ನರಿಕೊಂಬು ; ಕಲ್ಲಿನ ಕೋರೆಗೆ ಬಿದ್ದು ಪಿಯುಸಿ ವಿದ್ಯಾರ್ಥಿ ಸೇರಿ ಇಬ್ಬರು ಸಾವು ! 

26-02-22 12:30 pm       Mangalore Correspondent   ಕರಾವಳಿ

ಕಲ್ಲಿನ ಕೋರೆಯ ಗುಂಡಿಗೆ ಇಳಿದ ಬಾಲಕನ ಸಹಿತ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ನಡೆದಿದೆ. 

ಬಂಟ್ವಾಳ, ಫೆ.26 : ಕಲ್ಲಿನ ಕೋರೆಯ ಗುಂಡಿಗೆ ಇಳಿದ ಬಾಲಕನ ಸಹಿತ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ನಡೆದಿದೆ. 

ನರಿಕೊಂಬು ಗ್ರಾಮದ ಬೋರುಗುಡ್ಡೆ ನಿವಾಸಿ ಜಗದೀಶ್ (45) ಮತ್ತು ಅಲ್ಲಿಪಾದೆ ನಿವಾಸಿ ನಿದೀಶ್ (16) ಮೃತಪಟ್ಟವರು. ಬಿ.ಸಿ.ರೋಡ್ ಸಮೀಪದ ಗೂಡಿನಬಳಿಯ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾದ ನಿದೀಶ್ ನರಿಕೊಂಬು ಗ್ರಾಮದ ಅಕ್ಕನ ಮನೆಗೆ ತೆರಳಿದ್ದ. ಸಂಜೆ ವೇಳೆ ಇಬ್ಬರು ಸ್ನಾನ ಮಾಡಲೆಂದು ಕಲ್ಲಿನ ಕೋರೆಯ ಗುಂಡಿಯಲ್ಲಿ ತುಂಬಿರುವ ನೀರಿಗೆ ಇಳಿದಿರುವ ಬಗ್ಗೆ ಶಂಕಿಸಲಾಗಿದೆ. 

ರಾತ್ರಿ ವೇಳೆ ಇಬ್ಬರ ಮೃತದೇಹವನ್ನು ಮೇಲೆತ್ತಲಾಗಿದೆ. ಈ ಭಾಗದಲ್ಲಿ ಅಕ್ರಮವಾಗಿ ಕಲ್ಲಿನ ಕೋರೆಗಳು ಕಾರ್ಯಾಚರಿಸುತ್ತಿದ್ದು ಅದೇ ಕಾರಣದಿಂದ ಘಟನೆ ಸಂಭವಿಸಿದೆ‌. ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡದೆ ಮೃತದೇಹವನ್ನು ಸಾಗಿಸಲು ಬಿಡುವುದಿಲ್ಲ ಎಂದು  ಸ್ಥಳೀಯರು ರಾತ್ರಿಯೇ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಂಟ್ವಾಳ ಪೊಲೀಸರು ಭೇಟಿ ನೀಡಿ ಸ್ಥಳೀಯರ ಮನವೊಲಿಸಿದ್ದಾರೆ.

Bantwal Two PUC students drowns in Red stone quarry, dead.