ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ಮಂಗಳೂರಿನ ಪೈಲಟ್ ; ಮೊದಲ ಬಾರಿಗೆ ಬುಡಾಪೆಸ್ಟ್ ತೆರಳಿ ವಿದ್ಯಾರ್ಥಿಗಳನ್ನು ಹೊತ್ತುತಂದ ಏರ್ ಇಂಡಿಯಾ ! 

09-03-22 01:45 pm       Mangalore Correspondent   ಕರಾವಳಿ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಭಾರತ ಸರಕಾರದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಪೈಲಟ್ ಕಾಣಿಸಿಕೊಂಡಿದ್ದಾರೆ. 

ಮಂಗಳೂರು, ಮಾ.9: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಭಾರತ ಸರಕಾರದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಪೈಲಟ್ ಕಾಣಿಸಿಕೊಂಡಿದ್ದಾರೆ. 

ರೊಮೇನಿಯಾದಿಂದ ಮುಂಬೈಗೆ 182 ಮಂದಿ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್ ಆಗಿ ಮಂಗಳೂರಿನ ಕ್ಯಾ. ಮೈಕಲ್ ಸಲ್ದಾನ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಇದಕ್ಕೂ ಮುನ್ನ ಹಂಗೇರಿಯಿಂದ 185 ವಿದ್ಯಾರ್ಥಿಗಳನ್ನು ಕರೆತಂದಿದ್ದ ವಿಮಾನಕ್ಕೆ ಕುವೈತ್ ನಿಂದ ಮುಂಬೈ ವರೆಗೆ ಪೈಲಟ್ ಆಗಿ ಕೆಲಸ ಮಾಡಿದ್ದರು.‌ 

Operation Ganga brings back over 3,700 Indians - The Hindu

‘ಬುಡಾಪೆಸ್ಟ್, ಬುಕಾರೆಸ್ಟ್ ಭಾಗಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೊದಲ ಬಾರಿಗೆ ತೆರಳಿತ್ತು. ದಟ್ಟ ಹಿಮ, ಬೆಟ್ಟ ಗುಡ್ಡ ಪ್ರದೇಶಗಳಿಂದ ಕೂಡಿದ ದೇಶದಲ್ಲಿ ವಿಮಾನ ಚಾಲನೆ ಸವಾಲಾಗಿತ್ತು. ಆದಾಗ್ಯೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಲುಪಿಸಿದ ಬಗ್ಗೆ ಹೆಮ್ಮೆಯಿದೆ ಎಂದು ಮೈಕಲ್ ತಿಳಿಸಿದ್ದಾರೆ.

ಕಳೆದ 13 ವರ್ಷಗಳಿಂದ ಏರ್ ಇಂಡಿಯಾದಲ್ಲಿ ಪೈಲಟ್ ಆಗಿರುವ ಮೈಕಲ್ ಸಲ್ದಾನ ಕೋವಿಡ್ 19- ಸೋಂಕಿನ ಸಂದರ್ಭದಲ್ಲಿ ಭಾರತ ಸರ್ಕಾರದ ‘ವಂದೇ ಮಾತರಂ’ ಕಾರ್ಯಾಚರಣೆಯಲ್ಲಿಯೂ ಪಾಲ್ಗೊಂಡು ದುಬೈನಿಂದ ಭಾರತೀಯರನ್ನು ಕರೆತಂದಿದ್ದರು.

One of the pilots flying planes in ‘Operation Ganga’ with rescued Indians from war-torn Ukraine is a man from Mangaluru. Captain Michael Saldahna who flew two flights to Mumbai with evacuated Indian citizens is a resident of Valencia in Mangaluru. All Indian students who were stuck in Sumy area of war-torn Ukraine have been successfully airlifted through Operation Ganga, the government said on Monday.