ಬ್ರೇಕಿಂಗ್ ನ್ಯೂಸ್
07-07-21 02:42 pm MYKHEL: Madhukara Shetty ಕ್ರೀಡೆ
ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದು ಎರಡು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಕೇಶವ್ ದತ್ ನಿಧನರಾಗಿದ್ದಾರೆ. 95ರ ಹರೆಯದ ಕೇಶವ್ ದತ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೊಲ್ಕತ್ತಾದ ಸಂತೋಷ್ಪುರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾರತೀಯ ಹಾಕಿಯ ಸುವರ್ಣ ಕಾಲದಲ್ಲಿ ಕೇಶವ್ ದತ್ ಭಾರತದ ತಂಡದ ಭಾಗವಾಗಿದ್ದರು. 1948ರ ಒಲಿಂಪಿಕ್ಸ್ನಲ್ಲಿ ಆತಿಥೇಯ ಬ್ರಿಟನ್ ತಂಡವನ್ನು ಲಂಡನ್ನ ವಿಂಬ್ಲೇ ಸ್ಟೇಡಿಯಂನಲ್ಲಿ 4-0 ಅಂತರದಿಂದ ಭಾರತ ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು. ಇದು ಸ್ವತಂತ್ರ ಭಾರತದ ಪ್ರಥಮ ಒಲಿಂಪಿಕ್ಸ್ ಚಿನ್ನದ ಪದಕವಾಗಿತ್ತು, ಈ ತಂಡದ ಸದಸ್ಯರಾಗಿದ್ದರು ಕೇಶವ್ ದತ್. ಇದಕ್ಕೂ ಮುನ್ನ ಕೇಶವ್ ದತ್ 1947ರಲ್ಲಿ ಭಾರತೀಯ ಹಾಕಿಯ ದಂತಕತೆ ಮೇಜರ್ ಧ್ಯಾನ್ಚಂದ್ ಅವರ ನೇತೃತ್ವದಲ್ಲಿ ಪೂರ್ವ ಆಫ್ರಿಕಾಗೆ ಪ್ರವಾಸಕೈಗೊಂಡಿದ್ದರು.
1925ರ ಡಿಸೆಂಬರ್ 29ರಂದು ಈಗ ಪಾಕಿಸ್ತಾನದಲ್ಲಿರುವ ಲಾಹೋರ್ನಲ್ಲಿ ದತ್ ಜನಿಸಿದರು. ಇವರು 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇಲ್ಲಿ ನೆದರ್ಲ್ಯಾಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 6-1 ಅಂತರದಿಂದ ಗೆದ್ದು ಸತತ ಐದನೇ ಬಾರಿಗೆ ಭಾರತ ಒಲಿಂಪಿಕ್ಸ್ ಹಾಕಿ ಚಾಂಪಿಯನ್ ಎನಿಸಿತ್ತು. ಇದು ದತ್ ಅವರ ಎರಡನೇ ಚಿನ್ನದ ಪದಕವಾಗಿತ್ತು. ಕೇಶವ್ ದತ್ ನಿಧನಕ್ಕೆ ಹಾಕಿ ಇಂಡಿಯಾದ ಅಧ್ಯಕ್ಷ ಗ್ಯಾನೇಂದ್ರೋ ನಿಂಗೋಂಬಮ್ ಪ್ರತಿಕ್ರಿಯೆ ನೀಡಿದ್ದಾರೆ. "ಇಂದು ಮುಂಜಾನೆ ದಿಗ್ಗಜ ಹಾಕಿ ಪಟು ಕೇಶವ್ ದತ್ ಅವರ ನಿಧನದ ಸುದ್ದಿ ಕೇಳಿ ಬೇಸರವುಂಟಾಗಿದೆ.
1948 ಹಾಗೂ 1952ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಭಾರತದ ಹಾಕಿ ತಂಡದಲ್ಲಿದ್ದು ಈಗ ಜೀವಂತವಿದ್ದ ಒಬ್ಬರೇ ವ್ಯಕ್ತಿ ಅವರಾಗಿದ್ದರು. ಇಂದು ನಿಜವಾಗಿಯೂ ಒಂದು ಯುಗದ ಅಂತ್ಯವಾದಂತೆ ಭಾಸವಾಗುತ್ತಿದೆ" ಎಂದು ಸ್ಮರಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದಿಗ್ಗಜ ಹಾಕಿ ಆಟಗಾರನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
(Kannada Copy of Mykhel Kannada)
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm