ಬ್ರೇಕಿಂಗ್ ನ್ಯೂಸ್
17-01-22 03:12 pm Mangaluru Correspondent ಕರಾವಳಿ
ಮಂಗಳೂರು, ಜ.17: ರಾಜ್ಯ ಸರಕಾರ ಓಮಿಕ್ರಾನ್ ಹೆಸರಲ್ಲಿ ಜನರನ್ನು ಭಯಪಡಿಸುತ್ತಿದ್ದು, ನೈಜ ವಿಚಾರ ಮರೆಮಾಚಿ ಕಳ್ಳಾಟ ಆಡುತ್ತಿದೆ. ಆಮೂಲಕ ರಾಜ್ಯದ ಜನರ ಮೇಲೆ ವೀಕೆಂಡ್ ಕರ್ಫ್ಯೂ ಹೇರಿಕೆ ಮಾಡುತ್ತಿದೆ. ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿನಿಂದ ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಷ್ಟು ಮಂದಿ ಈ ಸೋಂಕಿನಿಂದ ಸತ್ತಿದ್ದಾರೆ ಎಂಬ ನೈಜ ಮಾಹಿತಿ ನೀಡಬೇಕು. ಯಾರು ಕೂಡ ಈ ಸೋಕಿನಿಂದ ಐಸಿಯುಗೆ ದಾಖಲಾಗಿಲ್ಲ ಎನ್ನುವ ಮಾಹಿತಿಯಿದೆ. ಹಾಗಾಗಿ ತಕ್ಷಣವೇ ವೀಕೆಂಡ್ ಕರ್ಫ್ಯೂ ಜಾರಿ ಆದೇಶವನ್ನು ರದ್ದು ಮಾಡಬೇಕೆಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್, ಓಮಿಕ್ರಾನ್ ವೈರಸ್ ನಿಂದ ಯಾವುದೇ ಅಪಾಯ ಇಲ್ಲವೆಂದು ರಾಜ್ಯ ಸರಕಾರಕ್ಕೂ ತಿಳಿದಿದೆ. ಈ ಬಾರಿ ಸೋಂಕಿಗೆ ತುತ್ತಾಗಿ ಯಾರು ಕೂಡ ಸತ್ತಿಲ್ಲ ಎಂಬುದು ಅಧಿಕಾರಸ್ಥರಿಗೆ ತಿಳಿದಿದೆ. ರಾಜ್ಯ ಸರಕಾರ ಜನರ ಒಳಿತಿಗಾಗಿ ವೀಕೆಂಡ್ ಕರ್ಫ್ಯೂ ಹೇರಿಕೆ ಮಾಡಿಲ್ಲ. ಕಾಂಗ್ರೆಸ್ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆ ಹತ್ತಿಕ್ಕುವ ಉದ್ದೇಶದಿಂದ ತರಾತುರಿಯಲ್ಲಿ ಕರ್ಫ್ಯೂ ಜಾರಿ ಮಾಡಿತ್ತು ಎಂದು ಟೀಕಿಸಿದರು.
ವೀಕೆಂಡ್ ಕರ್ಫ್ಯೂನಿಂದಾಗಿ ಸಮಾಜದ ಹಲವು ಸ್ತರದ ಜನರು ತೀವ್ರ ಕಂಗೆಟ್ಟಿದ್ದಾರೆ. ವ್ಯಾಪಾರಿಗಳು, ದಿನಕೂಲಿ ಕಾರ್ಮಿಕರು, ಬಟ್ಟೆ ಅಂಗಡಿ ಇನ್ನಿತರ ವರ್ತಕರು ತ್ರಾಸಕ್ಕೆ ಒಳಗಾಗಿದ್ದಾರೆ. ಕಚೇರಿ ಬಂದ್ ಆಗಿರುವುದರಿಂದ ಹಲವರು ತಮ್ಮ ಉದ್ಯೋಗ ಕಳಕೊಳ್ಳುವ ಭೀತಿಯಲ್ಲಿದ್ದಾರೆ. ರಾಜ್ಯ ಸರಕಾರ ಜನರಲ್ಲಿ ಭಯ ಮೂಡಿಸುವುದರ ಬದಲು ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು. ಜಿಲ್ಲಾಸ್ಪತ್ರೆ ವೆನ್ಲಾಕ್ ನಲ್ಲಿ ಸಿಬಂದಿ ಕೊರತೆಯಿಂದ ತೀವ್ರ ಸಂಕಷ್ಟ ಎದುರಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ತಾಂತ್ರಿಕ ಸಿಬಂದಿಯೇ ಇಲ್ಲ. ಹುದ್ದೆಗಳ ಭರ್ತಿ ಮಾಡಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ಹೇಳಿದರು.
ಕೇಂದ್ರ ಸರಕಾರ ಗಣರಾಜ್ಯ ದಿನಕ್ಕೆ ನಾರಾಯಣ ಗುರುಗಳ ಟ್ಯಾಬ್ಲೋ ಹಾಕಲು ನಿರಾಕರಣೆ ಮಾಡಿರುವ ಕ್ರಮವನ್ನು ಖಂಡಿಸಿದ ಯುಟಿ ಖಾದರ್, ಕೇಂದ್ರ ಸರಕಾರ ಈಮೂಲಕ ನಾರಾಯಣ ಗುರುಗಳ ಚಿಂತನೆ, ಸಂದೇಶಗಳನ್ನು ನಿರಾಕರಿಸಿದೆ ಎನ್ನುವಂತಾಗಿದೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
LA U T Khader demanded the state government to withdraw the weekend curfew. Addressing media here on Monday January 17, Khader said, “The state government is playing hide and seek with the people and instilling fear among public over Omicron. It is well aware that people do not have any risk from the virus and so far not a single death has taken place due to Omicron. The state government took the decision over weekend curfew not to safeguard the public. It was a politically motivated decision to derail Mekedatu padayatra.
07-05-24 12:10 am
Bengaluru Correspondent
ಬಿಜೆಪಿಯಿಂದ ಎಸ್ಸಿ, ಎಸ್ಟಿ, ಮುಸ್ಲಿಂ ಮೊಟ್ಟೆಗಳ ವಿಡ...
06-05-24 05:44 pm
Bengaluru Metro: ನಮ್ಮ ಮೆಟ್ರೋ ರೈಲಿನಲ್ಲಿ ಯುವಕ-ಯ...
06-05-24 03:38 pm
DK Shivakumar Slaps Congress Worker, haveri:...
06-05-24 01:51 pm
R Ashok, Revanna, Prajwal: ರೇವಣ್ಣನನ್ನ ಬಂಧಿಸಿರ...
05-05-24 10:54 pm
06-05-24 09:31 pm
HK News Desk
Pune boy dead, cricket: ಕ್ರಿಕೆಟ್ ಆಡುವಾಗ ಖಾಸಗ...
06-05-24 12:23 pm
Accident in Rajasthan: ದೇವರ ದರ್ಶನಕ್ಕೆ ತೆರಳುತ್...
05-05-24 11:51 am
Priyanka Gandhi, Narendra modi, Rahul Gandi:...
04-05-24 03:41 pm
Puri Lok Sabha: ಸೂರತ್, ಇಂದೋರ್ ಬಳಿಕ ಒಡಿಶಾದ ಪುರ...
04-05-24 03:27 pm
06-05-24 08:17 pm
Mangalore Correspondent
Lok Sabha election, Prajwal Revanna: ಪ್ರಜ್ವಲ್...
06-05-24 04:54 pm
Prajwal Revanna sex, Congress Shalet Pinto Ma...
06-05-24 02:51 pm
Ksrtc Mangalore, crime: ಸೈಡ್ ಕೊಟ್ಟಿಲ್ಲ ಎಂಬ ಕಾ...
06-05-24 02:14 pm
Konkani writer Ronald Sequeira mangalore: ಹಿರ...
06-05-24 01:30 pm
05-05-24 02:44 pm
HK News Desk
K P K Jeyakumar Dhanasingh: ತಿರುನಲ್ವೇಲಿ ಜಿಲ್ಲ...
04-05-24 11:03 pm
Hubballi Crime Rape Minor, Arrest; ಹುಬ್ಬಳ್ಳಿ...
04-05-24 12:23 pm
Mangalore Fake CBI Call, Crime, Online fraud:...
03-05-24 09:57 pm
House fire, Lover: ಮೂವರು ಮಕ್ಕಳ ತಾಯಿಯನ್ನ ಮದುವ...
03-05-24 03:21 pm