ಬ್ರೇಕಿಂಗ್ ನ್ಯೂಸ್
05-02-22 02:02 pm HK Desk news ಕರಾವಳಿ
ಉಡುಪಿ, ಫೆ.5 : ಉಡುಪಿ ಮತ್ತು ಕುಂದಾಪುರದಲ್ಲಿ ಹಿಜಾಬ್ - ಕೇಸರಿ ವಿವಾದ ತಾರಕಕ್ಕೇರಿದೆ. ಇಂದು ಹಿಂದು ವಿದ್ಯಾರ್ಥಿನಿಯರು ಕೂಡ ಕೇಸರಿ ಶಾಲು ಹಾಕ್ಕೊಂಡು ಕಾಲೇಜಿಗೆ ಬಂದಿದ್ದು ಹೊಸ ತಿಕ್ಕಾಟಕ್ಕೆ ಆಸ್ಪದ ಕೊಟ್ಟಿದ್ದಾರೆ. ಇದೇ ವೇಳೆ, ಕುಂದಾಪುರದ ಖಾಸಗಿ ಆರ್.ಎನ್ ಶೆಟ್ಟಿ ಕಾಲೇಜಿನಲ್ಲು ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಬಂದಿದ್ದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಆರ್.ಎನ್ ಶೆಟ್ಟಿ ಕಾಲೇಜು ಮುಂದೆ ಕೇಸರಿ ಮತ್ತು ಬುರ್ಖಾ ತೊಟ್ಟ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದು ಹೈಡ್ರಾಮಾ ನಡೆಸಿದ್ದಾರೆ. ವಿವಾದ ಏರ್ಪಟ್ಟ ಬಳಿಕ ಆರ್. ಎನ್ ಶೆಟ್ಟಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಹೈಕೋರ್ಟ್ ತೀರ್ಪು ಬರುವ ತನಕವೂ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಕೇಸರಿ ತೊಟ್ಟ ವಿದ್ಯಾರ್ಥಿಗಳು ಜೈಶ್ರೀರಾಮ್, ಹರ ಹರ ಮಹಾದೇವ ಎನ್ನುವ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ್ದಾರೆ. ವಿವಾದ ಜೋರಾಗುತ್ತಲೇ ಆರ್ ಎನ್ ಶೆಟ್ಟಿ ಕಾಲೇಜು ಆಡಳಿತದ ಜೊತೆಗೆ ಪೊಲೀಸರು ಸಭೆ ನಡೆಸಿದ್ದು ಬಳಿಕ ರಜೆ ಘೋಷಿಸುವ ನಿರ್ಧಾರಕ್ಕೆ ಬರಲಾಗಿದೆ.
ಇದೇ ವೇಳೆ, ಕುಂದಾಪುರ ಪೇಟೆಯಲ್ಲಿ ಕೇಸರಿ ಶಾಲು ತೊಟ್ಟು ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸರು ನೇರ ಮನೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲೂ ವಿದ್ಯಾರ್ಥಿನಿಯರು ಕೇಸರಿ ಶಾಲುಗಳನ್ನು ತೊಟ್ಟು ಬಂದಿದ್ದು ಮೆರವಣಿಗೆ ಮಾಡಿದ್ದಾರೆ. ಹಿಜಾಬ್ ಕಳಚುವ ತನಕ ಕೇಸರಿ ತೊಡುತ್ತೇವೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಬೇಡ ಎಂದು ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಪಾರಿಜಾತ ಸರ್ಕಲ್ ನಿಂದ ಭಂಡಾರ್ಕರ್ಸ್ ಕಾಲೇಜ್ ಗೇಟ್ ತನಕ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ಕಾಲೇಜಿಗೆ ತೆರಳಿದ್ದಾರೆ.
ವಿವಾದ ಹಿನ್ನೆಲೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಡಳಿತ ಮಂಡಳಿ ಸದಸ್ಯರು ಪೋಷಕರ ಸಭೆ ನಡೆಸಿದ್ದಾರೆ. ಸಭೆ ಮುಗಿಸಿ ಬಂದ ಪೋಷಕರು, ಮುಸ್ಲಿಂ ವಿದ್ಯಾರ್ಥಿನಿಯರು, ಪ್ರಾಂಶುಪಾಲರಿಗೆ ನಾವು ಮನವಿ ಪತ್ರವನ್ನು ಕೊಟ್ಟಿದ್ದೇವೆ. ತಲೆಗೆ ಸ್ಕಾರ್ಫ್ ತೊಡಲು ಅವಕಾಶ ಕೋರಿದ್ದೇವೆ. ನಾವು ಕುಂದಾಪುರದಲ್ಲಿ ಎಷ್ಟು ವರ್ಷ ಅನ್ಯೋನ್ಯತೆಯಿಂದ ಇದ್ದೆವು. ಈಗ ರಾಜಕೀಯ ಬೆರೆತು ವಿವಾದ ಆಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ನಮಗೆ ಮುಖ್ಯ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
Kundapur hijab row turns ugly college declares holiday, Hindu and Muslim students protest on street. The row over wearing hijab at Government PU College in Kundapura continued for the third day with Principal Raghavendra B G attempting to seal the gate to prevent Muslim girl students from attending classes wearing headscarf on Friday.
18-05-24 10:01 pm
Bangalore Correspondent
Bangalore crime: ತನ್ನ ಮೊಬೈಲ್ ತೆಗೆದು ಗೇಮ್ಸ್ ಆ...
18-05-24 08:20 pm
Dr Dhananjaya Sarji, Vidhan Parishad election...
18-05-24 07:24 pm
Bangalore KSRTC Bus accident, Bridge: ಡ್ರೈವರ್...
18-05-24 04:18 pm
Haveri Lokayukta arrest Police: ಇಸ್ಪೀಟ್ ಆಡಿಸಲ...
18-05-24 10:25 am
18-05-24 10:18 pm
HK News Desk
Pavithra Jayaram, Chandrakanth suicide: ಸೀರಿಯ...
18-05-24 09:15 pm
ಕರೆಂಟ್ ಶಾಕ್ ಹೊಡೆದು ಕುಸಿದು ಬಿದ್ದ ಆರು ವರ್ಷದ ಬಾಲ...
18-05-24 11:54 am
ಮೋದಿ ನೇತೃತ್ವದಲ್ಲಿ ಭಾರತ ಹೊಸ ಎತ್ತರಕ್ಕೆ ಹೋಗಿದೆ,...
17-05-24 09:56 pm
PM Modi, Ayodhya Ram Temple, Yogi Adityanath:...
17-05-24 05:59 pm
18-05-24 10:31 pm
Mangalore Correspondent
Raghupati Bhat, BJP, Mangalore: ಬಿಜೆಪಿಯಲ್ಲಿ ಗ...
18-05-24 05:13 pm
Mangalore Naturals Ice Cream owner, Raghunand...
18-05-24 11:48 am
Mangalore News, Traffic police video: ಪೊಲೀಸ್...
17-05-24 09:17 pm
MLA Ashok Rai Puttur: ಶಾಸಕನಾಗಿ ಒಂದು ವರ್ಷ ; ಜನ...
17-05-24 04:32 pm
18-05-24 04:05 pm
HK News Desk
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm