ಬ್ರೇಕಿಂಗ್ ನ್ಯೂಸ್
08-03-22 01:29 pm Mangalore Correspondent ಕರಾವಳಿ
ಉಳ್ಳಾಲ, ಮಾ.8: ಖಾಸಗಿ ಜಾಗದಲ್ಲಿ ತೆರೆದ ಸ್ಥಿತಿಯಲ್ಲಿರುವ ಆಳ ಬಾವಿಯೊಂದಕ್ಕೆ ಮೇಯಲು ಬಂದ ಹಸು ಮತ್ತು ಕರು ಬಿದ್ದು ಒದ್ದಾಡಿದ ಪ್ರಸಂಗ ನಡೆದಿದ್ದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಮೂಕ ಪ್ರಾಣಿಗಳನ್ನ ಮೇಲಕ್ಕೆತ್ತಿ ಮರುಜೀವ ನೀಡಿದ ಘಟನೆ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿ ನಡೆದಿದೆ.
ಸೋಮೇಶ್ವರ ಗ್ರಾಮದ ಪಿಲಾರು ಮಹಾಲಕ್ಮೀ ಮಂದಿರದ ಬಳಿ ಮಹಮ್ಮದ್ ಹ್ಯಾರಿಸ್ ಎಂಬವರಿಗೆ ಸೇರಿದ ಖಾಲಿ ಜಮೀನಿನಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಹ್ಯಾರಿಸ್ ಅವರ ಖಾಲಿ ಜಮೀನಿಗೆ ಆವರಣ ಗೋಡೆಯನ್ನೂ ನಿರ್ಮಿಸಿಲ್ಲ. ಕಳೆದ ಹತ್ತು ವರುಷದಿಂದ ಜಮೀನಿನಲ್ಲಿರುವ ಆಳ ಬಾವಿಗೂ ಆವರಣ ಗೋಡೆ ನಿರ್ಮಿಸಿಲ್ಲ. ಬಾವಿಯ ಸುತ್ತಲೂ ಗಿಡ ಗಂಟೆಗಳು ಬೆಳೆದಿದ್ದು ಬಾವಿಯ ಇರುವಿಕೆ ಮೂಕ ಪ್ರಾಣಿ ಬಿಡಿ ಮನುಷ್ಯರಿಗೂ ತಿಳಿಯದಾಗಿತ್ತು. ಸೋಮವಾರ ಸಂಜೆ ಚೆಂಬುಗುಡ್ಡೆಯ ಸಾಹುಲ್ ಎಂಬವರ ಸಾಕು ದನ ಮತ್ತು ಅದರ ಕರು ಇಲ್ಲಿಗೆ ಮೇಯಲು ಬಂದು ಆಳ ಬಾವಿಯೊಳಗೆ ಬಿದ್ದಿದೆ. ಬಾವಿಯೊಳಗೆ ಕರು, ಹಸು ಬಿದ್ದುದನ್ನ ಹೊರಗಿದ್ದ ಕರುವು ಕಂಡಿದ್ದು ರೋದಿಸಲು ಆರಂಭಿಸಿದೆ. ಪಶುಗಳ ರೋದನದಿಂದ ಪರಿಸರ ವಾಸಿಗಳಿಗೆ ವಿಚಾರ ತಿಳಿದು ಅಗ್ನಿ ಶಾಮಕ ದಳವರನ್ನ ಸ್ಥಳಕ್ಕೆ ಕರೆಸಿದ್ದಾರೆ.




ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಸು ಮತ್ತು ಕರುವನ್ನ ಮೇಲಕ್ಕೆತ್ತಿದ್ದಾರೆ. ಹಸು ಸ್ವಲ್ಪ ಅಸ್ವಸ್ಥಗೊಂಡಿದ್ದು ಕರು ಆರೋಗ್ಯವಾಗಿದೆ. ಆವರಣ ಗೋಡೆ ಇಲ್ಲದ ಜಾಗದಲ್ಲಿ ಬಾವಿಯನ್ನ ತೆರೆದಿಟ್ಟು ಉದ್ಧಟತನ ತೋರುತ್ತಿರುವ ಮಹಮ್ಮದ್ ಹ್ಯಾರಿಸ್ ವಿರುದ್ಧ ಸಂಬಂಧಪಟ್ಟ ಸೋಮೇಶ್ವರ ಪುರಸಭಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿ ಮುಂದೆಯೂ ಅನಾಹುತಗಳು ನಡೆಯುವ ಸಾಧ್ಯತೆಗಳು ಇದೆ.
Cow and calf fall into the open well at Pillar in Mangalore fire service come to rescue. As the owners haven't created any fense or wall surrounding the well accidentally both Cow and Calf haven into the deep open well.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm