Ipl 2022 Sometimes You Bowl Well But Dont Get Wickets Cant Get Desperate Jasprit Bumrah After Scalping Maiden Five Fer In Ipl.
">ಬ್ರೇಕಿಂಗ್ ನ್ಯೂಸ್
10-05-22 02:24 pm Source: Vijayakarnataka ಕ್ರೀಡೆ
ಜಸ್ಪ್ರಿತ್ ಬುಮ್ರಾ (10ಕ್ಕೆ 5) ಅವರ ಐಪಿಎಲ್ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 52 ರನ್ಗಳಿಂದ ಹೀನಾಯ ಸೋಲು ಅನುಭವಿಸಿತು. ಇದರ ಹೊರತಾಗಿಯೂ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಭಾನುವಾರ ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಆರಂಭ ಪಡೆದಿತ್ತಾದರೂ ಜಸ್ಪ್ರಿತ್ ಬುಮ್ರಾ ಮಾರಕ ದಾಳಿಗೆ ನಲುಗಿ 165 ರನ್ಗಳಿಗೆ ಸೀಮಿತವಾಯಿತು. ಬಳಿಕ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೈಫಲ್ಯದಿಂದಾಗಿ 113 ರನ್ಗಳಿಗೆ ಆಲ್ಔಟ್ ಆಯಿತು.
ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಜಸ್ಪ್ರಿತ್ ಬುಮ್ರಾ, "ಅತ್ಯುತ್ತಮ ಪ್ರದರ್ಶನ ತೋರಿದಾಗ ಸಾಮಾನ್ಯವಾಗಿ ಅತ್ಯುತ್ತಮ ಭಾವನೆಗಳು ಉಟಾಗುತ್ತವೆ. ಆದರೆ, ತಂಡದ ಗೆಲುವು ಇಲ್ಲಿ ತುಂಬಾ ಮುಖ್ಯವಾಗುತ್ತದೆ. ಪಂದ್ಯವನ್ನು ಸುಲಭವಾಗಿ ಗೆದ್ದುಕೊಳ್ಳುವ ಅವಕಾಶವಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ ತನಗೆ ಯಾವುದೇ ಗುರಿಗಳಿಲ್ಲ. ಆದರೆ, ಪ್ರಕ್ರಿಯೆಗೆ ಅಂಟಿಕೊಂಡು ಬೌಲ್ ಮಾಡುವುದಷ್ಟೇ ತಮ್ಮ ಉದ್ದೇಶ," ಎಂದು ಹೇಳಿದರು.
ಒಂದು ಹಂತದಲ್ಲಿ ಕೆಕೆಆರ್ 13 ಓವರ್ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ಆ ಮೂಲಕ ಕೋಲ್ಕತಾ ದೊಡ್ಡ ಮೊತ್ತ ಕಲೆಹಾಕಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಜಸ್ಪ್ರಿತ್ ಬುಮ್ರಾ ಬಿರುಗಾಳಿಯಂತೆ ಬಂದು ಕೆಕೆಆರ್ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಿದರು. ನಿತೀಶ್ ರಾಣಾ, ಆಂಡ್ರೆ ರಸೆಲ್, ಶೆಲ್ಡನ್ ಜಾಕ್ಸನ್, ಪ್ಯಾಟ್ ಕಮಿನ್ಸ್ ಹಾಗೂ ಸುನೀಲ್ ನರೈನ್ ಅವರನ್ನು ಔಟ್ ಮಾಡುವ ಮೂಲಕ ಐಪಿಎಲ್ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು.
"ಕೆಲವೊಮ್ಮೆ ನೀವು ಅತ್ಯುತ್ತಮ ಬೌಲ್ ಮಾಡಿದರೂ ವಿಕೆಟ್ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಹತಾಶರಾಗಬಾರದು. ತಮ್ಮ ಕಡೆಯಿಂದ ಸಾಧ್ಯವಾದಷ್ಟು ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ. ಇನ್ನುಳಿದ ಪಂದ್ಯಗಳಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುವುದು ಹಾಗೂ ಮುಂದಿನ ವರ್ಷಕ್ಕೆ ಅತ್ಯುತ್ತಮ ಪ್ರದರ್ಶನ ತೋರುವ ಕಡೆಗೆ ಗಮನಹರಿಸುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ಲೇಆಫ್ಸ್ನಿಂದ ಮುಂಬೈ ಔಟ್: ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೂ ಆಡಿರುವ 11 ಪಂದ್ಯಗಳಲ್ಲಿ ಕೇವಲ ಎರಡೇ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಪಡೆದಿದ್ದು, ಇನ್ನಳಿದ 9 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಅಧಿಕೃತವಾಗಿ ಪ್ಲೇಆಫ್ಸ್ನಿಂದ ಹೊರ ಬಿದ್ದಿದೆ.
ಬ್ಯಾಟ್ಸ್ಮನ್ಗಳ ವಿರುದ್ಧ ರೋಹಿತ್ ಕಿಡಿ: ಕೆಕೆಆರ್ ವಿರುದ್ಧ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, "ಈ ಪಿಚ್ನಲ್ಲಿ ಎದುರಾಳಿ ತಂಡ ನೀಡಿದ್ದ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದಿತ್ತು. ಬೌಲಿಂಗ್ ವಿಭಾಗವಾಗಿ ನಾವು ಅತ್ಯುತ್ತಮ ಪ್ರಯತ್ನವನ್ನು ಹಾಕಿದ್ದೇವೆ. ಅದರಲ್ಲೂ ವಿಶೇಷವಾಗಿ ಜಸ್ಪ್ರಿತ್ ಬುಮ್ರಾ ಅದ್ಭುತವಾಗಿ ಬೌಲ್ ಮಾಡಿದರು," ಎಂದು ಹೇಳಿದರು.
"ಆದರೆ, ನಮ್ಮ ಬ್ಯಾಟ್ಸ್ಮನ್ಗಳು ಕಳಪೆ ಆಟವನ್ನು ಪ್ರದರ್ಶಿಸಿದ್ದಾರೆ. ಆ ಮೂಲಕ ಭಾರಿ ನಿರಾಶೆ ಮೂಡಿಸಿದ್ದಾರೆ. ನಿಜ ಹೇಳಬೇಕೆಂದರೆ ಈ ಪಿಚ್ನಲ್ಲಿ ಬ್ಯಾಟ್ ಮಾಡುವುದು ಅಷ್ಟೊಂದು ಕಠಿಣ ಇರಲಿಲ್ಲ. ಈ ಮೈದಾನದಲ್ಲಿ ನಮ್ಮದು ನಾಲ್ಕನೇ ಪಂದ್ಯ ಇದಾಗಿದ್ದರಿಂದ ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಹೊಸ ಚೆಂಡಿನಲ್ಲಿ ಸೀಮ್ ಬೌಲರ್ಗಳಿಗೆ ಪಿಚ್ ನೆರವಾಗಲಿದೆ ಎಂಬುದು ಗೊತ್ತಿದೆ. ಆದರೆ, ಬ್ಯಾಟಿಂಗ್ ವಿಭಾಗವಾಗಿ ನಮಗೆ ಜೊತೆಯಾಟಗಳು ಮೂಡಿಬಂದಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.
Ipl 2022 Sometimes You Bowl Well But Dont Get Wickets Cant Get Desperate Jasprit Bumrah After Scalping Maiden Five Fer In Ipl.
17-05-22 09:10 pm
Bangalore Correspondent
ಬೆಂಗಳೂರು 35ನೇ ಪೊಲೀಸ್ ಕಮಿಷನರ್ ಆಗಿ ಪ್ರತಾಪ ರೆಡ್ಡ...
17-05-22 05:19 pm
ದಪ್ಪಗಿದ್ದೇನೆಂದು ಬೊಜ್ಜು ಕರಗಿಸಲು ಫ್ಯಾಟ್ ಸರ್ಜರಿ...
17-05-22 02:42 pm
ಬೆಂಗಳೂರಿನ ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣಕ್ಕೆ...
17-05-22 10:52 am
ಜಾಮಿಯಾ ಮಸೀದಿಗಾಗಿ ಹೈಕೋರ್ಟ್ ಮೆಟ್ಟಿಲೇರಲು ಭಜರಂಗ ಸ...
16-05-22 02:32 pm
16-05-22 05:20 pm
HK Desk News
ಜಗತ್ತಿನ ಸಿರಿವಂತ ಅದಾನಿ ಪತ್ನಿ ರಾಜ್ಯಸಭೆ ಪ್ರವೇಶಕ್...
16-05-22 11:32 am
ಚೀನಾದ ಜಿನ್ ಪಿಂಗ್ ಕೆಳಕ್ಕಿಳಿದರೆ, "ಇನ್ನಿಬ್ಬರು" ಕ...
16-05-22 11:25 am
ನೆರೆ ರಾಷ್ಟ್ರಗಳಲ್ಲಿ ಆಹಾರ ವಸ್ತುಗಳ ಕೊರತೆ ಹಿನ್ನೆ...
14-05-22 09:51 pm
ತಾಜ್ ಮಹಲಿನ ಮುಚ್ಚಿದ ಕೋಣೆಗಳಲ್ಲಿ ಹಿಂದು ವಿಗ್ರಹಗಳಿ...
14-05-22 07:24 pm
17-05-22 07:03 pm
Mangalore Correspondent
ರೈಫಲ್ ತರಬೇತಿ ಕೊಡಿಸಲು ಬಿಹಾರ, ಯುಪಿ ಅಂದ್ಕೊಂಡ್ರಾ....
17-05-22 04:01 pm
ಮೊದಲ ಮಳೆಗೇ ನೆಲಕ್ಕುರುಳಿದ ಶಾಲಾ ಕಟ್ಟಡ ; ಶಿಥಿಲ ಕಟ...
17-05-22 02:18 pm
ಕರಾವಳಿಯಲ್ಲಿ ಸಿಡಿಲು ಸಹಿತ ಮಳೆ ; ದಕ್ಷಿಣ ಕನ್ನಡ, ಉ...
16-05-22 07:17 pm
ಯಾವುದೇ ದೇವಸ್ಥಾನ ಆಕ್ರಮಿಸಿಕೊಂಡಿದ್ದರೆ ಪರಿವರ್ತನೆ...
16-05-22 06:30 pm
17-05-22 03:27 pm
Bangalore Correspondent
ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ, ಮಗ ಕಾರ್ತಿ ಮನೆ,...
17-05-22 01:28 pm
ದೊಣ್ಣೆಯಿಂದ ಹೊಡೆದು ಪತ್ನಿಯ ಕೊಲೆ ! ಆತಹತ್ಯೆಯೆಂದು...
15-05-22 07:07 pm
ಪುಂಜಾಲಕಟ್ಟೆ ; ಅಕ್ರಮ ಗೋಸಾಗಣೆ ಬೆನ್ನಟ್ಟಿ ಹಿಡಿದ ಪ...
15-05-22 06:09 pm
ಕಿಟಕಿ ಗ್ರಿಲ್ಸ್ ನಲ್ಲಿ ಸಾವು ಕಂಡ ಕಾಸರಗೋಡು ಮೂಲದ ಮ...
14-05-22 09:07 pm