ಬ್ರೇಕಿಂಗ್ ನ್ಯೂಸ್
13-10-21 11:32 am Mangalore Reporter ಕರಾವಳಿ
ಉಳ್ಳಾಲ, ಅ.13 : ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾನಗರ ಲೇ ಔಟ್ ನಲ್ಲಿ ನಿನ್ನೆ ರಾತ್ರಿ ವಿದ್ಯುತ್ ಕಂಬವೊಂದು ರಸ್ತೆಗುರುಳಿದ್ದು ಮೆಸ್ಕಾಂ ನಿರ್ಲಕ್ಷ್ಯದ ನಡುವೆಯೂ ಭಾರೀ ಅನಾಹುತ ತಪ್ಪಿದೆ.
ಅಂಬಿಕಾ ನಗರದ ಲೇ ಔಟ್ ನ ಬೃಹತ್ ಮೋರಿಯ ಬದಿಯಲ್ಲಿ ಇದ್ದ ವಿದ್ಯುತ್ ಕಂಬವು ನಿನ್ನೆ ರಾತ್ರಿ 11.30 ವೇಳೆಗೆ ರಸ್ತೆಗುರುಳಿ ಬಿದ್ದಿದೆ. ನಿರಂತರ ಮಳೆಯಿಂದಾಗಿ ಮಣ್ಣು ಸಡಿಲಗೊಂಡು ವಿದ್ಯುತ್ ಕಂಬವು ರಸ್ತೆಗುರುಳಿ ಬಿದ್ದಿದೆ. ರಸ್ತೆಯಲ್ಲಿ ವಿದ್ಯುತ್ ಹೈಟೆನ್ಷನ್ ತಂತಿಗಳು ಬಿದ್ದಿದ್ದರೂ ವಿದ್ಯುತ್ ಕಡಿತ ಆಗಿರಲಿಲ್ಲ. ಈ ವೇಳೆ ಸಮಯ ಪ್ರಜ್ಞೆ ಮೆರೆದ ಸ್ಥಳೀಯರು ಮೆಸ್ಕಾಂನವರನ್ನ ಕಾಯದೆ ಪಕ್ಕದ ನಿವಾಸಿ ಲೈನ್ ಮ್ಯಾನ್ ಓರ್ವರನ್ನು ಕರೆಸಿ ವಿದ್ಯುತ್ ಕಡಿತಗೊಳಿಸಿದ್ದಾರೆ. ಘಟನೆಯಿಂದ ಸ್ಥಳೀಯರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ರಸ್ತೆಗೆ ಬಿದ್ದಿರುವ ವಿದ್ಯುತ್ ಕಂಬವನ್ನ ಸರಿಪಡಿಸುವ ಕಾರ್ಯ ನಡೆಯುತ್ತಿದೆ.
ಫೋನ್ ಕರೆ ಸ್ವೀಕರಿಸದ ಮೆಸ್ಕಾಂ ಸಿಬಂದಿ
ವಿದ್ಯುತ್ ಕಂಬ ರಸ್ತೆಗೆ ಬಿದ್ದ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಬೈಕ್ ಸವಾರ ಬಂದಿದ್ದು ಸ್ಥಳೀಯ ಮಹಿಳೆಯೊಬ್ಬರು ಬೊಬ್ಬೆ ಹೊಡೆದು ತಡೆದಿದ್ದಾರೆ. ಪವರ್ ಸಪ್ಲೈ ನಿಲ್ಲಿಸಲು ಲೇ ಔಟ್ ನಿವಾಸಿ ಚರಣ್ ಪೂಜಾರಿಯವರು ಚೆಂಬುಗುಡ್ಡೆ ಮೆಸ್ಕಾಂನ ಸ್ಥಿರ ದೂರವಾಣಿಗೆ ಕರೆ ಮಾಡಿದರೂ ಯಾರೂ ಕರೆಯನ್ನ ಸ್ವೀಕರಿಸದ ಕಾರಣ ಮೆಸ್ಕಾಂನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಸ್ಥಳೀಯರು ಬಳಿಕ ಮೆಸ್ಕಾಂ ಸಿಬ್ಬಂದಿಗಳು ಬರುವವರೆಗೂ ಕಾಯದೆ ಪಕ್ಕದ ನಿವಾಸಿ ಮೆಸ್ಕಾಂನ ಸಿಬ್ಬಂದಿಯೋರ್ವನನ್ನ ಕರೆಸಿ ಪವರ್ ಸಪ್ಲೈ ಸ್ಥಗಿತಗೊಳಿಸಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಫೋನ್ ಕರೆಯನ್ನು ಸ್ವೀಕರಿಸದ ಚೆಂಬುಗುಡ್ಡೆ ಮೆಸ್ಕಾಂ ನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಂಚಾರದ ಲೇ ಔಟ್ ರಸ್ತೆಯಲ್ಲಿ ಹಗಲು ಹೊತ್ತಲ್ಲಿ ಈ ಅವಘಡ ನಡೆದಲ್ಲಿ ಭಾರೀ ಅನಾಹುತವಾಗುವ ಸಂಭವವಿತ್ತು.
Heavy rains in Mangalore electric poles tumble in Someshwara huge danger averted. Residents allege negligence of Mescom.
23-04-24 02:29 pm
Bangalore Correspondent
ಉಚ್ಚಾಟನೆಗೆ ಹೆದರುವುದಿಲ್ಲ ; ಚುನಾವಣೆ ಸ್ಪರ್ಧೆ ಮಾಡ...
23-04-24 11:12 am
Pm Modi, Cm Siddaramaiah: ಕಾಂಗ್ರೆಸ್ ಅಧಿಕಾರಕ್ಕ...
23-04-24 11:07 am
Ticket Garland, CM Siddaramaiah: ಸಿದ್ದರಾಮಯ್ಯಗ...
23-04-24 10:11 am
Dingaleshwar Swamiji Withdraws LS Nomination:...
22-04-24 10:56 pm
22-04-24 10:37 pm
HK News Desk
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
23-04-24 03:18 pm
Mangalore Correspondent
Mangalore Heart Attack, Kolya: ಕೊಲ್ಯ ಮಲಯಾಳ ಕೋ...
23-04-24 02:18 pm
Mla Bharath Shetty, Mangalore, Siddaramaiah:...
23-04-24 01:26 pm
Congress Padmaraj Mangalore: ಬಂಟ್ವಾಳ ತಾಲೂಕಿನ...
23-04-24 12:48 pm
Dinesh Gundu Rao, Ullal, Mangalore: ರಾಜ್ಯಕ್ಕೆ...
23-04-24 12:06 pm
23-04-24 04:52 pm
HK News Desk
Gadag Murder, Arrest; ಗದಗ ನಾಲ್ವರ ಹತ್ಯೆ ಪ್ರಕರಣ...
22-04-24 10:14 pm
Ullal news, Mangalore: ಬೆಂಗಳೂರಿನ ಅನಾಥಾಶ್ರಮ ಹೆ...
19-04-24 10:25 pm
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm