ಕೆಲಸ ಸಿಗದ ನೋವು ; ಬೇಲೂರಿನ ಅತಿಥಿ ಉಪನ್ಯಾಸಕಿ ನೇಣು ಬಿಗಿದು ಸಾವು 

10-02-22 06:37 pm       HK Desk news   ಕರಾವಳಿ

ಅತಿಥಿ ಉಪನ್ಯಾಸಕಿ ಹುದ್ದೆ ಸಿಗದ ಬೇಸರದಲ್ಲಿ ಬೇಲೂರಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಮಹಿಳೆಯೊಬ್ಬರು ನೇಣಿಗೆ ಶರಣಾಗಿದ್ದಾರೆ.

ಚಿಕ್ಕಮಗಳೂರು, ಫೆ.10 : ಅತಿಥಿ ಉಪನ್ಯಾಸಕಿ ಹುದ್ದೆ ಸಿಗದ ಬೇಸರದಲ್ಲಿ ಬೇಲೂರಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಮಹಿಳೆಯೊಬ್ಬರು ನೇಣಿಗೆ ಶರಣಾಗಿದ್ದಾರೆ.

ಬೇಲೂರಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ವೋದಯ ಕಾಲೇಜಿನಲ್ಲಿ ನಾಲ್ಕು ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಉಮೆಯಾನಿ (30) ಮೃತರು. ತನ್ನ ತಾಯಿ ಮನೆ ಚಿಕ್ಕಮಗಳೂರಿಗೆ ತೆರಳಿದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ಉಮೆಯಾನಿ ಬೇಲೂರಿನ ವೈಡಿಡಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ವೋದಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಾಜ್ಯ ಸರಕಾರ ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಕರೆದು ಸಂದರ್ಶನ ನಡೆಸಿತ್ತು. ಅಲ್ಲದೆ, ರಾಜ್ಯಾದ್ಯಂತ ಹೆಚ್ಚು ಅನುಭವ ಹೊಂದಿದ್ದ ಮತ್ತು ಯುಜಿಸಿ ಅರ್ಹತೆ ಹೊಂದಿದ್ದವರಿಗೆ ಉದ್ಯೋಗ ನೀಡಿತ್ತು. 

ಈ ನೇಮಕಾತಿಗಾಗಿ ಉಮೆಯಾನಿ ಅರ್ಜಿ ಸಲ್ಲಿಸಿದ್ದರೂ ಅಂತಿಮವಾಗಿ ಆಯ್ಕೆಯಾಗಿರಲಿಲ್ಲ. ಇದರಿಂದ ಮನನೊಂದಿದ್ದ ಈಕೆ ಚಿಕ್ಕಮಗಳೂರಿನ ತಾಯಿ ಮನೆಯಲ್ಲಿದ್ದಾಗಲೇ ನೇಣಿಗೆ ಶರಣಾಗಿದ್ದಾರೆ.

Chikmagalur part time teacher commits suicide after she didn't find job. The deceased has been identified as Umiyana (30).