ಬ್ರೇಕಿಂಗ್ ನ್ಯೂಸ್
15-12-21 09:45 pm HK Desk news ಕರಾವಳಿ
ಮಂಗಳೂರು, ಡಿ.15 : ಪಿಎಫ್ಐ ಕಾರ್ಯಕರ್ತರು ಪೊಲೀಸರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಆಂಬುಲೆನ್ಸ್ ನಲ್ಲಿ ಮಾರಕಾಯುಧಗಳನ್ನು ತಂದಿರಿಸಿದ್ದರು. ಸೋಡಾ ಬಾಟ್ಲಿ, ಕಲ್ಲು ಇನ್ನಿತರ ಮಾರಕಾಯುಧಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಡಿವೈಎಸ್ಪಿ ಗಾನ ಕುಮಾರ್, ಬಂಟ್ವಾಳ ಗ್ರಾಮಾಂತರ ಎಸ್ಐ ಪ್ರಸನ್ನ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಇದಲ್ಲದೆ, ಪೊಲೀಸ್ ಠಾಣೆಯ ಮೇಲೆಯೂ ದಾಳಿ ನಡೆಸಿದ್ದು, ಕಲ್ಲು ತೂರಾಟ ನಡೆಸಿ ಕಿಟಕಿ ಗಾಜು ಪುಡಿ ಮಾಡಲಾಗಿದೆ. ಇಲಾಖಾ ವಾಹನಗಳನ್ನು ಕೂಡ ಧ್ವಂಸ ಮಾಡಿದ್ದಾರೆ.
ಉಪ್ಪಿನಂಗಡಿಯಲ್ಲಿ ಪಿಎಫ್ಐ ಕಾರ್ಯಕರ್ತರ ಠಾಣೆಗೆ ಮುತ್ತಿಗೆ, ಲಾಠಿಚಾರ್ಜ್ ಘಟನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಋಷಿಕುಮಾರ್ ಸೋನವಾಣೆ ಪತ್ರಿಕಾ ಹೇಳಿಕೆ ನೀಡಿದ್ದು, ಕಾರ್ಯಕರ್ತರು ಹಲ್ಲೆ ನಡೆಸುವ ಉದ್ದೇಶದಿಂದಲೇ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು ಎಂದು ಹೇಳಿದ್ದಾರೆ. ಕೊಲೆಯತ್ನ ಪ್ರಕರಣ ಸಂಬಂಧಿಸಿ ಮಹಮ್ಮದ್ ಸಿನಾನ್ ಎಂಬಾತನನ್ನು ಡಿ.13ರಂದು ರಾತ್ರಿ ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿಯಂತೆ ಪಿಎಫ್ಐ ಸಂಘಟನೆಯ ಮಹಮ್ಮದ್ ಝಕರಿಯಾ, ಮುಸ್ತಾಫ, ಹಮೀದ್ ಎಂಬವರ ಸಂಚಿನಿಂದ ಕೃತ್ಯ ನಡೆಸಲಾಗಿತ್ತು ಎಂದು ತಿಳಿದುಬಂದಿದ್ದು, ಅವರನ್ನು ಠಾಣೆಗೆ ಬರಹೇಳಿ ವಿಚಾರಣೆ ನಡೆಸಲಾಗಿತ್ತು. ಆದರೆ, ಪಿಎಫ್ಐ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಬೆಳಗ್ಗೆ ಹತ್ತು ಗಂಟೆಯಿಂದಲೇ ಠಾಣೆಯ ಮುಂದೆ ಜಮಾಯಿಸಿದ್ದಾರೆ.
ಈ ಬಗ್ಗೆ ಕಾರ್ಯಕರ್ತರಿಗೆ ತಿಳಿಹೇಳಿದರೂ, ಕೇಳಿರಲಿಲ್ಲ. 11.30ರ ವೇಳೆಗೆ ಪಿಎಸ್ಐ ಅವರು ಮೈಕ್ ನಲ್ಲಿ ಅನೌನ್ಸ್ ಮಾಡಿ, ಕೋವಿಡ್ ನೀತಿ ಉಲ್ಲಂಘಿಸಿ ಜನರು ಒಟ್ಟು ಸೇರಬಾರದೆಂದು ಮತ್ತು ಕೂಡಲೇ ಸ್ಥಳ ಬಿಟ್ಟು ಚದುರಿ ಹೋಗುವಂತೆ ಹೇಳಿದ್ದಾರೆ. ಈ ನಡುವೆ, ಹಮೀದ್ ಎಂಬಾತನನ್ನು ವಿಚಾರಣೆ ನಡೆಸಿ, ನೋಟೀಸ್ ಜಾರಿ ಮಾಡಿ ಮರು ವಿಚಾರಣೆಗೆ ಬರುವಂತೆ ಹೇಳಿ ಬಿಡುಗಡೆ ಮಾಡಲಾಗಿತ್ತು. ಆತನನ್ನು ಉಪ್ಪಿನಂಗಡಿ ಪೇಟೆಯಲ್ಲಿ ಮೆರವಣಿಗೆ ನಡೆಸಿ, ಪೊಲೀಸರ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತಾ ಸಾಗಿದ್ದರು. ಆನಂತರ ನಾಲ್ಕು ಗಂಟೆ ವೇಳೆಗೆ ಮತ್ತೆ 300ರಿಂದ 400ರಷ್ಟು ಮಂದಿ ಬಂಟ್ವಾಳ, ಬೆಳ್ತಂಗಡಿ ಕಡೆಯಿಂದ ಪಿಎಫ್ಐ ಕಾರ್ಯಕರ್ತರು ಬಂದು ಉಪ್ಪಿನಂಗಡಿ ಠಾಣೆಯ ಮುಂದೆ ಸೇರಿದ್ದು, ಝಕರಿಯಾ, ಮುಸ್ತಫಾ, ಸಿನಾನ್ ಅವರನ್ನು ಕೂಡ ಬಿಡುವಂತೆ ಆಗ್ರಹ ಮಾಡಿದ್ದಾರೆ.
ಸಂಜೆಯ ವೇಳೆಗೆ ಪುತ್ತೂರು ತಾಲೂಕು ದಂಡಾಧಿಕಾರಿಯವರು ಸೆಕ್ಷನ್ ಜಾರಿಗೊಳಿಸಿದ್ದು, ಅದರಂತೆ ಕೂಡಲೇ ಚದುರಿ ಹೋಗುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿತ್ತು. ಆದರೂ, ಕಾರ್ಯಕರ್ತರು ನಮ್ಮ ಮನವಿಗೆ ಕಿವಿಕೊಡದೆ ಅಲ್ಲಿಯೇ ಮೊಕ್ಕಾಂ ಹೂಡಿದ್ದು, ಧಿಕ್ಕಾರ ಕೂಗುತ್ತಿದ್ದರು. ಠಾಣೆಯ ಒಳಗೆ ನುಗ್ಗಿ ಬರಲು ಯತ್ನಿಸುತ್ತಿದ್ದರು. ಬಳಿಕ ಪೊಲೀಸರ ಮೇಲೆ ದಾಳಿ ನಡೆಸುವ ರೀತಿಯಲ್ಲಿ ಮುಂದೆ ಬಂದಿದ್ದು, ಈ ವೇಳೆ ಮಹಿಳಾ ಪಿಎಸ್ಐ ಓಮನ ಮತ್ತು ಇತರೇ ಮಹಿಳಾ ಸಿಬಂದಿ ಕಾರ್ಯಕರ್ತರನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಪಿಎಫ್ಐ ಕಾರ್ಯಕರ್ತರು ಪೊಲೀಸರ ಮೇಲೆ ಕೈಮಾಡಿದ್ದು ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಲಾಠಿಚಾರ್ಜ್ ನಡೆಸಿದ್ದಾರೆ.
ಈ ವೇಳೆ, ಆಂಬುಲೆನ್ಸ್ ವಾಹನದಲ್ಲಿ ತಂದಿರಿಸಿದ್ದ ಮಾರಕಾಯುಧಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಬಂಟ್ವಾಳ ಗ್ರಾಮಾಂತರ ಎಸ್ಐ ಪ್ರಸನ್ನ ಅವರ ಕೈಗೆ ಚೂರಿಯಿಂದ ಇರಿದಿದ್ದಾರೆ. ಡಿವೈಎಸ್ಪಿ ಗಾನ ಕುಮಾರ್ ಮೇಲೆ ಕಲ್ಲು ತೂರಾಟದಿಂದ ಗಾಯವಾಗಿರುತ್ತದೆ. ಲಾಠಿಚಾರ್ಜ್ ಬಳಿಕ ಸೇರಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಲ್ಲದೆ, ಮಸೀದಿಯಲ್ಲಿ ಅಡಗಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಕೆಲವರು ಸ್ಥಳದಲ್ಲಿ ನಿಲ್ಲಿಸಿದ್ದ ಇಲಾಖೆಯ ಜೀಪು, ಬೈಕ್ ಗಳನ್ನು ಹಾನಿ ಮಾಡಿದ್ದಾರೆ. ಅವರನ್ನು ಚದುರಿಸುವ ನಿಟ್ಟಿನಲ್ಲಿ ಪೂರ್ಣ ಮಟ್ಟದಲ್ಲಿ ಪ್ರಯತ್ನ ಮಾಡಲಾಗಿರುತ್ತದೆ. ಇವರ ಕೃತ್ಯ ನೋಡಿದರೆ, ಪಿಎಫ್ಐ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದಲೇ ಅಕ್ರಮ ಕೂಟ ಕಟ್ಟಿಕೊಂಡು ಸೇರಿದ್ದರು ಎಂದು ಸ್ಪಷ್ಟವಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.
ಘಟನೆಯಲ್ಲಿ ಸಿಪಿಐ ಉಮೇಶ್ ಉಪ್ಪಳಿಕೆ, ಪಿಎಸ್ಐ ಓಮನ, ಸಿಬಂದಿಗಳಾದ ಕಿರಣ್ ಕುಮಾರ್, ರೇಣುಕಾ, ಶರೀಫ್, ನದಾಫ್, ಶೇಷಾದ್ರಿ, ಹರೀಶ್ ಇವರ ಮೇಲೆ ಹಲ್ಲೆ ನಡೆಸಿದ್ದು, ಸಮವಸ್ತ್ರಗಳನ್ನು ಎಳೆದು ಹರಿದು ಹಾಕಿದ್ದಾರೆ. ಪ್ರಸ್ತುತ ಉಪ್ಪಿನಂಗಡಿಯಲ್ಲಿ ಹೆಚ್ಚುವರಿ ಬಂದೋಬಸ್ತ್ ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರತ್ಯೇಕ ಮೂರು ಎಫ್ಐಆರ್ ಮಾಡಲಾಗಿದೆ ಎಂದು ಎಸ್ಪಿ ಋಷಿಕುಮಾರ್ ಸೋನವಾಣೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
PFI uppinangady laticharge case, Members carried weapons assaulted our police personals says SP. The police resorted to lathi-charge to disperse a crowd of Popular Front of India (PFI) supporters in the coastal Dakshina Kannada district on Tuesday. The PFI supporters were demanding the release of three leaders who were detained at the Uppinangady police station in connection to an attempt-to-murder case. Police sources said that nine policemen, including Puttur Deputy Superintendent of Police Gana P Kumar, and at least 10 PFI members were injured during police action in Uppinangady under Puttur taluk, 53 km from Mangaluru city.
03-05-24 05:15 pm
HK News Desk
Revanna kidnap, rape, Prajwal: ಮಾಜಿ ಸಚಿವ ಎಚ್....
03-05-24 04:29 pm
Bengalore rain, Karnataka: ಬಿಸಿಲ ಝಳಕ್ಕೆ ‘ಬೆಂದ...
03-05-24 04:24 pm
Madhu Bangarappa, Rahul Gandhi: ರಾಹುಲ್ ಗಾಂಧಿ...
03-05-24 03:58 pm
Prajwal Revanna, Rape case: ಪ್ರಜ್ವಲ್ ರೇವಣ್ಣ ವ...
03-05-24 10:34 am
03-05-24 10:28 am
HK News Desk
Dubai Rain: ದುಬೈನಲ್ಲಿ ಮತ್ತೆ ಭಾರಿ ಮಳೆ ; ಶಾಲೆ,...
03-05-24 10:20 am
Narendra Modi, Rahul Gandhi: ರಾಹುಲ್ ಬಗ್ಗೆ ಪಾಕ...
02-05-24 10:07 pm
Hindu Marriage, Supreme court: ಹಿಂದು ವಿವಾಹ ಎನ...
02-05-24 09:25 pm
Senator Danesh Kumar Palyani ; ಪಾಕಿಸ್ತಾನದಲ್ಲಿ...
01-05-24 10:25 pm
03-05-24 06:31 pm
Mangalore Correspondent
Lakshadweep to Mangalore Speed boat ship: ಲಕ್...
02-05-24 07:52 pm
Mangalore Yesuraj, AEO, Kukke Subrahmanya Tem...
02-05-24 02:24 pm
Mangalore News, Konaje, Baby: ಐದು ತಿಂಗಳ ಹಸುಗೂ...
01-05-24 08:55 pm
Hot sun heat, Mangalore temperature; ಕರಾವಳಿಯಲ...
01-05-24 11:43 am
03-05-24 03:21 pm
Bangalore Correspondent
Mumbai crime, Minor pregnant: ಮದುವೆ ಮುನ್ನವೇ 2...
03-05-24 10:24 am
Mangalore Crime, Drugs Arrest; ಕೋಟೆಕಾರ್ ಬೀರಿಯ...
01-05-24 10:18 pm
Mangalore crime, Court: ಮೆಲ್ಕಾರ್ ಬಳಿ ಕೋಮು ದ್ವ...
01-05-24 06:44 pm
Cyber Fraud, Online Crime: ಹೀಗೂ ಮೋಸ ಮಾಡ್ತಾರೆ,...
30-04-24 10:16 pm