರ್ವಹಣೆಯಲ್ಲಿ ದಕ್ಷ ಕಾರ್ಯ ನಿರ್ವಹಣೆ ತೋರಿದ್ದ ಡಾ. ಜಗದೀಶ್ ಭಡ್ತಿ ಪಡೆದಿದ್ದಾರೆ.

ಉಡುಪಿ, ಆಗಸ್ಟ್ 29: ಎರಡು ವರ್ಷಗಳಿಂದ ಉಡುಪಿ ಜಿಲ್ಲಾಧಿಕಾರಿಯಾಗಿ ಕೊರೊನಾ ನಿರ್ವಹಣೆಯಲ್ಲಿ ದಕ್ಷ ಕಾರ್ಯ ನಿರ್ವಹಣೆ ತೋರಿದ್ದ ಡಾ. ಜಗದೀಶ್ ಭಡ್ತಿ ಪಡೆದಿದ್ದಾರೆ. ಜಗದೀಶ್ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು ಉಡುಪಿ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗ ಮಾಡಲಾಗಿದೆ. 

ಉಡುಪಿ ಜಿಲ್ಲಾಧಿಕಾರಿಯಾಗಿ ಕೂರ್ಮ ಎಂ. ರಾವ್ ಅವರನ್ನು ನೂತನ ಜಿಲ್ಲಾಧಿಕಾರಿ ಆಗಿ ನೇಮಕ ಮಾಡಲಾಗಿದೆ. ಈಶಾನ್ಯ ಸಾರಿಗೆ ವಿಭಾಗದಲ್ಲಿ ಕೂರ್ಮ ರಾವ್ ಎಂಡಿ ಆಗಿದ್ದರು. ರಾಜ್ಯ ಸರಕಾರ ಈ ಬಗ್ಗೆ ಆದೇಶ ಹೊರಡಿಸಿದೆ. ಈಶಾನ್ಯ ಸಾರಿಗೆ ವಿಭಾಗದ ಎಂಡಿ ಆಗಿ ಯಶವಂತ ರಾವ್ ಅವರನ್ನು ನೇಮಕ ಮಾಡಲಾಗಿದೆ.

IAS officer Kurma Rao has been appointed new deputy commissioner of Udupi district. He will be replacing the current DC G Jagadeesha. Kurma Rao presently serves as managing director of North Eastern Karnataka Road Transport Corporation (NEKSRTC) in Kalaburagi.