ರೈಲು ಡಿಕ್ಕಿ ಹೊಡೆದು ತುಂಬು ಗರ್ಭಿಣಿ ಹಸು ಛಿದ್ರ ; ದನದ ಹೊಟ್ಟೆಯಿಂದ ಎಸೆಯಲ್ಪಟ್ಟ ನವಜಾತ ಕರು ದಾರುಣ ಸಾವು ! ಬಜರಂಗದಳದಿಂದ ಅಂತ್ಯ ಸಂಸ್ಕಾರ 

09-03-22 07:28 pm       Mangalore Correspondent   ಕರಾವಳಿ

​​​​​​​ ರೈಲು ಡಿಕ್ಕಿ ಹೊಡೆದ ಪರಿಣಾಮ ತುಂಬು ಗರ್ಭಿಣಿ ಹಸು ಸೇರಿ ಅದರ ಹೊಟ್ಟೆಯಲ್ಲಿದ್ದ ಕರುವೂ ದಾರುಣ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದ್ದು, ಬಜರಂಗದಳದ ಕಾರ್ಯಕರ್ತರು ಮೃತ ಹಸು ಮತ್ತು ಕರುವಿನ ಅಂತ್ಯ ಸಂಸ್ಕಾರ ನಡೆಸಿದ್ದಾರೆ. 

ಉಳ್ಳಾಲ, ಮಾ.9 : ರೈಲು ಡಿಕ್ಕಿ ಹೊಡೆದ ಪರಿಣಾಮ ತುಂಬು ಗರ್ಭಿಣಿ ಹಸು ಸೇರಿ ಅದರ ಹೊಟ್ಟೆಯಲ್ಲಿದ್ದ ಕರುವೂ ದಾರುಣ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದ್ದು, ಬಜರಂಗದಳದ ಕಾರ್ಯಕರ್ತರು ಮೃತ ಹಸು ಮತ್ತು ಕರುವಿನ ಅಂತ್ಯ ಸಂಸ್ಕಾರ ನಡೆಸಿದ್ದಾರೆ. 

ಇಂದು ಸಂಜೆ ತೊಕ್ಕೊಟ್ಟು ಕಾಪಿಕಾಡು ಎಂಬಲ್ಲಿ ತುಂಬು ಗರ್ಭಿಣಿ ಹಸುವೊಂದು ರೈಲ್ವೇ ಹಳಿ ದಾಟುತ್ತಿದ್ದ ವೇಳೆ ಕೇರಳದಿಂದ ಮಂಗಳೂರಿಗೆ ಧಾವಿಸುತ್ತಿದ್ದ ರೈಲೊಂದು ಢಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಹಸುವಿನ ಹೊಟ್ಟೆಯೊಳಗಿದ್ದ ಕರು ಹೊರಬಂದಿದ್ದು ಸುಮಾರು ಅರ್ಧ ಕಿಲೋ ಮೀಟರ್ ದೂರಕ್ಕೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಲ್ಲದೆ, ತಾಯಿ ಹಸುವು ಛಿದ್ರ, ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಡಿಕ್ಕಿ ಹೊಡೆದು ಹಸು ಮತ್ತು ಕರು ಸಾವನ್ನಪ್ಪಿದ ಕೂಡಲೇ ರೈಲು ಕೂಡ ತೊಕ್ಕೊಟ್ಟಿನಲ್ಲಿ ಹಠಾತ್ತನೆ ನಿಲುಗಡೆಗೊಂಡಿದೆ. 

ಸುದ್ದಿ ತಿಳಿದ ಸ್ಥಳೀಯ ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದು ಕರು ಮತ್ತು ಛಿದ್ರಗೊಂಡ ಹಸುವಿನ ದೇಹದ ಭಾಗಗಳನ್ನು ಒಗ್ಗೂಡಿಸಿ ಅಂತ್ಯ ಸಂಸ್ಕಾರ ನಡೆಸಿದ್ದು ಮಾನವೀಯತೆ ಮೆರೆದಿದ್ದಾರೆ.

Mangalore Pregnant cow dies after train hits while crossing, calf dead in Ullal.