ಬ್ರೇಕಿಂಗ್ ನ್ಯೂಸ್
28-03-22 10:19 pm Mangalore Correspondent ಕರಾವಳಿ
ಮಂಗಳೂರು, ಮಾ.28: ನಗರದಲ್ಲಿ ಕಾಶ್ಮೀರದ ಪಂಡಿತರ ಹತ್ಯಾಕಾಂಡ ಕುರಿತ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡಿದ ಸಂತರು ದಿಗ್ಭ್ರಮೆಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಚಿತ್ರವನ್ನು ನೋಡಿದ ನನಗೆ ರಕ್ತ ಕುದಿಯುತ್ತಿದೆ. ಹಿಂದಿನ ಸರಕಾರದ ದೌರ್ಬಲ್ಯ, ನಿರ್ಲಕ್ಷ್ಯದಿಂದಾಗಿ ಇಷ್ಟೆಲ್ಲಾ ನಡೆದಿದೆ. ಭಯೋತ್ಪಾದಕರ ಕ್ರೌರ್ಯ ಇಲ್ಲಿ ಅನಾವರಣ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕರ ಕರಾಳ ಕ್ರೌರ್ಯವನ್ನು ನೋಡಿ, ಅಲ್ಲಿನ ದೃಶ್ಯಗಳನ್ನು ನೋಡಿ ಸಂತನಾದ ನನಗೇ ಕಣ್ಣೀರು, ಆಕ್ರೋಶ ಬರಬೇಕಾದರೆ ಜನಸಾಮಾನ್ಯರಿಗೆ ಏನಾಗಬಹುದು.. ಕಾಶ್ಮೀರದಲ್ಲಿ ಹಿಂದುಗಳ ಮೇಲೆ ನಡೆದ ಕ್ರೌರ್ಯವನ್ನು ಊಹಿಸಲು ಸಾಧ್ಯವಿಲ್ಲ. ಇದು ಇಲ್ಲಿಗೇ ಕೊನೆಗೊಳ್ಳಬೇಕು. ಮುಂದೆ ಯಾವತ್ತೂ ಕೇರಳ ಫೈಲ್ಸ್, ಕೊಡಗು ಫೈಲ್ಸ್ ನಂತಹ ಸಿನಿಮಾಗಳು ಮತ್ತೆ ಬರುವಂತೆ ಆಗಬಾರದು. ಇದಕ್ಕಾಗಿ ಹಿಂದುಗಳು ಎಚ್ಚತ್ತುಕೊಳ್ಳಬೇಕು. ಹಿಂದುಗಳು ಅಲ್ಪಸಂಖ್ಯಾತರಾದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಈ ಸಿನಿಮಾ ತೋರಿಸುತ್ತದೆ ಎಂದು ವಜ್ರದೇಹಿ ಸ್ವಾಮೀಜಿ ಹೇಳಿದರು.
ಚಿಲಿಂಬಿ ಓಂ ಶಕ್ತಿ ಮಠದ ವಿದ್ಯಾನಂದ ಸ್ವಾಮೀಜಿ ಮಾತನಾಡಿ, ನಿದ್ದೆ ಮಾಡುತ್ತಿರುವ ಹಿಂದುಗಳು ಇನ್ನಾದರೂ ಎಚ್ಚತ್ತುಕೊಳ್ಳಬೇಕು. ಹಿಂದು ಸಂಸ್ಕೃತಿ ಬಲಹೀನವಾದರೆ ಸಮಾಜದಲ್ಲಿ ಸೆಕ್ಯುಲರಿಸಂ ಅನ್ನುವುದೇ ನಾಶವಾಗುತ್ತದೆ. ಹಿಂದು ಸನಾತನ ಸಂಸ್ಕೃತಿಯಿಂದ ಮಾತ್ರ ಸೆಕ್ಯುಲರಿಸಂ ಉಳಿಯಲು ಸಾಧ್ಯ. ಹಿಂದುಗಳ ಸಂಖ್ಯೆ ಕಡಿಮೆಯಾದ ಕೂಡಲೇ ಅವರನ್ನು ಈ ಪರಿ ಚಿತ್ರಹಿಂಸೆ ಕೊಟ್ಟಿದ್ದಾರಂದ್ರೆ ಅದನ್ನು ಊಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಮೂಡುಬಿದಿರೆ ಜೈನ ಮಠದ ಭಟ್ಟಾರಕ ಶ್ರೀ ಮಾತನಾಡಿ, ಸಿನಿಮಾದಲ್ಲಿನ ದೃಶ್ಯಗಳು ಭೀಭತ್ಸವಾಗಿದೆ. ಇಂತಹ ಸ್ಥಿತಿ ಮುಂದೆ ಯಾವತ್ತೂ ಬರಬಾರದು. ಅದಕ್ಕಾಗಿ ಹಿಂದು- ಮುಸ್ಲಿಮರು ಸೌಹಾರ್ದದಿಂದ ಬಾಳಬೇಕು. ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು. ವಿಶ್ವ ಹಿಂದು ಪರಿಷತ್ತಿನಿಂದ ಹತ್ತು ಜನ ಸಂತರು ಮತ್ತು ನೂರಾರು ಕಾರ್ಯಕರ್ತರಿಗೆ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
Mangalore It is because of Congress failure we are seeing Kashmir files movies says Gurupura Vajradehi Swamiji after watching the movie at cinepolis in city center.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm