'ಆನಂದ್‌ ಮಹೀಂದ್ರ'ಗೆ ಧನ್ಯವಾದ ತಿಳಿಸಿದ ವೇಗಿ ಮೊಹಮ್ಮದ್ ಸಿರಾಜ್

05-04-21 12:49 pm       source: MYKHEL   ಕ್ರೀಡೆ

ಭಾರತದ ವೇಗಿ ಮೊಹಮ್ಮದ್ ಸಿರಾಜ್, ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯ ವೇಳೆ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಮಹೀಂದ್ರ ಅವರು ಸಿರಾಜ್‌ಗೂ ಸೇರಿ 6 ಪ್ರತಿಭಾನ್ವಿತ ಆಟಗಾರರಿಗೆ SUV ಜೀಪ್‌ ಉಡುಗೊರೆಯಾಗಿ ನೀಡಿದ್ದರು.

ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಸಿರಾಜ್, ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯ ವೇಳೆ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಮಹೀಂದ್ರ ಅವರು ಸಿರಾಜ್‌ಗೂ ಸೇರಿ 6 ಪ್ರತಿಭಾನ್ವಿತ ಆಟಗಾರರಿಗೆ SUV ಜೀಪ್‌ ಉಡುಗೊರೆಯಾಗಿ ನೀಡಿದ್ದರು.

ಮಹೀಂದ್ರ ಥಾರ್, ನೂತನ SUV ಅನ್ನು ಆನಂದ್ ಮಹೀಂದ್ರ ಅವರು ಸಿರಾಜ್‌ಗೆ ಉಡುಗೊರೆಯಾಗಿ ನೀಡಿದ್ದರು. ಆದರೆ ಖುದ್ದಾಗಿ ತಾನೇ ಬಂದು ಗಿಫ್ಟ್‌ ಸ್ವೀಕರಿಸಲು ಮೊಹಮ್ಮದ್ ಸಿರಾಜ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಸಿರಾಜ್ ಸಹೋದರ ಮತ್ತು ತಾಯಿ ಹೈದರಾಬಾದ್‌ನ ಮಹೀಂದ್ರ ಶೋ ರೂಮ್‌ನಿಂದ ಗಿಫ್ಟ್‌ ಸ್ವೀಕರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗಾಗಿ ಸಿರಾಜ್ ಸದ್ಯ ಚೆನ್ನೈಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬಯೋ ಬಬಲ್‌ ಒಳಗಿರುವುದರಿಂದ ಅವರಿಗೆ ಖುದ್ದಾಗಿ ಬಂದು ಜೀಪ್‌ ಸ್ವೀಕರಿಸಲು ಸಾಧ್ಯವಾಗಿಲ್ಲ. ಆದರೆ ಮಹೀಂದ್ರಗೆ ಧನ್ಯವಾದ ಸಲ್ಲಿಸಿ ಸಿರಾಜ್ ಟ್ವೀಟ್ ಮಾಡಿದ್ದಾರೆ.

'ಈ ಕ್ಷಣದ ಖುಷಿ ವರ್ಣಿಸಲು ನನ್ನ ಪದಗಳು ಸೋಲುತ್ತಿವೆ. ನೀವು ನೀಡಿದ ಸೊಗಸಾದ ಥಾರ್ SUV ಗಿಫ್ಟ್‌ಗಾಗಿ ನಾನು ಏನೂ ಹೇಳಲು, ಮಾಡಲು ಆಗುತ್ತಿಲ್ಲ. ಆ ಭಾವನಗೆಗಳನ್ನು ವ್ಯಕ್ತಪಡಿಸಲು ಆಗುತ್ತಿಲ್ಲ. ಈ ಹೊತ್ತು ನಾನು ದೊಡ್ಡ ಧನ್ಯವಾದಗಳನ್ನಷ್ಟೇ ಹೇಳಬಲ್ಲೆ' ಎಂದು ಸಿರಾಜ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಏಪ್ರಿಲ್ 9ರಂದು ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ಆಡಲಿವೆ.

This News Article Is A Copy Of MYKHEL