ಕೆಎಸ್ಸಾರ್ಟಿಸಿ ಬಸ್ಸಿನ ರಣವೇಗಕ್ಕೆ ಎಎಸ್ಐ ತಂದೆ, ಮಗಳು ದುರಂತ ಸಾವು ! ಸಂತೆಕಟ್ಟೆಯಲ್ಲಿ ಭೀಕರ ಅಪಘಾತ 

02-03-22 05:01 pm       Udupi Correspondent   ಕರಾವಳಿ

ನಗರದ ಸಂತೆಕಟ್ಟೆ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಬೈಕಿಗೆ ಕೇರಳದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದ್ದು ಬೈಕ್ ಸವಾರಿ ನಡೆಸುತ್ತಿದ್ದ ಎಎಸ್ಐ ತಂದೆ ಮತ್ತು ಅವರ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಉಡುಪಿ, ಮಾ.2: ನಗರದ ಸಂತೆಕಟ್ಟೆ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಬೈಕಿಗೆ ಕೇರಳದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದ್ದು ಬೈಕ್ ಸವಾರಿ ನಡೆಸುತ್ತಿದ್ದ ಎಎಸ್ಐ ತಂದೆ ಮತ್ತು ಅವರ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಕರಾವಳಿ ಕಾವಲು ಪಡೆಯ ಉಡುಪಿ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಗಣೇಶ್ ಪೈ (58) ಹಾಗೂ ಪುತ್ರಿ ಗಾಯತ್ರಿ ಪೈ (27) ಮೃತಪಟ್ಟವರು. ಬುಧವಾರ ಮುಂಜಾನೆ ಘಟನೆ ನಡೆದಿದ್ದು ಹುಬ್ಬಳ್ಳಿಯಿಂದ ಬಂದ ಪುತ್ರಿಯನ್ನು ಬಸ್ ನಿಲ್ದಾಣದಿಂದ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 

ಕೊಲ್ಲೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಬಸ್ ರಣವೇಗದಿಂದ ಡಿಕ್ಕಿ ಹೊಡೆದಿದ್ದು ಬೈಕ್ ದೂರಕ್ಕೆ ಎಸೆಯಲ್ಪಟ್ಟು ತಂದೆ- ಮಗಳು ರಸ್ತೆಗೆ ಬಿದ್ದು ದುರಂತ ಸಾವು ಕಂಡಿದ್ದಾರೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟೋಲ್ ರಸ್ತೆಯಾದ ಬಳಿಕ ಹೆದ್ದಾರಿಯಲ್ಲಿ ವಾಹನಗಳು ರಣವೇಗದಿಂದ ಚಲಿಸುವುದು ಮಾಮೂಲಿ ಆಗಿದ್ದು ಸಂತೆಕಟ್ಟೆಯಲ್ಲಿ ಅಪಘಾತ ಸರಮಾಲೆಯೇ ಎದುರಾಗಿದೆ.

In a road accident which happened on Wednesday March 2 morning near Santhekatte here, a lady and her 58-year-old father lost their lives. The deceased are identified as Gayatri Pai and T Ganesh Pai. Gayatri had arrived from Hubballi. Her father Ganesh, had come to take her home in his two-wheeler. Ganesh was serving as an ASI in the Coastal Security Force.