ಬ್ರೇಕಿಂಗ್ ನ್ಯೂಸ್
12-09-22 10:50 am HK News Desk ಕ್ರೀಡೆ
ನವದೆಹಲಿ, ಸೆ.11: ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯಾಟ ನೋಡಲು ಭಾರತ ಕ್ರಿಕೆಟ್ ತಂಡದ ರೀತಿಯಲ್ಲೇ ಬಟ್ಟೆ ಧರಿಸಿ ತೆರಳಿದ್ದ ಗುಂಪನ್ನು ಅಲ್ಲಿನ ಪೊಲೀಸರು ಮತ್ತು ಭದ್ರತಾ ತಂಡ ಒಳಗೆ ಬಿಟ್ಟಿಲ್ಲವೆಂದು ಆರೋಪ ಕೇಳಿಬಂದಿದೆ.
ಏಷ್ಯಾ ಕಪ್ ಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ಮಧ್ಯೆ ನಡೆದಿತ್ತು. ಪಂದ್ಯಾಟ ನೋಡಲು ಭಾರತೀಯ ಕ್ರಿಕೆಟ್ ತಂಡದ ಪ್ರೇಮಿಗಳಾದ ಗುಂಪೊಂದು ಭಾರತದ ಕ್ರಿಕೆಟ್ ತಂಡ ಹಾಕ್ಕೊಳ್ಳುವ ಬ್ಲೂ ಜೆರ್ಸಿಯನ್ನು ಹಾಕ್ಕೊಂಡು ತೆರಳಿತ್ತು. ಆದರೆ ಪೆವಿಲಿಯನ್ ಒಳಗೆ ಹೋಗಲು ತಂಡವನ್ನು ಬಿಡಲಿಲ್ಲ. ‘’ದ ಭಾರತ್ ಆರ್ಮಿ’’ ಎನ್ನುವ ಗುಂಪು ತಮ್ಮನ್ನು ಒಳಗೆ ಬಿಟ್ಟಿಲ್ಲ ಎಂದು ಭದ್ರತಾ ಸಿಬಂದಿ ತಡೆದು ಹಿಂದೆ ಕಳಿಸಿದ ವಿಡಿಯೋವನ್ನು ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ.

ನಾವು ಭಾರತೀಯರು ಅನ್ನುವ ಕಾರಣಕ್ಕೆ ಒಳಗೆ ಬಿಟ್ಟಿಲ್ಲ. ಈ ರೀತಿ ಮಾಡಬೇಕು ಎನ್ನುವ ನಿರ್ದೇಶನ ಏನಾದ್ರೂ ಕೊಡಲಾಗಿತ್ತೇ. ಅಲ್ಲಿ ಕೇವಲ ಪಾಕಿಸ್ತಾನ ಮತ್ತು ಶ್ರೀಲಂಕಾ ಅಭಿಮಾನಿಗಳು ಮಾತ್ರ ಹೋಗಬೇಕಿತ್ತೇ.. ನಾವು ಭಾರತದ ಪರವಾಗಿ ಬಟ್ಟೆ ಹಾಕ್ಕೊಂಡಿದ್ದೇವೆಂದು ನಮ್ಮನ್ನು ನಿರಾಕರಿಸಿದ್ದರು. ಏನಿದರ ಅರ್ಥ ಎಂದು ತಂಡದ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನಾವು ಕ್ರಿಕೆಟ್ ನೋಡಲು ಬಂದಿದ್ದೆವು. ಆದರೆ ಭದ್ರತಾ ಸಿಬಂದಿ ನಮ್ಮನ್ನು ಹೊರಕ್ಕೆ ತಳ್ಳಿದ್ದಾನೆ. ಇದು ದೊಡ್ಡ ತಪ್ಪು. ನಾವು ಪಾಕಿಸ್ತಾನ ಅಥವಾ ಶ್ರೀಲಂಕಾದ ಅಭಿಮಾನಿಗಳು ಎಂದು ಹೇಳಿಕೊಂಡೇ ಒಳಗೆ ಹೋಗಬೇಕಿತ್ತೇ ಎಂದು ಮತ್ತೊಬ್ಬ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಐಸಿಸಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸೂಪರ್ 4 ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತಿದ್ದರಿಂದ ಪಂದ್ಯಾಟದಿಂದ ಹೊರಬಿದ್ದಿದೆ.
A section of India cricket team fans claimed on Sunday, September 11 that they were denied entry to the Dubai International Cricket Stadium ahead of the Asia Cup 2022 final between Sri Lanka and Pakistan for wearing "India jerseys". In a video that is being shared widely on social media, an Indian fan alleged that supporters wearing the India Blue were being sent back.The Dubai International Stadium was packed to the rafters for Sunday's Asia Cup 2022 final as it had a good presence of both Sri Lanka and Pakistan supporters.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 09:46 pm
HK News Staffer
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
23-03-26 05:36 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದ...
23-03-26 01:11 pm
ಉಡುಪಿಯಲ್ಲಿ ರಾಜಕೀಯ ಕಾದಾಟ ; ಶಾಸಕ ಯಶ್ ಪಾಲ್ ವಿರುದ...
22-03-26 07:30 pm
23-03-26 09:44 pm
HK News Staffer
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm