ಬ್ರೇಕಿಂಗ್ ನ್ಯೂಸ್
21-10-21 05:12 pm Mangaluru Correspondent ಕರಾವಳಿ
ಮಂಗಳೂರು, ಅ.21: ಪುಕ್ಕಟೆ ಸಿಕ್ಕರೆ ತನಗೂ ಇರಲಿ, ತನ್ನಪ್ಪನಿಗೂ ಇರಲಿ ಎನ್ನುವ ಈಗಿನ ಕಾಲಮಾನದಲ್ಲಿ ಏನಾದ್ರೂ ದೊಡ್ಡ ಮೌಲ್ಯದ ಗಂಟು ಸಿಕ್ಕರೆ ಅದನ್ನು ಹಿಂದಿರುಗಿಸುವುದುಂಟೇ..? ಒಂದೆರಡು ಬೆರಳೆಣಿಕೆಯ ಮಂದಿಯಷ್ಟೇ ಅಂಥ ಗಂಟು ಸಿಕ್ಕಿದರೂ, ಅದರ ಮೂಲ ವಾರೀಸುದಾರ ಯಾರೆಂದು ಹುಡುಕುವ ಅಥವಾ ಅವರಿಗೆ ತಲುಪಿಸುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿಯ ಪ್ರಸಂಗದಲ್ಲಿ ಇಲ್ಲೊಬ್ಬ ಚಿನ್ನಾಭರಣಗಳಿದ್ದ ಗಂಟನ್ನೇ ಕಳಕೊಂಡಿದ್ದ. ಆದರೆ, ಅದೃಷ್ಟ ನೆಟ್ಟಗಿತ್ತು. ಚಿನ್ನದ ಗಂಟು ಮತ್ತೆ ಪಡೆದಿದ್ದಾನೆ.
ಈ ಪ್ರಸಂಗ ನಡೆದಿದ್ದು ಕುಂದಾಪುರ- ಮಂಗಳೂರು ಎಕ್ಸ್ ಪ್ರೆಸ್ ಬಸ್ಸಿನಲ್ಲಿ. ಕುಂದಾಪುರದಲ್ಲಿ ಬಸ್ ಹತ್ತಿದ್ದ ಯುವಕನೊಬ್ಬ ತೆಕ್ಕಟ್ಟೆಯಲ್ಲಿ ಇಳಿದು ಹೋಗಿದ್ದ. ಕಂಡಕ್ಟರ್ ಆತ ಕುಳಿತಿದ್ದ ಸೀಟು ನೋಡಿದರೆ, ಅಲ್ಲೊಂದು ಬ್ಯಾಗ್ ಇತ್ತು. ಬ್ಯಾಗಿನಲ್ಲಿ ಕರಿಮಣಿ ಸರ, ಮೂರು ಬಳೆಗಳು ಮತ್ತು ಒಂದು ಮೊಬೈಲ್ ಇತ್ತು. ಇದನ್ನು ನೋಡಿದ ಕಂಡೆಕ್ಟರ್ ಏನು ಮಾಡುವುದೆಂದು ತೋಚದೆ ತನ್ನ ಗೆಳೆಯ ಪ್ರತಾಪ್ ಗೆ ಫೋನ್ ಮಾಡಿದ್ದಾರೆ.
ದುರ್ಗಾಂಬಾ ಬಸ್ಸಿನಲ್ಲಿ ಚಾಲಕರಾಗಿರುವ ಪ್ರತಾಪ್, ಬಸ್ಸಿನಲ್ಲಿ ಯಾರಾದ್ರೂ ಪೊಲೀಸರು ಇದ್ದರೆ ಅವರ ಕೈಗೆ ಒಪ್ಪಿಸಿ, ಫೋಟೋ ತೆಗೆದು ಕಳಿಸಿ ಎಂದು ಹೇಳಿದ್ದರು. ಬಸ್ ಕಂಡಕ್ಟರ್ ವಿಟ್ಲ ಮೂಲದ ಗೋಪಾಲ್, ಬಸ್ಸಿನಲ್ಲಿ ನೋಡಿದಾಗ ಕೋಟ ಠಾಣೆಯಲ್ಲಿ ಸಿಬಂದಿ ಆಗಿರುವ ಒಬ್ಬರು ಇದ್ದುದನ್ನು ನೋಡಿ ಚಿನ್ನಾಭರಣದ ಬ್ಯಾಗನ್ನು ಅವರ ಕೈಗೆ ನೀಡಿದ್ದಾರೆ. ಇತ್ತ ಬಸ್ ಡ್ರೈವರ್ ಪ್ರತಾಪ್, ಚಿನ್ನಾಭರಣ ಮತ್ತು ಮೊಬೈಲಿನ ಫೋಟೊವನ್ನು ವಾಟ್ಸಪ್ ಜಾಲತಾಣದಲ್ಲಿ ಹಾಕಿದ್ದು, ಅದರ ಜೊತೆಗೆ ಈ ಚಿನ್ನಾಭರಣದ ಬ್ಯಾಗ್ ಕಳಕೊಂಡವರು ತನ್ನ ನಂಬರಿಗೆ ಕರೆ ಮಾಡುವಂತೆ ತಿಳಿಸಿದ್ದರು. ಅವರದೇ ನಂಬರ್ ಹಾಕಿದ್ದ ಮೆಸೇಜ್ ಉಡುಪಿಯಲ್ಲಿ ವೈರಲ್ ಆಗಿದ್ದು, ಚಿನ್ನ ಕಳಕೊಂಡಿದ್ದ ಯುವಕನಿಗೆ ಸಿಕ್ಕಿತ್ತು.
ಆನಂತರ, ಫೋನ್ ಮಾಡಿದ ಯುವಕನಿಗೆ ಕೋಟ ಠಾಣೆಗೆ ತೆರಳಲು ಸೂಚಿಸಿದ್ದು, ಅಲ್ಲಿ ಚಿನ್ನದ ಮಾಹಿತಿ ನೀಡಿ ಅದನ್ನು ಒಯ್ದಿದ್ದಾನೆ. ಈ ಮೂಲಕ ಚಿನ್ನಾಭರಣದ ಬ್ಯಾಗ್ ಕಳಕೊಂಡಿದ್ದಾತನಿಗೇ ಅದು ಮರಳಿ ಸಿಕ್ಕಿದಂತಾಗಿದೆ. ಚಿನ್ನಾಭರಣವನ್ನು ಮರಳಿ ಅದರ ವಾರೀಸುದಾರನಿಗೆ ಒಪ್ಪಿಸಲು ಬಸ್ ಕಂಡಕ್ಟರ್ ಮತ್ತು ಅವರ ಗೆಳೆಯ ಚಾಲಕ ಪ್ರತಾಪ್ ಮಾಡಿದ ಮಾನವೀಯ ಕಾರ್ಯ ಪ್ರಶಂಸೆಗೆ ಕಾರಣವಾಗಿದೆ.
Kundapura Shreyas Bus conductor Goapl returns a Gold jewelry bag to the passenger who had left it and got down at tekkatte. Prathap Driver of Durgamba Bus suggested Gopal return the bag to Kota Police station. Pratap posted a message on WhatsApp which turned Viral on social media upon which the real owner came to Kota police and collected his belongings.
03-05-24 10:19 pm
Bangalore Correspondent
Jai Shri Ram Congress leader Basheeruddin: ಜೈ...
03-05-24 09:43 pm
Prajwal Revanna, sex scandal, rape: ಗನ್ ತೋರಿಸ...
03-05-24 09:06 pm
AC blast in Kalyan jewellers Bellary: ಬಳ್ಳಾರಿ...
03-05-24 07:41 pm
Raju Gowda, Siddaramaiah, DK Shivakumar: ಡಿಕೆ...
03-05-24 05:15 pm
03-05-24 10:58 pm
HK News Desk
ಸಿಸೇರಿಯನ್ ಮಾಡುವಾಗ ಕೈಕೊಟ್ಟ ಕರೆಂಟ್ ; ಮೊಬೈಲ್ ಟಾ...
03-05-24 10:28 am
Dubai Rain: ದುಬೈನಲ್ಲಿ ಮತ್ತೆ ಭಾರಿ ಮಳೆ ; ಶಾಲೆ,...
03-05-24 10:20 am
Narendra Modi, Rahul Gandhi: ರಾಹುಲ್ ಬಗ್ಗೆ ಪಾಕ...
02-05-24 10:07 pm
Hindu Marriage, Supreme court: ಹಿಂದು ವಿವಾಹ ಎನ...
02-05-24 09:25 pm
03-05-24 08:32 pm
Mangalore Correspondent
Mullai Muhilan Dc Mangalore: ಕುಡಿಯುವ ನೀರು ಪೂರ...
03-05-24 06:31 pm
Lakshadweep to Mangalore Speed boat ship: ಲಕ್...
02-05-24 07:52 pm
Mangalore Yesuraj, AEO, Kukke Subrahmanya Tem...
02-05-24 02:24 pm
Mangalore News, Konaje, Baby: ಐದು ತಿಂಗಳ ಹಸುಗೂ...
01-05-24 08:55 pm
03-05-24 09:57 pm
Mangalore Correspondent
House fire, Lover: ಮೂವರು ಮಕ್ಕಳ ತಾಯಿಯನ್ನ ಮದುವ...
03-05-24 03:21 pm
Mumbai crime, Minor pregnant: ಮದುವೆ ಮುನ್ನವೇ 2...
03-05-24 10:24 am
Mangalore Crime, Drugs Arrest; ಕೋಟೆಕಾರ್ ಬೀರಿಯ...
01-05-24 10:18 pm
Mangalore crime, Court: ಮೆಲ್ಕಾರ್ ಬಳಿ ಕೋಮು ದ್ವ...
01-05-24 06:44 pm