ಬ್ರೇಕಿಂಗ್ ನ್ಯೂಸ್
17-01-22 11:12 pm Mangalore Pillar Woman found dead in well, Family involvement suspected of Murder ಕರಾವಳಿ
ಉಳ್ಳಾಲ, ಜ.17: ಸೋಮೇಶ್ವರ ಗ್ರಾಮದ ಪಿಲಾರು ಶಾಲೆಯ ಬಳಿ 85 ರ ವೃದ್ಧೆಯೋರ್ವರು ಬಾವಿಗೆ ಬಿದ್ದು ಇಂದು ಮಧ್ಯಾಹ್ನ ಅಸಹಜ ಸಾವನ್ನಪ್ಪಿದ್ದು , ಕುಟುಂಬಸ್ಥರು ಮರಣೋತ್ತರ ಪರೀಕ್ಷಾ ವರದಿ ಬರುವ ಮೊದಲೇ ಆಕಸ್ಮಿಕ ಸಾವೆಂದು ಬಿಂಬಿಸಲು ಹೊರಟಿದ್ದಾರೆ.
ಪಿಲಾರು ಸರಕಾರಿ ಶಾಲಾ ಬಳಿಯ ದಿ.ಮಂಜಪ್ಪ ಮೂಲ್ಯ ಅವರ ಪತ್ನಿ ಕಲ್ಯಾಣಿ(85) ಬಾವಿಗೆ ಬಿದ್ದು ಮೃತಪಟ್ಟ ವೃದ್ಧೆ. ಪತಿ ಮಂಜಪ್ಪ ಅವರು 23 ವರ್ಷಗಳ ಹಿಂದೆ ಮೃತಪಟ್ಟಿದ್ದು ಕಲ್ಯಾಣಿ ಅವರು ತನ್ನ ಹಿರಿಯ ಮಗ ಉಮೇಶ್ ಅವರೊಂದಿಗೆ ಪಿಲಾರಿನ ಮನೆಯಲ್ಲಿ ವಾಸವಿದ್ದರು.


ಒಂದು ತಿಂಗಳ ಹಿಂದೆ ಕಲ್ಯಾಣಿ ಅವರು ತನ್ನ ಎರಡನೇ ಮಗ ಶಿಫಾಲಿ ಟ್ರಾವೆಲ್ಸ್ ಬಸ್ಸು ಮಾಲಕ ರಾಮಚಂದ್ರ ಅವರ ಮಂಗಳೂರಿನ ಮನೆಗೆ ನೆಲೆಸಲು ತೆರಳಿದ್ದರು. ಇಂದು ಮಧ್ಯಾಹ್ನ ಅಚಾನಕ್ಕಾಗಿ ರಾಮಚಂದ್ರ ಅವರು ತಾಯಿ ಕಲ್ಯಾಣಿ ಅವರನ್ನ ಪಿಲಾರಿನ ಮನೆಗೆ ತಂದು ಬಿಟ್ಟಿದ್ದರು. ಆನಂತರ ಕೆಲ ಹೊತ್ತಿನಲ್ಲಿ ಘಟನೆ ನಡೆದಿತ್ತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬಾವಿಯಲ್ಲಿದ್ದ ಮೃತದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕಲ್ಯಾಣಿ ಅವರು ಬಾವಿಗೆ ಹೇಗೆ ಬಿದ್ದರೆಂದು ನೋಡಿದ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲ. ಅವರು ಬಿದ್ದು ಮೃತಪಟ್ಟ ಬಾವಿ ಆವರಣವೂ ಆಯತಪ್ಪಿ ಬೀಳದಷ್ಟು ರಕ್ಷಣಾತ್ಮಕ ಸ್ಥಿತಿಯಲ್ಲಿದೆ. ಮೃತರ ಮರಣೋತ್ತರ ಪರೀಕ್ಷೆ ವರದಿ ಬರುವ ಮೊದಲೇ ಕುಟುಂಬಸ್ಥರು ಕಲ್ಯಾಣಿ ಅವರು ನರರೋಗದಿಂದ ಬಳಲುತ್ತಿದ್ದು ದೇಹ ವಾಲಿ ಬಾವಿಗೆ ಬಿದ್ದು ಸತ್ತಿರುವುದಾಗಿ ಬಿಂಬಿಸಲು ಹೊರಟಿದ್ದಾರೆ. ದೇಹವಾಲಿ ಬಾವಿಗೆ ಬಿದ್ದಿದ್ದರೆ ಅವರ ದೇಹ ಛಿದ್ರವಾಗುವ ಸಾಧ್ಯತೆ ಇರುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
Mangalore Pillar old Woman found dead in well, Family involvement suspected of Murder
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm