ಬ್ರೇಕಿಂಗ್ ನ್ಯೂಸ್
27-11-21 06:47 pm HK Desk news ಕರಾವಳಿ
ಮಂಗಳೂರು, ನ.27: ಹಿಂದುಗಳು ಭಾವನಾತ್ಮಕವಾಗಿ ಪವಿತ್ರವೆಂದು ನಂಬುವ ನಾಗನ ಕಲ್ಲು ಧ್ವಂಸ ಆಗಿದ್ದರೂ, ಸಂಯಮ ವಹಿಸಿದ್ದಾರೆ. ಬೇರೆ ಧರ್ಮದವರು ತಮ್ಮ ದೇವರುಗಳ ನಿಂದನೆಯಾದ ಸಂದರ್ಭದಲ್ಲಿ ವಿಪರೀತವಾಗಿ ನಡೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಹಾಗೆ ನೋಡಿದರೆ, ಹಿಂದು ಸಂಘಟನೆಗಳ ಕಾರ್ಯಕರ್ತರ ಸಂಯಮ ಮೆಚ್ಚಬೇಕು. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ನಾಗನ ಕಲ್ಲು ಅಪವಿತ್ರಗೊಳಿಸಿದ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿದ ಪೊಲೀಸರನ್ನು ಅಭಿನಂದಿಸುವುದಾಗಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿ ಕರೆದು ಮಾತನಾಡಿದ ಭರತ್ ಶೆಟ್ಟಿ, ಹಾಗೆಂದು ಈ ಘಟನೆಯನ್ನು ಅಷ್ಟಕ್ಕೇ ಬಿಡಬಾರದು. ಪೊಲೀಸರು ಇದರ ಬಗ್ಗೆ ಸಮಗ್ರವಾದ ತನಿಖೆ ಕೈಗೆತ್ತಿಕೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ, ಭಾರೀ ಷಡ್ಯಂತ್ರ ಅಡಗಿದ್ದನ್ನು ಪೊಲೀಸರೇ ಹೇಳಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ, ಇದರ ಹಿಂದೆ ರಾಜಕೀಯ ಪಿತೂರಿ ಇತ್ತು. ಕೋಮು ಗಲಭೆ ಎಬ್ಬಿಸುವ ಮೂಲಕ ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇತ್ತು. ಆರೋಪಿಗಳಲ್ಲಿ ಕೆಲವರು ರಾಜಕೀಯ ನಾಯಕರ ಸಂಬಂಧಿಕರಿದ್ದಾರೆ. ಹೀಗಾಗಿ ಇದರ ಹಿಂದೆ ರಾಜಕೀಯ ಪಕ್ಷಗಳ ಪಿತೂರಿ, ಷಡ್ಯಂತ್ರ ಇರಲಿಕ್ಕಿಲ್ಲ ಎನ್ನಲಾಗುವುದಿಲ್ಲ. ವ್ಯವಸ್ಥಿತ ಸಂಚಿನ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ನಡೆಸಬೇಕೆಂದು ಆಗ್ರಹಿಸುವುದಾಗಿ ಹೇಳಿದರು.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಲವು ತಿಂಗಳುಗಳಿಂದಲೂ ಇದೇ ರೀತಿಯ ಪ್ರಕರಣಗಳು ನಡೆಯುತ್ತಾ ಬಂದಿದೆ. ಕಾವೂರಿನಲ್ಲಿ ಹಲ್ಲೆ ಪ್ರಕರಣವೂ ವಿನಾಕಾರಣ ನಡೆದಿತ್ತು. ಸಮಾಜದಲ್ಲಿ ಅಶಾಂತಿ ಮೂಡಿಸುವುದು, ಗಲಭೆ ಎಬ್ಬಿಸುವ ಕುತಂತ್ರ ಇದರ ಹಿಂದಿರುವುದು ಇಂಥ ಕೃತ್ಯಗಳಿಂದ ಸ್ಪಷ್ಟವಾಗುತ್ತಿದೆ. ರಾಜಕೀಯ ದುರುದ್ದೇಶವೂ ಇದರ ಹಿಂದಿರುವ ಸಾಧ್ಯತೆ ಕಂಡುಬರುತ್ತಿದೆ. ಪದೇ ಪದೇ ಹಿಂದು ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿಯಾಗುತ್ತಿದ್ದು, ಹಿಂದುಗಳ ತಾಳ್ಮೆಯನ್ನು ದೌರ್ಬಲ್ಯ ಅಂತ ಅನಿಸ್ಕೊಳ್ಳುವುದು ಬೇಕಿಲ್ಲ ಎಂದು ಭರತ್ ಶೆಟ್ಟಿ ಹೇಳಿದರು.
Mangalore City North MLA Dr Bharath Y Shetty congratulated the police department for successfully cracking the Naga Bana desecration case. As elections are approaching in less than 2 years, I suspect political conspiracy behind this by the opposition. We also urge to arrest those who helped in the unholy act through financial support. As per information, one of the arrested accused belongs to a political leader’s family. When we see the entire issue, we suspect it to be a political conspiracy,” he said.
02-10-25 03:50 pm
Bangalore Correspondent
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
02-10-25 03:45 pm
HK News Desk
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
02-10-25 11:05 pm
Mangalore Correspondent
Illegal Slaughterhouse in Mangalore: ಬೆನ್ನು ಬ...
02-10-25 10:43 pm
D.K. Shivakumar, Mangaluru Dasara: ದೇವರೇ ನನ್ನ...
02-10-25 11:43 am
Mangalore, Pilinalike 2025: ಪಿಲಿನಲಿಕೆ ಉತ್ಸವಕ್...
01-10-25 11:00 pm
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm