ಬ್ರೇಕಿಂಗ್ ನ್ಯೂಸ್
04-02-22 05:34 pm Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಫೆ.4 : ಸೆಕ್ಯುಲರ್ ಸೋಗಲ್ಲಿ ಗೋವಿನ ಬದಲು ಹುಲಿಯನ್ನ ರಾಷ್ಟ್ರ ಪ್ರಾಣಿಯನ್ನಾಗಿಸಿದ್ದು ಗೋವಿನ ದುಸ್ಥಿತಿಗೆ ಕಾರಣ. ಅದರ ಪರಿಣಾಮ ಇಂದು ದೇಶದಲ್ಲಿ ರಕ್ತಪಾತ, ಮತಾಂತರಗಳಂತಹ ದುಷ್ಕೃತ್ಯಗಳು ನಿರಂತರವಾಗಿವೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ , ಆರೆಸ್ಸೆಸ್ ಪ್ರಮುಖ್ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಗುರುವಾರ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಗೋಶಾಲೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಹುಲಿಯನ್ನ ರಾಷ್ಟ್ರ ಪ್ರಾಣಿ ಅಂದಾಕ್ಷಣ ಅದನ್ನ ಆರತಿ ಎತ್ತಿ ಪೂಜೆ ಮಾಡಲು ಸಾಧ್ಯವೇ ? ತಾಯಿ ಸಮಾನ ಗೋವಿಗೆ ಮಾತ್ರ ಆ ಪೂಜೆ ಸಲ್ಲಲು ಸಾಧ್ಯ. ಜಾತ್ಯತೀತ ಚಿಂತನೆಯಲ್ಲಿ ಹುಲಿಯನ್ನ ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಿದ್ದಾರೆಯೇ ಹೊರತು ಅದರ ಮೇಲಿನ ಪ್ರೀತಿಯಿಂದಲ್ಲ. ಭಾರತದ ಜನ ಹೆಚ್ಚು ಪ್ರೀತಿಸಿ ಸಾಕಿದ್ದು ದನವನ್ನು. ಸಾವಿರಾರು ವರ್ಷದಿಂದಲೂ ಗೋವು ನಮ್ಮ ಪೂಜನೀಯ ರಾಷ್ಟ್ರ ಪ್ರಾಣಿಯಾಗಿದೆ ಎಂದರು.

ನಾವಿಂದು ಪುರಾಣದ ಬಕಾಸುರನ ಸಾಮ್ರಾಜ್ಯದ ಹಿಂದೂಗಳಾಗಿದ್ದೇವೆ. ಬಕಾಸುರರ ಆಹಾರಕ್ಕಾಗಿ ನಾವೇ ಖುದ್ದು ನಿತ್ಯ ನಿರಂತರ ಗೋವನ್ನ ಒದಗಿಸುತ್ತಿದ್ದೇವೆ. ನಾವೆಲ್ಲ ವಾಸ್ತವ ಅರಿತು ಎಚ್ಚೆತ್ತುಕೊಂಡು ಗೋವಿನ ರಕ್ಷಣೆಗೆ ಸದೃಢ ಹಿಂದು ಸಮಾಜ ಕಟ್ಟಬೇಕಿದೆ. ಸ್ವದೇಶಿ ಹಸುವಿನ ಹಾಲಿಗಿಂತ ಶ್ರೇಷ್ಠ ಯಾವುದೂ ಇಲ್ಲ. ಅದು ತಾಯಿಯ ಎದೆ ಹಾಲಿನ ಸಮಾನವಾಗಿದ್ದು , ಸ್ವದೇಶಿ ಹಸುಗಳ ವೃದ್ಧಿಗೆ ಶ್ರಮಿಸುತ್ತಿರುವ ಅಮೃತಧಾರ ಗೋಶಾಲೆಯ ಬಗ್ಗೆ ಪ್ರಭಾಕರ ಭಟ್ ಪ್ರಶಂಸೆ ವ್ಯಕ್ತ ಪಡಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಮುಖರಾದ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು, ಸೇವಾ ಮನೋಭಾವ ಬೆಳೆಸಿಕೊಂಡಿರುವ ರಾಜಾರಾಂ ಭಟ್ ಅವರು ಗೋ ಸೇವೆಯ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು. ಮಾತಾ ಡೆವಲಪರ್ಸ್ ನ ಮಾಲಕರಾದ ಸಂತೋಷ್ ಶೆಟ್ಟಿ, ಹವ್ಯಕ ಸಂಘದ ಅಧ್ಯಕ್ಷ ನಾಗರಾಜ ಭಟ್ , ಹಿಂದು ಸಂಘಟನೆ ಮುಖಂಡರಾದ ಗಣೇಶ್ ಕೆದಿಲ, ಮಿಥುನ್ ಕಲ್ಲಡ್ಕ, ವಿಜಿತ್ ಶೆಟ್ಟಿ ಉಪಸ್ಥಿತರಿದ್ದರು. ಗೋಶಾಲೆಯ ಸಂಚಾಲಕರಾದ ಟಿ.ಜಿ.ರಾಜಾರಾಮ್ ಭಟ್ ಸ್ವಾಗತಿಸಿ,ಪ್ರಸ್ತಾವಿಸಿದರು.
Mangalore Our cows are slaughtered every day for the meal of Gluttons says Dr Kalladka Prabhakar Bhat speaking at Amruthadara Cow Ashram.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 01:22 pm
HK News Staffer
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
07-09-26 03:42 pm
HK News Staffer
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm
ಪರವಾನಗಿ ಇಲ್ಲದೆ ಔಷಧಿ ದಾಸ್ತಾನು ; ಬೆಂಗಳೂರಿನ ಅಮೆಜ...
06-09-26 10:28 pm
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm