ಬ್ರೇಕಿಂಗ್ ನ್ಯೂಸ್
01-09-21 01:29 pm Mangaluru Correspondent ಕರಾವಳಿ
ಮಂಗಳೂರು, ಸೆ.1: ಫಲ್ಗುಣಿ ನದಿಯಿಂದ ವಿಷಯುಕ್ತ ನೀರನ್ನು ಜನರಿಗೆ ಕುಡಿಯಲು ಕೊಡುತ್ತಿರುವ ವಿಚಾರದ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಕೆಯಾಗಿದ್ದು, ನ್ಯಾಯಾಧೀಶರು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಶೈಲಿ ಬಗ್ಗೆ ಮತ್ತೆ ಗರಂ ಆಗಿದ್ದಾರೆ. ನೀವು ನೀರಿನೊಂದಿಗೆ ವಿಷವನ್ನು ಬೆರಸಿ ಜನರಿಗೆ ಕುಡಿಯಲು ಕೊಡುತ್ತಿದ್ದೀರಾ ಎಂದು ಮಹಾನಗರ ಪಾಲಿಕೆಯನ್ನು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದೆ.
ಮಂಗಳೂರು ತಾಲೂಕಿನ 12 ಗ್ರಾಮಗಳ ವ್ಯಾಪ್ತಿಗೆ ಮರವೂರು ಡ್ಯಾಮಿನಿಂದ ಕುಡಿಯುವ ನೀರನ್ನು ಕೊಡಲಾಗುತ್ತಿದೆ. ಇದರ ಬಗ್ಗೆ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮಲಿನ ನೀರನ್ನು ಕುಡಿಯಲು ಕೊಡುತ್ತಿರುವುದಾಗಿ ಆಕ್ಷೇಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಆನಂತರ ಹೈಕೋರ್ಟ್, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾಧಿಕಾರಕ್ಕೆ ನೀರಿನ ತಪಾಸಣೆಗೆ ಸೂಚನೆ ನೀಡಿತ್ತು. ತಿಂಗಳ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀರಿನಲ್ಲಿ ವಿಷಕಾರಿ ವಸ್ತು ಇರುವ ಬಗ್ಗೆ ಹೈಕೋರ್ಟಿಗೆ ವರದಿಯನ್ನೂ ನೀಡಿದ್ದರು.
ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿಯ ಪರ ವಕೀಲರು ಪ್ರಯೋಗಾಲಯ ವರದಿಯನ್ನು ನ್ಯಾಯಾಧೀಶರ ಮುಂದೆ ಸಲ್ಲಿಸಿದ್ದಾರೆ. ಜಲಾಶಯ ಸೇರುವ ನೀರಿನಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಕಬ್ಬಿಣ, ಗಂಧಕ ರೀತಿಯ ವಿಷಕಾರಿ ಅಂಶಗಳು ಇರುವ ಬಗ್ಗೆ ವರದಿ ನೀಡಿದ್ದರು. ಅಲ್ಲದೆ, ಈ ನೀರನ್ನು ಕುಡಿಯಲು ಬಳಸುವುದು ಸೂಕ್ತವಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಅಲ್ಲದೆ, ಪಚ್ಚನಾಡಿ ತ್ಯಾಜ್ಯ ಶುದ್ಧೀಕರಣ ಘಟಕದಿಂದ ಯಾವುದೇ ರೀತಿಯಲ್ಲಿ ಕಲುಷಿತ ನೀರನ್ನು ಬಿಡಬಾರದು ಎಂದು ಮಂಗಳೂರಿನ ಪರಿಸರ ಅಧಿಕಾರಿಗಳು ವರದಿಯಲ್ಲಿ ಹೇಳಿದ್ದರು.
ವರದಿಯ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಕುಡಿಯುವ ನೀರು ಮಲಿನವಾಗಿರುವುದು ಗಂಭೀರ ವಿಚಾರ. ನೀವು ಜನರಿಗೆ ನೀರಿನೊಂದಿಗೆ ವಿಷ ಬೆರಸಿ ಕೊಡುತ್ತಿದ್ದೀರಾ ? ನದಿಯಲ್ಲಿ ವಿಷಕಾರಿ ಅಂಶಗಳಿವೆ ಅಂದರೆ, ಅದನ್ನೇ ಕುಡಿಯಲು ಕೊಡುತ್ತಿರೋದಾ.. ಶುದ್ಧ ಕುಡಿಯುವ ನೀರಿಗೆ ಏನು ಪರ್ಯಾಯ ವ್ಯವಸ್ಥೆ ಮಾಡಿದ್ದೀರಿ ಎಂದು ರಾಜ್ಯ ಸರಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯನ್ನು ತೀವ್ರವಾಗಿ ಪ್ರಶ್ನೆ ಮಾಡಿದ್ದು, ಮುಂದಿನ ವಿಚಾರಣೆ ದಿನಾಂಕದ ಒಳಗೆ ಪರ್ಯಾಯ ವ್ಯವಸ್ಥೆ ಬಗ್ಗೆ ವರದಿ ನೀಡುವಂತೆ ನಿರ್ದೇಶನ ನೀಡಿದೆ.
Karnataka high court slams MCC over Maravoor dam issue questions if you have drunk poisoned water. The marvoor dam has been polluted by dirty seepage water and has been getting circulated to 12 villages of Mangalore.
29-04-24 06:34 pm
HK News Desk
Prajwal Revanna sex video, HD Kumaraswamy: ಪ್...
29-04-24 04:48 pm
Prajwal Revanna, Jds, Sex videos: ಮೊಮ್ಮಗನ ರಾಸ...
29-04-24 04:19 pm
Prajwal Revanna video case: ಪ್ರಜ್ವಲ್ ರೇವಣ್ಣ...
29-04-24 02:11 pm
BJP MP Sreenivasa Prasad passes away: ಚಾಮರಾಜನ...
29-04-24 11:33 am
29-04-24 12:33 pm
HK News Desk
ನಿಲ್ಲಿಸಿದ್ದ ಟಾಟಾ 407 ವಾಹನಕ್ಕೆ ಡಿಕ್ಕಿ ಹೊಡೆದ ಪಿ...
29-04-24 12:09 pm
ನಾಯಿಮರಿ ನಾಪತ್ತೆ ; 12 ವರ್ಷದ ಬಾಲಕಿ ಆತ್ಮಹತ್ಯೆ
28-04-24 10:35 pm
Alejandra Rodríguez, Miss Universe Buenos Air...
28-04-24 10:51 am
ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ...
27-04-24 05:46 pm
29-04-24 11:05 am
Mangalore Correspondent
Contentful CEO Karthik Rau, Udupi: ಜಗತ್ತಿನ ಮು...
28-04-24 11:03 pm
ಕೇರಳದಲ್ಲಿ ಹಕ್ಕಿಜ್ವರ ಭೀತಿ ; ಕರ್ನಾಟಕದ ಗಡಿ ಜಿಲ್ಲ...
28-04-24 03:36 pm
Mangalore, Congress Mp candidate Padmaraj: ಕಾ...
27-04-24 11:06 pm
loksabha elections 2024, Mangalore: ದಕ್ಷಿಣ ಕನ...
27-04-24 09:43 pm
29-04-24 11:50 am
Bangalore Correspondent
Drugs case, Gujarat coast: ಬೋಟ್ ನಲ್ಲಿ ಸಿಕ್ತು...
28-04-24 09:46 pm
Bangalore crime, Instagram: ತಾಯಿಯ ಫೋಟೋ ಅಶ್ಲೀಲ...
28-04-24 05:22 pm
Bangalore crime, Divorce: ಇನ್ನೊಬ್ಬಳ ಜೊತೆ ಪತಿಯ...
27-04-24 01:37 pm
Mangalore crime, stabbed, Pawan: ಫರಂಗಿಪೇಟೆ ;...
26-04-24 03:59 pm